ಆಂಧ್ರ ವಿಭಜನೆ ಕಾವು ಟ್ವಿಟ್ಟರ್ ಗೂ ತಟ್ಟಿದೆ
ಬೆಂಗಳೂರು, ಫೆ.19: ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆ ಖಾತ್ರಿಯಾಗುತ್ತಿದ್ದಂತೆ ಆಂಧ್ರಪ್ರದೇಶದಲ್ಲಿ ಪ್ರತಿಭಟನೆಗಳ ಸರಣಿ ಆರಂಭಗೊಂಡಿದೆ. ತೆಲುಗು ಜನರ ಐಕ್ಯತೆಯನ್ನು ಮುರಿಯುವಲ್ಲಿ ಯುಪಿಎ ಸರ್ಕಾರ ಸಫಲವಾಗಿದ್ದು, ಸಂಸತ್ತಿನಲ್ಲಿ ತೆಲಂಗಾಣ ರಾಜ್ಯ ರಚನೆ ವಿಧೇಯಕಕ್ಕೆ ಅಂಗೀಕಾರ ಪಡೆದುಕೊಂಡಿದೆ. ಈ ನಡುವೆ ಆಂಧ್ರ ವಿಭಜನೆ ಕಾವು ಸಾಮಾಜಿಕ ಜಾಲ ತಾಣಗಳಲ್ಲಿ ಹೊತ್ತಿ ಉರಿಯುತ್ತಿದ್ದು, ತೆಲಂಗಾಣ ವಿರೋಧ ಮಾತನಾಡುವ ಗಣ್ಯರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆ ಮಸೂದೆಗೆ ಯುಪಿಎ ಸಚಿವ ಸಂಪುಟ ಅಸ್ತು ಎಂದಿತ್ತು. ಹೈದರಾಬಾದ್ ನಗರವನ್ನು ಎರಡು ರಾಜ್ಯಗಳಿಗೆ ಜಂಟಿ ರಾಜಧಾನಿಯಾಗಲಿದೆ. ರಾಜ್ಯ ರಚನೆ ನಂತರ ನೆಲ, ಜಲ, ಗಡಿ ಇತರೆ ಸಂಪನ್ಮೂಲಗಳ ಹಂಚಿಕೆ ಜತೆಗೆ ಸಿನಿಮಾ ರಂಗದವರಿಗೂ ಕೊಂಚ ತಲೆ ಬಿಸಿಯಾಗಿದೆ. [ಆಂಧ್ರ ಸಿಎಂ ಕಿರಣ್ ರೆಡ್ಡಿ ರಾಜೀನಾಮೆ]
ನಟ ಸಿದ್ದಾರ್ಥ್ ವಿರುದ್ಧ ತೆಲಂಗಾಣ ಅಭಿಮಾನಿಗಳು ಮುಗಿಬಿದ್ದಿದ್ದು, ತೆಲಂಗಾಣಕ್ಕಾಗಿ ಅಮಾಯಕರು ಪ್ರಾಣ ತೆತ್ತಾಗ ನೀನು ಎಲ್ಲಿದ್ದೆ ಎಂದು ನೇರವಾಗಿ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ. ಇನ್ನೂ ನಟ, ರಾಜಕಾರಣಿ ಚಿರಂಜೀವಿ ಅವರು ಹೈದರಾಬಾದ್ ಕಡೆ ತಲೆ ಹಾಕಿ ಮಲಗುವ ಯೋಚಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. [ಆಂಧ್ರ ವಿಭಜನೆ, ಕರ್ನಾಟಕ ದೊಡ್ಡಣ್ಣ, ಲಾಭ ಏನಣ್ಣ?]
@Actor_Siddharth Evadra Nuvvu?? #Telangana ppl suicide cheskunnapudu ekkada unnav
— TelanganaDaruvu (@TelanganaDaruvu) February 19, 2014 ಒಟ್ಟಾರೆ, ರಾಜ್ಯ ಹಾಗೂ ಜನರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ವಿರುದ್ಧ ತೆಲುಗು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಬಂದಿರುವ ಆಕ್ರೋಶ, ಹತಾಶೆ, ಆಕ್ರಂದನದ ನುಡಿಗಳನ್ನು ಇಲ್ಲಿ ನೀಡಲಾಗಿದೆ ನೋಡಿ...

ಆಂಧ್ರ ವಿಭಜನೆ ಕಾವು ಟ್ವಿಟ್ಟರ್ ಗೂ ತಟ್ಟಿದೆ
ತೆಲುಗುದೇಶಂ ಪಾರ್ಟಿ, ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೀದಿಳಿಗಿದು ಸಮೈಕ್ಯಾಂದ್ರಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಸೀಮಾಂಧ್ರ ಹಾಗೂ ಕರಾವಳಿ ಭಾಗಗಳಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ
|
ಜನರೇ ಎಚ್ಚರ ಕಿರಣ್ ಕೂಡಾ ಡ್ರಾಮಾ ಕ್ವೀನ್
ಜನರೇ ಎಚ್ಚರ ಕಿರಣ್ ಕೂಡಾ ಡ್ರಾಮಾ ಕ್ವೀನ್.. ರಾಜೀನಾಮೆ ಕೊಟ್ಟ ತಕ್ಷಣ ಅಖಂಡ ಆಂಧ್ರದ ನಾಯಕನಾಗಲು ಸಾಧ್ಯವಿಲ್ಲ
|
ಇಷ್ಟಕ್ಕೂ ದೇಶದ 29ನೇ ರಾಜ್ಯ ಯಾವುದು?
ತೆಲಂಗಾಣವೋ ಅಥವಾ ಸೀಮಾಂಧ್ರವೋ ಜನರಿಗೆ ಇನ್ನೂ ಗೊಂದಲ ಮುಂದುವರೆದಿದೆ.
|
ಹೈದರಾಬಾದ್ ಕಥೆ ಈಗಲೇ ನಿರ್ಧಾರವಾಗಲಿ
ಸೀಮಾಂಧ್ರ ಹಾಗೂ ತೆಲಂಗಾಣ ಎರಡು ಭಾಗಕ್ಕೂ ಹೈದರಾಬಾದ್ ಬೇಕು. ಕೇಂದ್ರಾಡಳಿತ ಪ್ರದೇಶ ಮಾಡಿಬಿಡಿ
|
ಚಿರಂಜೀವಿ ಮಾತ್ರ ಸೀಟು ಬಿಟ್ಟು ಕದಲಲ್ಲ
ಯಾರು ಬೇಕಾದರೂ ಕುರ್ಚಿ ಬಿಟ್ಟು ಬೀದಿಗಿಳಿಯಲಿ ನಾನಂತೂ ಕುರ್ಚಿ ಬಿಡಲ್ಲ ಎನ್ನುತ್ತಾರೆ ಚಿರಂಜೀವಿ
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications