ಮಗನ ನಶೆ ಹೋಗಲಾಡಿಸಲು ಮೆಣಸಿನ ಪುಡಿ ಎರಚಿದ ತಾಯಿ
ಹೈದರಾಬಾದ್ ಏಪ್ರಿಲ್ 6: ವೇಗವಾಗಿ ಹೆಚ್ಚುತ್ತಿರುವ ಮಾದಕ ವ್ಯಸನವು ದೇಶದ ಯುವ ಜನಸಂಖ್ಯೆಯನ್ನು ಅಷ್ಟೇ ವೇಗವಾಗಿ ಹಿಡಿದಿಟ್ಟುಕೊಳ್ಳುತ್ತಿದೆ. ಈಗ ಹದಿಹರೆಯದವರನ್ನೂ ಮಾದಕ ವ್ಯಸನ ಕಾಡುತ್ತಿದೆ. ಮಾದಕ ವ್ಯಸನಿಗಳು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಮಾದಕ ವ್ಯಸನಿಗಳ ಸಂಬಂಧಿಕರು ತಮ್ಮವರ ವ್ಯಸನದಿಂದ ಮುಕ್ತಿ ಹೊಂದಲು ವೈದ್ಯರಿಂದ ಎಲ್ಲ ರೀತಿಯ ಸಹಾಯವನ್ನು ಪಡೆಯುತ್ತಿದ್ದಾರೆ. ಪುನರ್ವಸತಿ ಕೇಂದ್ರಗಳಿಗೆ ವ್ಯಸನಿಗಳನ್ನು ಕಳೆಸುತ್ತಿದ್ದಾರೆ. ಆದರೆ ತೆಲಂಗಾಣದ ತಾಯಿಯೊಬ್ಬರು ತನ್ನ ಮಗನಿಂದ ಮಾದಕ ವ್ಯಸನವನ್ನು ಹೋಗಲಾಡಿಸಲು ಭಯಾನಕ ಕ್ರಮಕ್ಕೆ ಮುಂದಾಗಿರುವುದು ನೋಡುಗರನ್ನು ಬೆಚ್ಚಿ ಬೀಳಿಸಿದೆ. ಮಗನ ನಶೆಯನ್ನು ಹೋಗಲಾಡಿಸಲು ತಾಯೊಯೊಬ್ಬಳು ಮೆಣಸಿನ ಪುಡಿ ಎರಚಿದ ಭಯಾನಕ ಘಟನೆ ನಡೆದಿದೆ.
ಮಹಿಳೆ ಮೊದಲು ತನ್ನ 15 ವರ್ಷದ ಮಗನನ್ನು ವ್ಯಸನದಿಂದ ಮುಕ್ತಗೊಳಿಸಲು ಕಟ್ಟಿಹಾಕಿದ್ದಳು. ಆದರೆ ಮಗ ಮಾತು ಕೇಳಲಿಲ್ಲ. ತಪ್ಪಿಸಿಕೊಂಡು ಹೋಗಿ ಮದ್ಯ ಸೇವನೆ ಮಾಡುತ್ತಿದ್ದ. ಇದರಿಂದ ಬೇಸತ್ತ ತಾಯಿ ಅವನ ಮುಖಕ್ಕೆ ಕೆಂಪು ಮೆಣಸಿನ ಪುಡಿಯನ್ನು ಉಜ್ಜಿದ್ದಾಳೆ. ಈ ಘಟನೆಯ ವೀಡಿಯೋ ಕೂಡ ಹೊರಬಿದ್ದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವರದಿ ಪ್ರಕಾರ, ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ನಿವಾಸಿ ರಮಣ್ಣಮ್ಮ ಅವರು ದಿನಗೂಲಿ ಕೆಲಸ ಮಾಡುತ್ತಾರೆ. ಆಕೆಯ ಪತಿ ರಿಕ್ಷಾ ಓಡಿಸುತ್ತಾನೆ. ಇವರಿಬ್ಬರಿಗೂ 15 ವರ್ಷದ ಮಗನಿದ್ದಾನೆ. ವಿದ್ಯಾಭ್ಯಾಸ ಮಾಡುತ್ತಿರುವ ಈತ ದೇಶದ ಎಲ್ಲಾ ಮಕ್ಕಳಂತೆ ಕೊರೋನಾ ಅವಧಿಯಲ್ಲಿ ತನ್ನ ಅಧ್ಯಯನವನ್ನು ತಪ್ಪಿಸಿದ್ದನು.

ತನ್ನ ಓದು ಬಿಟ್ಟ ನಂತರ ಈ ಹುಡುಗ ಅಲ್ಲಿ ಇಲ್ಲಿ ತಿರುಗಾಡಲು ಪ್ರಾರಂಭಿಸಿದನು ಮತ್ತು ಈ ಸಮಯದಲ್ಲಿ ಅವನು ಮಾದಕ ವ್ಯಸನಿಯಾಗಿದ್ದಾನೆ. ತಾಯಿ ಹಲವು ಬಾರಿ ಎಚ್ಚರಿಸಿದರೂ ಚಟ ಬಿಡಲಿಲ್ಲ. ಆಗಾಗ ಕುಡಿದು ಮನೆಯಿಂದ ನಾಪತ್ತೆಯಾಗುತ್ತಿದ್ದ. ಈ ನಡುವೆ ಮನೆಗೆ ಸರಿಯಾಗಿ ಬರುತ್ತಿರಲಿಲ್ಲ.
ಈ ಬಾರಿ ಮಿತಿ ಮೀರಿದ್ದು ಮಗನನ್ನು ದಾರಿಗೆ ತರಲು ತಾಯಿ ಯೋಚಿಸಿದ್ದಳು. ಈ ವಿಚಾರ ಗೊತ್ತಾಗಿ ಮಗ 10 ದಿನ ಮನೆಯಿಂದ ನಾಪತ್ತೆಯಾಗಿದ್ದನು. ವಾಪಸಾದಾಗ ಕುಡಿದ ಅಮಲಿನಲ್ಲಿದ್ದನು. ಮಗ ನಶೆಯಲ್ಲಿದ್ದುದನ್ನು ನೋಡಿ ತಾಯಿಯ ಕೋಪ ನೆತ್ತಿಗೇರಿದೆ. ಹೀಗಾಗಿ ಆತನನ್ನು ಕಂಬಕ್ಕೆ ಕಟ್ಟಿ ಕಣ್ಣಿಗೆ ಮೆಣಸಿನ ಪುಡಿ ಎರಚಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

15 ವರ್ಷದ ಮಗ ಗಾಂಜಾ ಚಟಕ್ಕೆ ಬಲಿಯಾಗುತ್ತಿರುವುದನ್ನು ಗಮನಿಸಿದ ತಾಯಿ ಅದಕ್ಕೊಂದು ವಿನೂತನ ಪರಿಹಾರ ಕಂಡುಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ ಎಂದು ಬರೆದುಕೊಂಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತಾಯಿ ಮಗ ಗಾಂಜಾ ಬಿಡುವುದಾಗಿ ಭರವಸೆ ನೀಡುವವರೆಗೂ ಆಕೆ ಮೆಣಸಿನಕಾಯಿಯನ್ನು ಮುಖಕ್ಕೆ ಉಜ್ಜಿದ್ದಾಳೆ.

ಘಟನೆಯ ವಿಡಿಯೋ ವೈರಲ್ ಆದ ಬಳಿಕ ತಾಯಿ ವಿರುದ್ಧ ಪ್ರಕರಣ ದಾಖಲಾಗಿದೆ. ವರದಿಯ ಪ್ರಕಾರ, ನೆರೆಹೊರೆಯವರು ವೀಡಿಯೊವನ್ನು ಚಿತ್ರೀಕರಿಸಿದ್ದಾರೆ ಮತ್ತು ನಂತರ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋ ಹೊರಬಿದ್ದ ಬಳಿಕ ಪೊಲೀಸರು ತಾಯಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾಕ್ಷಿಗಳ ಹೇಳಿಕೆ ಪ್ರಕಾರ, ಪದೇ ಪದೇ ನಿರಾಕರಿಸಿದರೂ ಅವನು (ಮಗ) ಡ್ರಗ್ಸ್ ತ್ಯಜಿಸದ ಕಾರಣ ತಾನು ಇಂತಹ ಕಠಿಣ ಕ್ರಮಕ್ಕೆ ಮುಂದಾಗಬೇಕಾಯಿತು ಎಂದು ರಮಣ್ಣಮ್ಮ ಹೇಳಿದ್ದಾರೆ.
-
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್












Click it and Unblock the Notifications