ಕೆಸಿಆರ್ ಆಸ್ತಿ 7 ಕೋಟಿ ರು ಹೆಚ್ಚಳ, ಕಾರು ಹೊಂದಿಲ್ಲ
ಹೈದರಾಬಾದ್, ನವೆಂಬರ್ 15: ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್) ಅಧ್ಯಕ್ಷ, ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಆಸ್ತಿ ವಿವರ ಬಹಿರಂಗಗೊಂಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕೆಸಿಆರ್ ಅವರ ಆಸ್ತಿ 7 ಕೋಟಿ ರು ಅಧಿಕವಾಗಿದೆ, ಸ್ಥಿರಾಸ್ತಿ, ಆಭರಣಗಳ ಮೌಲ್ಯ 3.55 ಕೋಟಿ ರು ಹೆಚ್ಚಳವಾಗಿದೆ.
2017-18ರ ಅವಧಿಗೆ ಸಲ್ಲಿಸುವ ಅಫಿಡವಿಟ್ ಪ್ರಕಾರ ರಾವ್ ಅವರು ನಿವ್ವಳ ಆದಾಯ 91.52 ಲಕ್ಷರು ಬಂದಿದೆ. ಎಲ್ಲವೂ ಕೃಷಿ ಭೂಮಿಯಿಂದ ಪಡೆದ ಆದಾಯವಾಗಿದೆ. ಉಳಿದ ಆದಾಯ ವ್ಯಯ ಲೆಕ್ಕ ಸೇರಿದಂತೆ ಈ ಅವಧಿಯಲ್ಲಿ 1.10 ಕೋಟಿ ರು ತೆರಿಗೆ ಮೊತ್ತವನ್ನು ಪಾವತಿಸಿದ್ದಾರೆ.
ಗಜ್ವೇಲ್ ವಿಧಾನಸಭಾ ಕ್ಷೇತ್ರದಿಂದ ಕೆಸಿಆರ್ ಅವರು ಎರಡನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ.2014ರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ತೆಲುಗು ದೇಶಂ ಪಾರ್ಟಿ (ಟಿಡಿಪಿ)ಯ ಅಭ್ಯರ್ಥಿ ವಾಂಟೆರು ಪ್ರತಾಪ್ ರೆಡ್ಡಿ ಅವರನ್ನು 19,391 ಮತಗಳ ಅಂತರದಿಂದ ಸೋಲಿಸಿದ್ದರು.
119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ಡಿಸೆಂಬರ್ 07ರಂದು ತೆಲಂಗಾಣದಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 11ರಂದು ಮತ ಎಣಿಕೆ ನಡೆದು, ಫಲಿತಾಂಶ ಹೊರಬರಲಿದೆ. ಸೆಪ್ಟೆಂಬರ್ 06ರಂದು ವಿಧಾನಸಭೆಯನ್ನು ವಿಸರ್ಜನೆ ಮಾಡಿದ್ದರಿಂದ ಅವಧಿಗೂ ಮುನ್ನ ಚುನಾವಣೆ ಎದುರಾಗಿದೆ.

1.10 ಕೋಟಿ ರು ತೆರಿಗೆ ಪಾವತಿ
ತೆಲಂಗಾಣ ಪಬ್ಲಿಕೇಷನ್ಸ್ ಪ್ರೈ ಲಿಮಿಟೆಡ್ ನಿಂದ 4.16 ಕೋಟಿ ರು ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. 91.52 ಲಕ್ಷ ರು ಮೌಲ್ಯದ ಕೃಷಿ ಭೂಮಿಯನ್ನು ಹೊಂದಿದ್ದು, 1.10 ಕೋಟಿ ರು ತೆರಿಗೆ ಪಾವತಿ ಪಾವತಿಸಿದ್ದಾರೆ.

ಬ್ಯಾಂಕ್ ಠೇವಣಿ 5.53 ಕೋಟಿ ರು
ತೆಲಂಗಾಣ ಬ್ರಾಡ್ ಕಾಸ್ಟಿಂಗ್ ಪ್ರೈ ಲಿಮಿಟೆಡ್ ನ ಒಡೆತನದ ಸುದ್ದಿವಾಹಿನಿ ಹೊಂದಿದ್ದು, 55 ಲಕ್ಷ ರು ಷೇರುಗಳನ್ನು ಹೊಂದಿದ್ದಾರೆ.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಬ್ಯಾಂಕ್ ಆಫ್ ಬರೋಡಾದಲ್ಲಿ 5.53 ಕೋಟಿ ರು ಠೇವಣಿ ಹೊಂದಿದ್ದಾರೆ.

2014ರಲ್ಲಿ 15.15 ಕೋಟಿ ರು ನಷ್ಟಿತ್ತು
2014ರಲ್ಲಿ 15.15 ಕೋಟಿ ರು ನಷ್ಟಿದ್ದ ಒಟ್ಟಾರೆ ಆಸ್ತಿ ಮೌಲ್ಯ 22.60 ಕೋಟಿ ರುಗೇರಿದೆ. ಗಜ್ವೇಲ್ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಕೂಡಾ ಅಸೆಂಬ್ಲಿಗೆ ಪ್ರವೇಶ ಬಯಸಿದ್ದು, ಗಜ್ವೇಲ್ ನಲ್ಲಿ 3.19 ಕೋಟಿರು ಮೌಲ್ಯದ ತೋಟದ ಮನೆ ಹೊಂದಿದ್ದಾರೆ.

3 ಕೋಟಿ ರು ಸಾಲ ಹೊಂದಿದ್ದಾರೆ
ಬಿ ಶ್ರೀನಿವಾಸ್ ರಾವ್ ಅವರಿಂದ 3 ಕೋಟಿ ರು ಹಾಗೂ ಪ್ಯಾಕ್ಟ್ ಸೆಕ್ಯುರಿಟೀಸ್ ಹಾಗೂ ಫೈನಾಶಿಯಲ್ಸ್ ನಿಂದ 3.75 ಕೋಟಿ ರು ಸಾಲ ಪಡೆದಿದ್ದಾರೆ. ಪುತ್ರ ಕೆ.ಟಿ ರಾಮರಾವ್ ಅವರಿಂದ 88.82 ಲಕ್ಷ ಸಾಲ ಸೇರಿದಂತೆ ಒಟ್ಟಾರೆ, 8.88 ಕೋಟಿ ರು ಸಾಲ ಹೊಂದಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications