ಸಮೋಸ ಮಾರುತ್ತಿದ್ದವನ ಮಗ ದಕ್ಷಿಣ ಭಾರತ ಜೆಇಇ ಪರೀಕ್ಷೆಯಲ್ಲಿ ಟಾಪರ್!
ಊರೆಲ್ಲಾ ಅಲೆದು ಸಮೋಸ ಮಾರಿಬಂದ ಹಣದಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬದಲ್ಲಿ ತಾಂಡವವಾಡುತ್ತಿರುವ ಬಡನತ ಮಧ್ಯೆಯೂ ಚೆನ್ನಾಗಿ ಓದಿ, ವಿವಿಧ ಪ್ರವೇಶ ಪರೀಕ್ಷೆಗಳಲ್ಲಿ ಮೊದಲಿಗನಾಗಿ ಹೊರಹೊಮ್ಮಿದ ಮೋಹನ್ ನ ಸಾಧನೆ ನಿಜಕ್ಕೂ ಶ್ಲಾಘನೀಯ.
ಹೈದರಾಬಾದ್, ಮೇ 23: ಸಾಧನೆಯ ಹಾದಿಯಲ್ಲಿ ಬರುವ ಕಷ್ಟಗಳನ್ನು ಎದುರಿಸಿ ನಿಲ್ಲಲು ಸಿದ್ಧವಾದರೆ, ಗುರಿ ಮುಟ್ಟುವುದು ಕಷ್ಟವೇನಲ್ಲ ಎಂಬ ವಿಶ್ವ ಮಾನ್ಯ ಮಾತನ್ನು ಆಂಧ್ರಪ್ರದೇಶದ ಬಾಲಕನೊಬ್ಬ ಸಾಧಿಸಿ ತೋರಿಸಿದ್ದಾನೆ.
ಆ ಹುಡುಗನ ಹೆಸರು ವಿ. ಮೋಹನ್ ಅಭ್ಯಾಸ್. ಆಂಧ್ರಪ್ರದೇಶದ ಹೈದರಾಬಾದ್ ನ ಬಳಿಯಲ್ಲೇ ಇರುವ ಕುಟ್ಲಪಲ್ಲಿ ಈ ಹುಡುಗ ಇದೇ ತಿಂಗಳು ಪ್ರಕಟಗೊಂಡ ಆ ರಾಜ್ಯದ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಮೊದಲ ಶ್ರೇಯಾಂಕ ಪಡೆದಿದ್ದಾನೆ.

ಅಷ್ಟೇ ಅಲ್ಲ, ಆಲ್ ಇಂಡಿಯಾ ಮೆಡಿಕಲ್ ಪ್ರವೇಶ ಪರೀಕ್ಷೆಯಲ್ಲಿ ಆರನೇ ಶ್ರೇಯಾಂಕ ಹಾಗೂ ದಕ್ಷಿಣ ಭಾರತ ಜೆಇಇ ಪರೀಕ್ಷೆಯಲ್ಲಿ ಮೊದಲ ಶ್ರೇಯಾಂಕ ಪಡೆದ ಹಿರಿಮೆ ತನ್ನದಾಗಿಸಿಕೊಂಡಿದ್ದಾನೆ.
ಕುಟ್ಲಪಳ್ಳಿಯ ಪುಟ್ಟದೊಂದು ಹೌಸಿಂಗ್ ಬೋರ್ಡ್ ಮನೆಯಲ್ಲಿ ತಂದೆ, ತಾಯಿಯೊಂದಿಗೆ ಆತನ ವಾಸ. ಮನೆಯಲ್ಲಿ ಭಾರೀ ಬಡತನ.
ಮೋಹನ್ ಅವರ ತಂದೆ ವಿ. ಸುಬ್ಬಾರಾವ್, ಬಸ್ ಸ್ಟ್ಯಾಂಡ್ ಮುಂತಾದೆಡೆ ಸಮೋಸ ಮಾರುತ್ತಾರೆ. ತಮ್ಮ ಸೈಕಲ್ಲಿನ ಹಿಂಬದಿಯ ಕ್ಯಾರಿಯರ್ ನಲ್ಲಿ ಸಮೋಸ ತುಂಬಿದ ಪುಟ್ಟ ಪೆಟ್ಟಿಗೆಯನ್ನಿಟ್ಟುಕೊಂಡು ಊರೆಲ್ಲಾ ಅಲೆದು ಸಮೋಸ ಮಾರುತ್ತಾರೆ.
ಅದರಲ್ಲಿ ಬಂದ ಹಣವೇ ಇವರ ಕುಟುಂಬದ ಜೀವನ ನಿರ್ವಹಣೆಗೆ ಇರುವ ಮೂಲ ಆಧಾರ. ಈ ಹಣದಲ್ಲಿ ಆ ಹುಡುಗನಿಗೆ ಟ್ಯೂಷನ್ ಕೊಡಿಸುವುದು ಹಾಗಿರಲಿ, ಸರಿಯಾಗಿ ಪುಸ್ತಕ, ಯೂನಿಫಾರ್ಮ್ ಗಳನ್ನೂ ಕೊಡಿಸಲೂ ಆಗದು. ಆದರೆ, ಅಂಥದ್ದರಲ್ಲೇ ಆ ಹುಡುಗ ಇಂದು ವಿವಿಧ ಪ್ರವೇಶ ಪರೀಕ್ಷೆಗಳಲ್ಲಿ ಮೊದಲಿಗನಾಗಿ ಹೊರಹೊಮ್ಮಿದ್ದಾನೆಂದರೆ ಆತನ ಸಾಧನೆಯನ್ನು ಮೆಚ್ಚದೇ ಬೇರೆ ದಾರಿಯಿಲ್ಲ.
ತನ್ನ ಹೆಸರಲ್ಲೇ ಅಭ್ಯಾಸ್ ಎಂಬ ಪದ ಇಟ್ಟುಕೊಂಡಿರುವ ಮೋಹನ್, ಸತತ ಅಭ್ಯಾಸ, ಪರಿಶ್ರಮದಿಂದ ಈ ಗುರಿ ಮುಟ್ಟಿದ್ದಾನೆ.
ಚೆನ್ನೈನಲ್ಲಿರುವ ಐಐಟಿಯಲ್ಲಿ ಇಂಜಿನಿಯರಿಂಗ್ ಓದಬೇಕೆನ್ನುವ ಛಲ ಈತನಿಗಿದೆ. ಭೌತ ಶಾಸ್ತ್ರದಲ್ಲಿ ಸಂಶೋಧನೆ ಮಾಡುವ ಹಂಬಲವಿದೆ ಎನ್ನುತ್ತಾನೆ ಈತ. ಈ ಬಾಲಕನಿಗೆೊಂದು ಗುಡ್ ಲಕ್ ಹೇಳೋಣವೇ?
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications