ಆಂಧ್ರ ವಿಭಜನೆ ಕಾವು ಟ್ವಿಟ್ಟರ್ ಗೂ ತಟ್ಟಿದೆ
ಬೆಂಗಳೂರು, ಫೆ.19: ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆ ಖಾತ್ರಿಯಾಗುತ್ತಿದ್ದಂತೆ ಆಂಧ್ರಪ್ರದೇಶದಲ್ಲಿ ಪ್ರತಿಭಟನೆಗಳ ಸರಣಿ ಆರಂಭಗೊಂಡಿದೆ. ತೆಲುಗು ಜನರ ಐಕ್ಯತೆಯನ್ನು ಮುರಿಯುವಲ್ಲಿ ಯುಪಿಎ ಸರ್ಕಾರ ಸಫಲವಾಗಿದ್ದು, ಸಂಸತ್ತಿನಲ್ಲಿ ತೆಲಂಗಾಣ ರಾಜ್ಯ ರಚನೆ ವಿಧೇಯಕಕ್ಕೆ ಅಂಗೀಕಾರ ಪಡೆದುಕೊಂಡಿದೆ. ಈ ನಡುವೆ ಆಂಧ್ರ ವಿಭಜನೆ ಕಾವು ಸಾಮಾಜಿಕ ಜಾಲ ತಾಣಗಳಲ್ಲಿ ಹೊತ್ತಿ ಉರಿಯುತ್ತಿದ್ದು, ತೆಲಂಗಾಣ ವಿರೋಧ ಮಾತನಾಡುವ ಗಣ್ಯರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆ ಮಸೂದೆಗೆ ಯುಪಿಎ ಸಚಿವ ಸಂಪುಟ ಅಸ್ತು ಎಂದಿತ್ತು. ಹೈದರಾಬಾದ್ ನಗರವನ್ನು ಎರಡು ರಾಜ್ಯಗಳಿಗೆ ಜಂಟಿ ರಾಜಧಾನಿಯಾಗಲಿದೆ. ರಾಜ್ಯ ರಚನೆ ನಂತರ ನೆಲ, ಜಲ, ಗಡಿ ಇತರೆ ಸಂಪನ್ಮೂಲಗಳ ಹಂಚಿಕೆ ಜತೆಗೆ ಸಿನಿಮಾ ರಂಗದವರಿಗೂ ಕೊಂಚ ತಲೆ ಬಿಸಿಯಾಗಿದೆ. [ಆಂಧ್ರ ಸಿಎಂ ಕಿರಣ್ ರೆಡ್ಡಿ ರಾಜೀನಾಮೆ]
ನಟ ಸಿದ್ದಾರ್ಥ್ ವಿರುದ್ಧ ತೆಲಂಗಾಣ ಅಭಿಮಾನಿಗಳು ಮುಗಿಬಿದ್ದಿದ್ದು, ತೆಲಂಗಾಣಕ್ಕಾಗಿ ಅಮಾಯಕರು ಪ್ರಾಣ ತೆತ್ತಾಗ ನೀನು ಎಲ್ಲಿದ್ದೆ ಎಂದು ನೇರವಾಗಿ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ. ಇನ್ನೂ ನಟ, ರಾಜಕಾರಣಿ ಚಿರಂಜೀವಿ ಅವರು ಹೈದರಾಬಾದ್ ಕಡೆ ತಲೆ ಹಾಕಿ ಮಲಗುವ ಯೋಚಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. [ಆಂಧ್ರ ವಿಭಜನೆ, ಕರ್ನಾಟಕ ದೊಡ್ಡಣ್ಣ, ಲಾಭ ಏನಣ್ಣ?]
@Actor_Siddharth Evadra Nuvvu?? #Telangana ppl suicide cheskunnapudu ekkada unnav
— TelanganaDaruvu (@TelanganaDaruvu) February 19, 2014 ಒಟ್ಟಾರೆ, ರಾಜ್ಯ ಹಾಗೂ ಜನರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ವಿರುದ್ಧ ತೆಲುಗು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಬಂದಿರುವ ಆಕ್ರೋಶ, ಹತಾಶೆ, ಆಕ್ರಂದನದ ನುಡಿಗಳನ್ನು ಇಲ್ಲಿ ನೀಡಲಾಗಿದೆ ನೋಡಿ...

ಆಂಧ್ರ ವಿಭಜನೆ ಕಾವು ಟ್ವಿಟ್ಟರ್ ಗೂ ತಟ್ಟಿದೆ
ತೆಲುಗುದೇಶಂ ಪಾರ್ಟಿ, ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೀದಿಳಿಗಿದು ಸಮೈಕ್ಯಾಂದ್ರಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಸೀಮಾಂಧ್ರ ಹಾಗೂ ಕರಾವಳಿ ಭಾಗಗಳಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ
|
ಜನರೇ ಎಚ್ಚರ ಕಿರಣ್ ಕೂಡಾ ಡ್ರಾಮಾ ಕ್ವೀನ್
ಜನರೇ ಎಚ್ಚರ ಕಿರಣ್ ಕೂಡಾ ಡ್ರಾಮಾ ಕ್ವೀನ್.. ರಾಜೀನಾಮೆ ಕೊಟ್ಟ ತಕ್ಷಣ ಅಖಂಡ ಆಂಧ್ರದ ನಾಯಕನಾಗಲು ಸಾಧ್ಯವಿಲ್ಲ
|
ಇಷ್ಟಕ್ಕೂ ದೇಶದ 29ನೇ ರಾಜ್ಯ ಯಾವುದು?
ತೆಲಂಗಾಣವೋ ಅಥವಾ ಸೀಮಾಂಧ್ರವೋ ಜನರಿಗೆ ಇನ್ನೂ ಗೊಂದಲ ಮುಂದುವರೆದಿದೆ.
|
ಹೈದರಾಬಾದ್ ಕಥೆ ಈಗಲೇ ನಿರ್ಧಾರವಾಗಲಿ
ಸೀಮಾಂಧ್ರ ಹಾಗೂ ತೆಲಂಗಾಣ ಎರಡು ಭಾಗಕ್ಕೂ ಹೈದರಾಬಾದ್ ಬೇಕು. ಕೇಂದ್ರಾಡಳಿತ ಪ್ರದೇಶ ಮಾಡಿಬಿಡಿ
|
ಚಿರಂಜೀವಿ ಮಾತ್ರ ಸೀಟು ಬಿಟ್ಟು ಕದಲಲ್ಲ
ಯಾರು ಬೇಕಾದರೂ ಕುರ್ಚಿ ಬಿಟ್ಟು ಬೀದಿಗಿಳಿಯಲಿ ನಾನಂತೂ ಕುರ್ಚಿ ಬಿಡಲ್ಲ ಎನ್ನುತ್ತಾರೆ ಚಿರಂಜೀವಿ
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications