ಸೀಮಾಂಧ್ರದ ಭಾವಿ ಸಿಎಂಗೆ ತಡೆಯೊಡ್ಡಿದ ಯುವಕ
ಹೈದರಾಬಾದ್, ಏ.30: ಆಂಧ್ರದಲ್ಲಿ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗೆ ಒಟ್ಟೊಟ್ಟಿಗೆ ಇಂದು ಮತದಾನ ಭರರಿಂದ ನಡೆದಿದೆ. ಈ ಮಧ್ಯೆ ಕೇಂದ್ರ ಸಚಿವರೊಬ್ಬರಿಂದ ಅಚಾತುರ್ಯವೊಂದು ನಡೆದಿದೆ. ಅದಕ್ಕೆ ನವ ಯುವಕರೊಬ್ಬರು ತಪರಾಕಿ ಸಹ ನೀಡಿರುವ ಪ್ರಸಂಗ ನಡೆದಿದೆ.
ಸೀಮಾಂಧ್ರದ ಭಾವಿ ಸಿಎಂ ಎಂದೇ ಅಂದುಕೊಂಡಿರುವ ಕೇಂದ್ರದ ಹಾಲಿ ಸಚಿವ ಚಿರಂಜೀವಿಯನ್ನು ಅವರದೇ ನಾಡಿನಲ್ಲಿ (ತೆಲಂಗಾಣದ ಖೈರಾತಾಬಾದ್ ಮತಗಟ್ಟೆಯಲ್ಲಿ) ಯುವಕನೊಬ್ಬ (ಕಾರ್ತಿಕ್) ಎದುರು ಹಾಕಿಕೊಂಡಿದ್ದಾನೆ. ಯುವಕನ 'ಸಾಹಸಕ್ಕೆ' ಅಪಾರ ಪ್ರಶಂಸೆಗಳು ವ್ಯಕ್ತವಾಗುತ್ತಿದ್ದು, ಆಂಧ್ರದಲ್ಲಿ ಇಂದು ನಡೆಯುತ್ತಿರುವು ಚುನಾವಣೆಯಲ್ಲಿ ಇದೇ ಚರ್ಚೆಯಾಗುತ್ತಿದೆ. ಅಂದಹಾಗೆ ಕಾರ್ತಿಕ್, ಮತ ಚಲಾಯಿಸಲೆಂದೇ ಲಂಡನ್ನಿನಿಂದ ಬಂದ ಎನ್ನಾರೈ.

ಇಷ್ಟಕ್ಕೂ ಇಂದು ಬೆಳಗ್ಗೆ ಏನಾಯಿತೆಂದರೆ ನಟ ಕಮ್ ರಾಜಕಾರಣಿ ಚಿರಂಜೀವಿ ಅವರು ತಮ್ಮ ಪತ್ನಿ, ಪುತ್ರಿ ಮತ್ತು ಪುತ್ರನ ಜತೆಗೂಡಿ ಓಟ್ ಮಾಡಲು ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಮತಗಟ್ಟೆಗೆ ಆಗಮಿಸಿದ್ದಾರೆ. ಆದರೆ ಅಲ್ಲಿ ಕ್ಯೂ ತುಂಬಾ ಉದ್ದಕ್ಕೆ ಇದ್ದುದ್ದರಿಂದ ಜತೆಗೆ ತಾವು ಮುಖ್ಯಮಂತ್ರಿ ಮೆಟೀರಿಯಲ್ ಎಂದು ಭಾವಿಸಿಕೊಂಡು...
ಪಕ್ಕಾ ತೆಲುಗು ಸಿನಿಮಾ ಶೈಲಿಯಲ್ಲಿ ಕ್ಯೂ ಕಡೆ ಕಣ್ಣು ಹಾಯಿಸದೆ ಸೀದಾ ಮತಗಟ್ಟೆ ಪ್ರವೇಶಿಸಲು ಮುಂದಾಗಿದ್ದಾರೆ. ಆದರೆ ಸುಮಾರು ಹೊತ್ತಿನಿಂದ ಕ್ಯೂನಲ್ಲಿ ನಿಂತಿದ್ದ ನವ ಯುವಕನೊಬ್ಬನಿಗೆ ಅದೆಲ್ಲಿತ್ತೋ ಸಿಟ್ಟು ಸೀದಾ ಮುಂದೆ ಮುಂದೆ ಹೋಗುತ್ತಿದ್ದ ಚಿರಂಜೀವಿಯನ್ನು ತಡೆದು 'ಕ್ಯೂ ಪ್ಲೀಸ್' ಅಂದಿದ್ದಾನೆ.
ಸಾವರಿಸಿಕೊಂಡ 58 ವರ್ಷದ ಚಿರು ಏನೇನೋ ಸಬೂಬು ಹೇಳೋಕ್ಕೆ ಯತ್ನಿಸಿದ್ದಾರೆ. ಆದರೆ ಯುವಕ ಗಟ್ಟಿಗ. ಅವೆಲ್ಲಾ ಆಗೋಲ್ಲ. ಮೊದಲು ಕ್ಯೂನಲ್ಲಿ ನಿಂತುಕೊಳ್ಳಿ ಎಂದು ಪಟ್ಟು ಹಿಡಿದಿದ್ದಾನೆ. ನೀವು ಕೇಂದ್ರ ಸಚಿವರಾದರೇನಂತೆ... ನಿಮಗೇನು ವಿಶೇಷ ಟ್ರೀಟ್ಮೆಂಟ್ ಕೊಡಬೇಕಾ? ನೀವೇನು ಸೀನಿಯರ್ ಸಿಟಿಜನ್ನಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾನೆ ಕಾರ್ತೀಕ್. ನಮ್ಮ ಚಿರು ಬಂದ ದಾರಿಗೆ ಸುಂಕವಿಲ್ಲದಂತೆ ಸರದಿಯಲ್ಲಿ ನಿಂತು ಸ್ವಕುಟುಂಬ ಸಮೇತ ಮತ ಚಲಾಯಿಸಿ ಪೆಚ್ಚು ಮೋರೆ ಹಾಕಿಕೊಂಡು ವಾಪಸಾಗಿದ್ದಾರೆ.
ಕ್ಯೂ ಬಿಟ್ಟ ನಟ ಚಿರುಗೆ ತಪರಾಕಿ... ವಿಡಿಯೋ ಇಲ್ಲಿದೆ
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications