ಮೋದಿ, ರಾಹುಲ್, ಅಮಿತ್ ಷಾರನ್ನು ಇಸ್ಲಾಂಗೆ ಆಹ್ವಾನಿಸಿದ ಅಸಾದುದೀನ್ ಓವೈಸಿ
ಹೈದರಾಬಾದ್, ಡಿಸೆಂಬರ್ 02 : ವಾರದಿಂದ ಎಳೆದಾಡಿ ತೆಳುವಾಗಿದ್ದ ರಾಹುಲ್ ಗಾಂಧಿ ಧರ್ಮದ ವಿಷಯವನ್ನು ಎಐಎಂಐಎಂ ಪಕ್ಷದ ಸಂಸದ ಅಸಾದುದೀನ್ ಓವೈಸಿ ಈಗ ಮತ್ತೆ ಕೆಣಕಿದ್ದಾರೆ. ಆದರೆ ಅವರು ಯಾರ ಪರವೂ ವಹಿಸದೆ ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷವನ್ನು ಕುಟುಕಿದ್ದಾರೆ.
ಸೋಮನಾಥ ದೇವಾಲಯಕ್ಕೆ ಹೋದಾಗ ರಾಹುಲ್ ಗಾಂಧಿ ತಮ್ಮ ಹೆಸರನ್ನು ಹಿಂದೂಯೇತರ ಎಂದು ನಮೂದಿಸಿದ್ದಾರೆ ಹಾಗಾಗಿ ಅವರು ಹಿಂದೂ ಅಲ್ಲ ಎಂದು ಬಿಜೆಪಿ ಬೊಬ್ಬೆಹೊಡೆದಿತ್ತು. ಅದಕ್ಕೆ ವಿರುದ್ಧವಾಗಿ ಕಾಂಗ್ರೆಸ್, ರಾಹುಲ್ ಗಾಂಧಿ ಅವರು ಹಿಂದೂ ಸಂಪ್ರದಾಯಗಳನ್ನು ಪಾಲಿಸುತ್ತಿರುವ ಚಿತ್ರ ಬಿಡುಗಡೆ ಮಾಡಿ ರಾಹುಲ್ ಅಪ್ಪಟ ಹಿಂದೂ ಎಂದಿತ್ತು. ಅಷ್ಟೆ ಅಲ್ಲದೆ ಮೋದಿ ಹಿಂದೂವೇ ಅಲ್ಲ ಎಂದೂ ಕೆಲವು ಕಾಂಗ್ರೆಸ್ ನಾಯಕರು ಹೇಳಿದ್ದರು.
ಈ ಧರ್ಮ ರಾಜಕಾರಣವನ್ನು ಕಟುವಾಗಿ ಟೀಕಿಸಿರುವ ಅಸಾದುದೀನ್ ಓವೈಸಿ, ನೀವೇನು ಹಿಂದೂ ಧರ್ಮ ಮುನ್ನೆಡೆಸುತ್ತಿದ್ದಿರೋ ಅಥವಾ ದೇಶವನ್ನು ಮುನ್ನಡೆಸುವ ಕಾರ್ಯ ಮಾಡುತ್ತಿದ್ದೀರೊ ಎಂದು ಪ್ರಶ್ನಿಸಿದ್ದಾರೆ.

'ನಾನು ಹಿಂದೂ, ನಾನು ಹಿಂದೂ ಒಬಿಸಿ, ನಾನು ಜೈನ, ಹೀಗೆಲ್ಲಾ ಕ್ಲಬ್ ಗಳನ್ನು ಮಾಡಿಕೊಂಡು ಬಿಟ್ಟಿದ್ದೀರಿ, ನಮ್ಮ ಕ್ಲಬ್ ಬೇರೆ ಕ್ಲಬ್ ಗಿಂತ ಶ್ರೇಷ್ಠ ಎಂದು ಬಡಿದಾಡುತ್ತಿದ್ದೀರಿ, ಆದರೆ ನಾನು ನನ್ನನ್ನು ನಾನು ಮುಸ್ಲಿಂ ಎಂದು ಕರೆದುಕೊಂಡರೆ ನಿಮಗೆ ಧರ್ಮಾಂಧನಂತೆ ನಾನು ಕಾಣುತ್ತೇನೆ' ಎಂದು ತಮ್ಮ ವಾದ ಮುಂದಿಟ್ಟಿದ್ದಾರೆ.
ನನ್ನ ಧರ್ಮ ದೊಡ್ಡದು, ನನ್ನ ಜಾತಿ ದೊಡ್ಡದು ಎಂದು ಬಡಿದಾಡಬೇಡಿ, ನನ್ನ ಕ್ಲಬ್ ಗೆ ಬಂದು ಬಿಡಿ ಇಲ್ಲಿ ಎಲ್ಲರೂ ಸಮಾನರು, ಸದಸ್ಯತ್ವ ಕೂಡ ಉಚಿತ ಎಂದು ಅವರು ಮೋದಿ, ರಾಹುಲ್ ಗಾಂಧಿ, ಅಮಿತ್ ಷಾ ಅವರುಗಳನ್ನು ಇಸ್ಲಾಂ ಧರ್ಮಕ್ಕೆ ಸ್ವಾಗತಿಸಿದ್ದಾರೆ.
ಅಮಿತ್ ಷಾ ಜೈನ ಧರ್ಮದವರು ಆದರೆ ಅವರು ರಾಜಕೀಯ ಲಾಭಕ್ಕಾಗಿ ತಮ್ಮನ್ನು ಹಿಂದೂ ಎಂದೇ ಕರೆದುಕೊಳ್ಳುತ್ತಾರೆ ಎಂದು ಇದೇ ವೇಳೆ ಅಮಿತ್ ಷಾ ಅವರನ್ನು ಟೀಕಿಸಿದ್ದಾರೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications