ಕೇಂದ್ರ ಸಚಿವ ಸಂಪುಟಕ್ಕಿಂತ ದೊಡ್ಡದು ತಿರುಪತಿ ಟ್ರಸ್ಟ್ ಸಮಿತಿ!
ತಿರುಪತಿ, ಸೆಪ್ಟೆಂಬರ್ 17: ಆಂಧ್ರ ಪ್ರದೇಶ ಸರ್ಕಾರ ಗುರುವಾರ ತಿರುಪತಿ ತಿರುಮಲ ದೇವಾಲಯವನ್ನು ನಡೆಸುವ ತಿರುಮಲ ತಿರುಪತಿ ದೇವಸ್ಥಾನಂನ ನೂತನ ಟ್ರಸ್ಟ್ ಬೋರ್ಡ್ ಅನ್ನು ನೇಮಕ ಮಾಡಿದೆ. ಈ ನೂತನ ಟ್ರಸ್ಟ್ನ ಸಮಿತಿಯಲ್ಲಿ 29 ಸದಸ್ಯರು ಹಾಗೂ 52 ಆಹ್ವಾನಿತ ಸದಸ್ಯರು ಇದ್ದಾರೆ. ವಿಶ್ವದ ಅತೀ ಶ್ರೀಮಂತ ದೇವಾಲಯವಾದ ತಿರುಮಲ ತಿರುಪತಿ ತಿಮ್ಮಪ್ಪ ದೇವಸ್ಥಾನಂ ನ ಅತೀ ದೊಡ್ಡ ಟ್ರಸ್ಟ್ ಇದಾಗಿದೆ.
ಈ ಹಿಂದಿನ ತಿರುಮಲ ತಿರುಪತಿ ದೇವಸ್ಥಾನಂನ ಟ್ರಸ್ಟ್ನ ಸಮಿತಿಯಲ್ಲಿ ಸುಮಾರು 40 ಕ್ಕೂ ಕಡಿಮೆ ಜನ ಸಂಖ್ಯೆಯನ್ನು ಹೊಂದಿದ್ದರು. ಆದರೆ ಈಗಿನ ಹೊಸ ಸಮಿತಿಯಲ್ಲಿ 81 ಮಂದಿ ಇದ್ದಾರೆ. ಅದರಲ್ಲಿ ಈ ಹಿಂದಿನ ಸಮಿತಿಯ ಸದಸ್ಯರು ಕೂಡಾ ಇದ್ದಾರೆ. ಹಾಗೆಯೇ ವಿಶೇಷ ಆಹ್ವಾನಿತರು ಕೂಡಾ ಇದ್ದಾರೆ. ಟಿಟಿಡಿ ಟ್ರಸ್ಟ್ ಬೋರ್ಡ್ನ ಒಟ್ಟು ಸದಸ್ಯತ್ವವು ಕೇಂದ್ರ ಸಚಿವ ಸಂಪುಟಕ್ಕಿಂತ ದೊಡ್ಡದಾಗಿದೆ.
ಕೇಂದ್ರ ಸಚಿವ ಸಂಪುಟದಲ್ಲಿ ಒಟ್ಟು 78 ಮಂದಿ ಸದಸ್ಯರು ಇರುತ್ತಾರೆ. ಆದರೆ ಈ ಟಿಟಿಡಿ ಟ್ರಸ್ಟ್ ಬೋರ್ಡ್ನಲ್ಲಿ ಇದಕ್ಕಿಂತ ಮೂರು ಮಂದಿ ಅಧಿಕವಾಗಿದ್ದಾರೆ. ಅಂದರೆ ಟಿಟಿಡಿ ಟ್ರಸ್ಟ್ ಬೋರ್ಡ್ನ ಒಟ್ಟು ಸದಸ್ಯರ ಸಂಖ್ಯೆ 81 ಆಗಿದೆ.

ಈ ಟಿಟಿಡಿ ಟ್ರಸ್ಟ್ ಬೋರ್ಡ್ನಲ್ಲಿ ಇಂಡಿಯಾ ಸಿಮೆಂಟ್ಸ್ ಚೇರ್ಮನ್ ಎನ್ ಶ್ರೀನಿವಾಸನ್, ಮೈ ಹೋಮ್ ಗ್ರೂಪ್ನ ಚೇರ್ಮನ್ ಜೆ ರಾಮೇಶ್ವರ ರಾವ್, ಹೆಟೆರೋ ಗ್ರೂಪ್ ಚೇರ್ಮನ್ ಬಿ ಪಾರ್ಥಸಾರಥಿ ರೆಡ್ಡಿ ಈ ಸಮಿತಿಗೆ ಮರು ಆಯ್ಕೆ ಆಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಮೂಲಗಳು, "ರಾಜ್ಯ ಸರ್ಕಾರವು ಹಲವಾರು ವಿಐಪಿಗಳನ್ನು ಈ ಸಮಿತಿಗೆ ಹಾಕಿದೆ. ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ವಿಐಪಿಗಳ ಹೆಸರನ್ನು ಹಾಕಿದೆ. ಇನ್ನು ಈ ತಿರುಮಲ ತಿರುಪತಿ ದೇವಸ್ಥಾನಂನ ನೂತನ ಟ್ರಸ್ಟ್ ಬೋರ್ಡ್ ಸಮಿತಿಗೆ ಆಯ್ಕೆಯಾಗಲು ಹೆಚ್ಚಿನ ಬೇಡಿಕೆ ಇತ್ತು ಎಂದು ಹೇಳಲಾಗಿದೆ.
ಟ್ರಸ್ಟ್ ಬೋರ್ಡ್ನ ಸದಸ್ಯತ್ವ ಪಡೆಯಲು ಲಾಬಿಗಳನ್ನು ನಡೆಸುವ ಪ್ರಯತ್ನಗಳು ಕೂಡಾ ನಡೆದಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರವು ಏಳು ಮಂದಿಯನ್ನು ಅಧಿಕ ವಿಶೇಷ ಆಹ್ವಾನಿತರನ್ನಾಗಿ ಆಯ್ಕೆ ಮಾಡಿದ್ದಾರೆ. ಈ ಟಿಟಿಡಿ ಟ್ರಸ್ಟ್ ಸಮಿತಿಗೆ ಸಂಬಂಧಿಸಿ ರಾಜ್ಯ ಸರ್ಕಾರವು ಒಟ್ಟು ಮೂರು ಸುತ್ತೋಲೆಗಳನ್ನು ಹೊರಡಿಸಿದೆ. ಮೊದಲು ರಾಜ್ಯ ಸರ್ಕಾರವು ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿಯ ಸಂಬಂಧಿಯನ್ನು ಆಗಸ್ಟ್ 8 ರಂದು ಟ್ರಸ್ಟ್ನ ಮುಖ್ಯಸ್ಥರಾಗಿ ನೇಮಕ ಮಾಡಲಾಗಿತ್ತು. ರಾಜ್ಯ ಸರ್ಕಾರದ ಮೊದಲ ಸುತ್ತೋಲೆಯಲ್ಲಿ ಸುಮಾರು 29 ಜನರ ಸಮಿತಿಯನ್ನು ರಚನೆ ಮಾಡಲಾಗಿತ್ತು.
ಬಳಿಕ ಮತ್ತೊಂದು ಆದೇಶದಲ್ಲಿ ತಿರುಪತಿ ಶಾಸಕ ಭೂಮಣ ರೆಡ್ಡಿ ಹಾಗೂ ಬ್ರಾಹ್ಮಣ ಕಾಪೋರೇಷನ್ ಮುಖ್ಯಸ್ಥ ಸುಧಾಕರ್ ಅನ್ನು ವಿಶೇಷ ಆಹ್ವಾನಿತರಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದೆ. ಬಳಿಕ ಮೂರನೇ ಆದೇಶದಲ್ಲಿ ಟ್ರಸ್ಟ್ ಸಮಿತಿಗೆ ಸುಮಾರು 50 ವಿಶೇಷ ಆಹ್ವಾನಿತರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಆದರೆ ಇವರ್ಯಾರಿಗೂ ಬೋರ್ಡ್ಗೆ ಸಂಬಂಧಿಸಿದ ವಿಚಾರದಲ್ಲಿ ಮತ ಮಾಡುವ ಹಕ್ಕು ಇಲ್ಲ.
ಮೂವರು ಅಧಿಕಾರಿಗಳನ್ನು ಹೊರತುಪಡಿಸಿದರೆ, ಟಿಟಿಡಿ ಟ್ರಸ್ಟ್ನಲ್ಲಿ ಆಂಧ್ರ ಪ್ರದೇಶದ 10, ತೆಲಂಗಾಣದ 7, ತಮಿಳುನಾಡಿನ 2, ಕರ್ನಾಟಕದ 2, ಮಹಾರಾಷ್ಟ್ರದ 2, ಗುಜರಾತ್ನ 1, ಪಶ್ಚಿಮ ಬಂಗಾಳದ 1 ಹಾಗೂ ಪಾಂಡಿಚೇರಿಯ 1 ಸದಸ್ಯರು ಇದ್ದಾರೆ. ರಾಜ್ಯ ಸರ್ಕಾರವು ಹೀಗೆ ದೊಡ್ಡ ಸಂಖ್ಯೆಯ ಸಮಿತಿಯನ್ನು ರಚನೆ ಮಾಡಿರುವುದು ಮಾತ್ರ ಮುಂದಿನ ದಿನಗಳಲ್ಲಿ ದೊಡ್ಡ ಪ್ರಭಾವವನ್ನು ಬೀರಲಿದೆ ಎಂದು ಹೇಳಲಾಗಿದೆ. ಟ್ರಸ್ಟ್ ಸಭೆಗಳು ಇದ್ದ ಸಂದರ್ಭದಲ್ಲಿ ಈ 81 ಮಂದಿಗೂ ಸಂಚಾರ ವ್ಯವಸ್ಥೆ, ವಸತಿ ವ್ಯವಸ್ಥೆಯನ್ನು ಮಾಡಿಕೊಡುವ ಜವಾಬ್ದಾರಿ ಟ್ರಸ್ಟ್ನದ್ದು ಆಗಿರುತ್ತದೆ.
(ಒನ್ ಇಂಡಿಯಾ ಸುದ್ದಿ)
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications