'ಬೀರ್ ಮೇಲೆ ಗಾಂಧಿ ಚಿತ್ರ' ಕನೆಕ್ಟಿಕಟ್ ಕಂಪ್ನಿನಿಂದ ಕ್ಷಮೆ
ಹೈದರಾಬಾದ್, ಜ.4: ಅಮೆರಿಕದ ಕನೆಕ್ಟಿಕಟ್ ಮೂಲದ ಮದ್ಯ ಉತ್ಪಾದನಾ ಸಂಸ್ಥೆಯೊಂದು ತನ್ನ ಬಿಯರ್ ಕ್ಯಾನ್ ಹಾಗೂ ಬಾಟ್ಲಿಗಳ ಮೇಲೆ ಮಹಾತ್ಮಾ ಗಾಂಧೀಜಿ ಅವರ ಚಿತ್ರ ಬಳಸಿಕೊಂಡು ಭಾರಿ ಪ್ರಮಾದ ಎಸಗಿದ ಮೇಲೆ ಎಚ್ಚೆತ್ತುಕೊಂಡಿದೆ. ಕುಡಿತದ ವಿರುದ್ಧ ಹೋರಾಟ ನಡೆಸಿದ್ದ ವಿಶ್ವಮಾನ್ಯ ಬಾಪು ಅವರ ಚಿತ್ರ ಬಳಸಿದ್ದ ಕಂಪನಿ ಈಗ ಕ್ಷಮೆಯಾಚಿಸಿದೆ.
ಮದ್ಯಪಾನ ವಿರೋಧಿಯಾಗಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಹೆಸರು ದುರ್ಬಳಕೆಯಾಗಿರುವುದನ್ನು ಖಂಡಿಸಿ ಹೈದರಾಬಾದಿನ ಕೋರ್ಟಿನಲ್ಲಿ ಪಿಟೀಷನ್ ದಾಖಲಿಸಲಾಗಿತ್ತು. ಹೈದರಾಬಾದ್ ಮೂಲದ ವಕೀಲ ಜನಾರ್ಧನ್ ಗೌಡ್(38) ಅವರು 11ನೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಇದಕ್ಕೆ ಉತ್ತರಿಸಿರುವ ಅಮೆರಿಕದ ಕನೆಕ್ಟಿಕಟ್ ಮೂಲದ 'ನ್ಯೂ ಇಂಗ್ಲೆಂಡ್ ಬ್ರ್ಯೂಯಿಂಗ್ ಕಂಪನಿ 'ಗಾಂಧಿ ಬಾಟ್' ಬ್ರ್ಯಾಂಡ್ ಬೀರ್ ಗಳ ಪ್ರಚಾರಕ್ಕೆ ಗಾಂಧೀಜಿ ಅವರ ಹೆಸರು ಬಳಸುವ ಮುನ್ನ ಅವರ ಮೊಮ್ಮಗಳು ಹಾಗೂ ಮೊಮ್ಮಗನ ಅನುಮತಿ ಕೋರಿದ್ದೆವು. ಅವರ ಒಪ್ಪಿಗೆ ಮೇರೆ ಗಾಂಧಿ ಚಿತ್ರವನ್ನು ಬಳಸಿಕೊಂಡಿದ್ದೇವೆ. ಆದರೆ, ಇದರಿಂದ ಜನರ ಭಾವನೆಗೆ ಧಕ್ಕೆ ಉಂಟಾಗಿದ್ದಾರೆ ಕ್ಷಮಿಸಿ ಎಂದು ಪ್ರತಿಕ್ರಿಯಿಸಿದೆ.
ಜನಾರ್ಧನ್ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ಸೋಮವಾರ ನಡೆಯುವ ಸಾಧ್ಯತೆಯಿದೆ. ಅದರೆ, ಕಾನೂನು ಬದ್ಧವಾಗಿ ಅಮೆರಿಕದ ಸಂಸ್ಥೆಗೆ ನೋಟಿಸ್ ಕೊಡಲು ಸಾಧ್ಯವಾಗುವುದೇ ಎಂಬ ಪ್ರಶ್ನೆ ಎದ್ದಿದೆ.ಇಂಥ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ನ್ಯಾಯ ದೊರಕಿಸಿಕೊಡುವ ಹೊಸ ಕಾನೂನನ್ನು ಸೃಷ್ಟಿಸಬೇಕು ಎಂದು ವಕೀಲರು ಅಭಿಪ್ರಾಯಪಟ್ಟಿದ್ದಾರೆ.
ಭಾರತದ 1971ರ Prevention of Insults to National Honour Act ಹಾಗೂ ಐಪಿಸಿ ಸೆಕ್ಷನ್ 124 ಎ ಅನ್ವಯ ಪಿಟೀಷನ್ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. (ಪಿಟಿಐ)
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications