ಸಿಸಿಟಿವಿ ದೃಶ್ಯ: ತಡರಾತ್ರಿಯಲ್ಲಿ ಆಟಗಾರ್ತಿ ಎಳೆದಾಡಿದ ಕೋಚ್
ಹೈದರಾಬಾದ್, ಜ.14: ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ನಡೆದ ಆಘಾತಕಾರಿ ಘಟನೆಯೊಂದರ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಮಾಧ್ಯಮಗಳಿಂದ ಬಹಿರಂಗವಾಗಿದೆ. ತಡರಾತ್ರಿ ವೇಳೆ ಟೇಬಲ್ ಟೆನಿಸ್ ತಂಡದ ಆಟಗಾರ್ತಿಯನ್ನು ಕೋಚ್ ಎಳೆದಾಡುವ ದೃಶ್ಯ ಹೊರ ಬಿದ್ದಿದೆ.
ಆಂಧ್ರಪ್ರದೇಶದಲ್ಲಿ ಟೇಬಲ್ ಟೆನ್ನಿಸ್ ಕೋಚ್ ಮಹಿಳಾ ಕ್ರೀಡಾಪಟುವಿನ ಜತೆ ಹೋಟೆಲ್ ರೂಂನ ಹೊರಗೆ ಮೈ ಮುಟ್ಟಿ ಎಳೆದಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಡರಾತ್ರಿ ಕೋಚ್ನ ರೂಂನಿಂದ ಇನ್ನು ಕೆಲವು ಹುಡುಗಿಯರು ಹೊರಗೆ ಬರುತ್ತಿರುವುದು ಕೂಡಾ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳು ವಿವಾದ ಸೃಷ್ಟಿಸಿವೆ. [ಲಂಡನ್ ಥಿಯೇಟರ್ ನಲ್ಲಿ ಭೂತ ಕಾಣಿಸ್ತು!]
ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ನಡೆದ 76ನೇ ನ್ಯಾಷನಲ್ ಕೆಡೆಟ್ ಹಾಗೂ ಸಬ್ ಜ್ಯೂನಿಯರ್ ಟೇಬಲ್ ಟೆನ್ನಿಸ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಆಗಮಿಸಿದ ಚತ್ತೀಸ್ಗಢದ ಜ್ಯೂನಿಯರ್ ಟೀಂನ ಸದಸ್ಯೆ ಮತ್ತು ಕೋಚ್ ಈ ರೀತಿ ಎಳೆದಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಡಿ.26ರಂದು ನಡೆದ ಈ ಘಟನೆಯ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.

ಸಿಸಿಟಿವಿ ದೃಶ್ಯಾವಳಿಗಳು ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ ಕ್ರಮ ಕೈಗೊಂಡಿರುವ ಛತ್ತೀಸ್ ಗಢ ಟೇಬಲ್ ಟೆನಿಸ್ ಅಸೋಸಿಯೇಷನ್ಸ್ ಮಹಿಳಾ ಕ್ರೀಡಾಪಟು ಹಾಗೂ ತರಬೇತುದಾರರನ್ನು ವಜಾಗೊಳಿಸಿದ್ದಾರೆ. ಮುಂಬರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಇಬ್ಬರು ಪಾಲ್ಗೊಳ್ಳುವಂತಿಲ್ಲ. ಸಿಸಿಟಿವಿ ದೃಶ್ಯ ವಿವಾದ ಸೃಷ್ಟಿಸಿದ ಕೂಡಲೇ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ಅಮಿತಾಬ್ ಶುಕ್ಲಾ ರಾಜಿನಾಮೆ ನೀಡಿದ್ದಾರೆ.
ಹೋಟೆಲ್ ರೂಮಿನೊಳಗೆ ಏನು ನಡೆಯಿತು. ಮಹಿಳಾ ಆಟಗಾರ್ತಿಯನ್ನು ಕೋಚ್ ಏಕೆ ಎಳೆದಾಡುತ್ತಿದ್ದ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಸಿಕ್ಕಿಲ್ಲ. ಅದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಅಸೋಸಿಯೇಷನ್ ಅಧ್ಯಕ್ಷ ಶರದ್ ಶುಕ್ಲಾ ಕೋಚ್ ಮತ್ತು ಕ್ರೀಡಾಪಟು ಮೊಬೈಲ್ ಫೋನ್ಗಾಗಿ ಜಗಳವಾಡುತ್ತಿರುವುದು ಸಿಸಿಟಿವಿ ದೃಶ್ಯದಿಂದ ಕಂಡು ಬಂದಿದೆ. ಬೇರೆ ಏನು ಇಲ್ಲ ಎಂದಿದ್ದಾರೆ. [ಬೆಂಗಳೂರನ್ನು ಕಾಯಲಿವೆ 3,500 ಸಿಸಿ ಕ್ಯಾಮರಾಗಳು]
ಅದರೆ, ಸಿಸಿಟಿವಿ ದೃಶ್ಯಾವಳಿ ವಿವಾದ ಇನ್ನೂ ತಣ್ಣಗಾಗಿಲ್ಲ. ಛತ್ತೀಸ್ ಗಢ ತಂಡಕ್ಕೆ 19ರ ಹರೆಯ ಕೋಚ್ ನೇಮಕಾತಿ ಮಾಡಿದ್ದರೆ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. (ಏಜೆನ್ಸೀಸ್)
ವಿವಾದ ಸೃಷ್ಟಿಸಿರುವ ಸಿಸಿಟಿವಿ ದೃಶ್ಯಾವಳಿ ಹಾಗೂ ಶರದ್ ಶುಕ್ಲಾ ಪ್ರತಿಕ್ರಿಯೆ ಇರುವ ವಿಡಿಯೋ ನೋಡಿ...
-
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್









Click it and Unblock the Notifications