ಆರ್ ಜೆ ಸಂಧ್ಯಾ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು
ಹೈದರಾಬಾದಿನ ರೇಡಿಯೋ ಚಾರ್ಮಿನಾರ್ ನಲ್ಲಿ ಆರ್ ಜೆ ಆಗಿದ್ದ ಸಂಧ್ಯಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವುದ್ ಸಿಕ್ಕಿದ್ದು, ಸಂಧ್ಯಾ ಅವರ ಪತಿ ಆರ್ಮಿ ಆಫೀಸರ್ ವೈಭವ್ ಅವರ ವಿರುದ್ಧ ಕಿರುಕುಳ ಪ್ರಕರಣ ದಾಖಲಾಗಿದೆ.
ಹೈದರಾಬಾದ್, ಏಪ್ರಿಲ್ 26: ಕಳೆದ ವಾರಾಂತ್ಯದಲ್ಲಿ ಸೂಫಿ ಸಂಗೀತ ಕಾರ್ಯಕ್ರಮವ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದ ರೇಡಿಯೋ ಚಾರ್ಮಿನಾರ್ ಕೇಂದ್ರದ ರೇಡಿಯೋ ಜಾಕಿ ಸಂಧ್ಯಾ ಸಿಂಗ್ ಅವರು ಸೋಮವಾರದಂದು ಆತ್ಮಹತ್ಯೆಗೆ ಶರಣಾಗಿದ್ದರು. ಈಗ ಸಂಧ್ಯಾ ಅವರ ಸಾವಿಗೆ ಮಾನಸಿಕ ಒತ್ತಡವಷ್ಟೇ ಕಾರಣವಲ್ಲ, ವರದಕ್ಷಿಣೆ ಕಿರುಕುಳವೇ ಮುಖ್ಯ ಕಾರಣ ಎಂದು ಪೊಲೀಸರು ಹೇಳಿದ್ದಾರೆ.
ಸೋಮವಾರದಂದು ಕಚೇರಿ ತೊರೆಯುವುದಕ್ಕೂ ಮುನ್ನ ಸಂಧ್ಯಾ ಅವರು ತಮ್ಮ ಸಹದ್ಯೋಗಿ ಅಬ್ದುಲ್ ಸಮದ್ ಅವರೊಂದಿಗೆ ಮಾತನಾಡುತ್ತಾ, 'ಯಾಕೋ ಜೀವನ ಸಾಕಾಗಿ ಹೋಗಿದೆ' ಎಂದಿದ್ದಾರೆ. ಮಂಗಳವಾರ(ಏಪ್ರಿಲ್ 25)ದಂದು ಕೆಲಸಕ್ಕೆ ಹಾಜರಾಗಿರಲಿಲ್ಲ.
ಸಂಧ್ಯಾ ಅವರ ಸೋದರಿ ರಮ್ಯಾ ಅವರು ಸಂಧ್ಯಾ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಸಂಧ್ಯಾ ಅವರ ಪತಿ ಮೇಜರ್ ವಿಶಾಲ್ ವೈಭವ್ ಅವರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ ಮೇಲೆ ಕಚೇರಿ ಸಿಬ್ಬಂದಿಗೆ ಸಂಧ್ಯಾ ಅವರ ಆತ್ಮಹತ್ಯೆ ಸುದ್ದಿ ಮುಟ್ಟಿದೆ.

ಉತ್ತರಪ್ರದೇಶ ಮೂಲದ ಸಂಧ್ಯಾ ಹಾಗು ವಿಶಾಲ್ ಅವರು 2015ರಲ್ಲಿ ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲಿ ವಿಶಾಲ್ ಅವರು ವರದಕ್ಷಿಣೆಗೆ ಬೇಡಿಕೆ ಇಟ್ಟಿರಲಿಲ್ಲ. ಆದರೆ, ಹೈದರಾಬಾದಿನ ದಂಡು ಪ್ರದೇಶದಲ್ಲಿ ನೆಲೆಸಿದ ಮೇಲೆ ಸಂಧ್ಯಾ ಅವರಿಗ್ ಕಿರುಕುಳ ಆರಂಭವಾಗಿದೆ.
ಆರೋಪಿ ವಿಶಾಲ್ ಅವರು ಎದೆನೋವು ಎಂದು ಹೇಳಿ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ವಿಶಾಲ್ ಅವರ ತನಿಖೆಗೆ ಸಹಕರಿಸುವುದಾಗಿ ಆರ್ಮಿ ಭರವಸೆ ನೀಡಿದೆ ಎಂದು ಹೈದರಾಬಾದ್ ಉತ್ತರವಲಯದ ಡಿಸಿಪಿ ಸುಮತಿ ಹೇಳಿದ್ದಾರೆ.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications