ಆರ್ ಜೆ ಸಂಧ್ಯಾ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು
ಹೈದರಾಬಾದಿನ ರೇಡಿಯೋ ಚಾರ್ಮಿನಾರ್ ನಲ್ಲಿ ಆರ್ ಜೆ ಆಗಿದ್ದ ಸಂಧ್ಯಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವುದ್ ಸಿಕ್ಕಿದ್ದು, ಸಂಧ್ಯಾ ಅವರ ಪತಿ ಆರ್ಮಿ ಆಫೀಸರ್ ವೈಭವ್ ಅವರ ವಿರುದ್ಧ ಕಿರುಕುಳ ಪ್ರಕರಣ ದಾಖಲಾಗಿದೆ.
ಹೈದರಾಬಾದ್, ಏಪ್ರಿಲ್ 26: ಕಳೆದ ವಾರಾಂತ್ಯದಲ್ಲಿ ಸೂಫಿ ಸಂಗೀತ ಕಾರ್ಯಕ್ರಮವ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದ ರೇಡಿಯೋ ಚಾರ್ಮಿನಾರ್ ಕೇಂದ್ರದ ರೇಡಿಯೋ ಜಾಕಿ ಸಂಧ್ಯಾ ಸಿಂಗ್ ಅವರು ಸೋಮವಾರದಂದು ಆತ್ಮಹತ್ಯೆಗೆ ಶರಣಾಗಿದ್ದರು. ಈಗ ಸಂಧ್ಯಾ ಅವರ ಸಾವಿಗೆ ಮಾನಸಿಕ ಒತ್ತಡವಷ್ಟೇ ಕಾರಣವಲ್ಲ, ವರದಕ್ಷಿಣೆ ಕಿರುಕುಳವೇ ಮುಖ್ಯ ಕಾರಣ ಎಂದು ಪೊಲೀಸರು ಹೇಳಿದ್ದಾರೆ.
ಸೋಮವಾರದಂದು ಕಚೇರಿ ತೊರೆಯುವುದಕ್ಕೂ ಮುನ್ನ ಸಂಧ್ಯಾ ಅವರು ತಮ್ಮ ಸಹದ್ಯೋಗಿ ಅಬ್ದುಲ್ ಸಮದ್ ಅವರೊಂದಿಗೆ ಮಾತನಾಡುತ್ತಾ, 'ಯಾಕೋ ಜೀವನ ಸಾಕಾಗಿ ಹೋಗಿದೆ' ಎಂದಿದ್ದಾರೆ. ಮಂಗಳವಾರ(ಏಪ್ರಿಲ್ 25)ದಂದು ಕೆಲಸಕ್ಕೆ ಹಾಜರಾಗಿರಲಿಲ್ಲ.
ಸಂಧ್ಯಾ ಅವರ ಸೋದರಿ ರಮ್ಯಾ ಅವರು ಸಂಧ್ಯಾ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಸಂಧ್ಯಾ ಅವರ ಪತಿ ಮೇಜರ್ ವಿಶಾಲ್ ವೈಭವ್ ಅವರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ ಮೇಲೆ ಕಚೇರಿ ಸಿಬ್ಬಂದಿಗೆ ಸಂಧ್ಯಾ ಅವರ ಆತ್ಮಹತ್ಯೆ ಸುದ್ದಿ ಮುಟ್ಟಿದೆ.

ಉತ್ತರಪ್ರದೇಶ ಮೂಲದ ಸಂಧ್ಯಾ ಹಾಗು ವಿಶಾಲ್ ಅವರು 2015ರಲ್ಲಿ ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲಿ ವಿಶಾಲ್ ಅವರು ವರದಕ್ಷಿಣೆಗೆ ಬೇಡಿಕೆ ಇಟ್ಟಿರಲಿಲ್ಲ. ಆದರೆ, ಹೈದರಾಬಾದಿನ ದಂಡು ಪ್ರದೇಶದಲ್ಲಿ ನೆಲೆಸಿದ ಮೇಲೆ ಸಂಧ್ಯಾ ಅವರಿಗ್ ಕಿರುಕುಳ ಆರಂಭವಾಗಿದೆ.
ಆರೋಪಿ ವಿಶಾಲ್ ಅವರು ಎದೆನೋವು ಎಂದು ಹೇಳಿ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ವಿಶಾಲ್ ಅವರ ತನಿಖೆಗೆ ಸಹಕರಿಸುವುದಾಗಿ ಆರ್ಮಿ ಭರವಸೆ ನೀಡಿದೆ ಎಂದು ಹೈದರಾಬಾದ್ ಉತ್ತರವಲಯದ ಡಿಸಿಪಿ ಸುಮತಿ ಹೇಳಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications