ಸಿಎಂ ವಿರುದ್ಧ ಅವಾಚ್ಯ ಶಬ್ದ, ನಟಿ ಕಮ್ ಶಾಸಕಿ ರೋಜಾ ಸಸ್ಪೆಂಡ್
ಹೈದರಾಬಾದ್, ಡಿ.18: ವಿಧಾನಸಭೆ ಅಧಿವೇಶನ ಜಾರಿಯಲ್ಲಿರುವಾಗಲೇ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಅವಾಚ್ಯ ಶಬ್ದ ಬಳಸಿ ನಿಂದಿಸಿದ ಆರೋಪವನ್ನು ಶಾಸಕಿ ರೋಜಾ ಮೇಲೆ ಹೊರೆಸಲಾಗಿದೆ. ನಟಿ ಕಮ್ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ನಾಯಕಿ ರೋಜಾ ಅವರನ್ನು ಒಂದು ವರ್ಷದ ಅವಧಿಗೆ ಸದನದಿಂದ ಅಮಾನತು ಮಾಡಿ ಸ್ಪೀಕರ್ ಕೊಡಲಾ ಶಿವಪ್ರಸಾದ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಕಾಲ್ ಮನಿ ಹಗರಣಕ್ಕೆ ಸಂಬಂಧಿಸಿದಂತೆ ಬಿಸಿಬಿಸಿ ಚರ್ಚೆ ನಡೆಯುವಾಗ 'Kama Chandrababu, Call Chandrababu and Scam Chandrababu" ಎಂದು ಶಾಸಕಿ ರೋಜಾ ಅವರು ಎತ್ತರದ ದನಿಯಲ್ಲಿ ಕೂಗಿ ಕರೆದರು. ನಂತರ ಪಕ್ಷದ ಮುಖಂಡ, ವಿಪಕ್ಷ ನಾಯಕ ಜಗನ್ ಮೋಹನ್ ರೆಡ್ಡಿ ಜೊತೆಗೆ 50ಕ್ಕೂ ಅಧಿಕ ಸದಸ್ಯರು ಸದನವನ್ನು ತೊರೆದು ಹೊರಕ್ಕೆ ನಡೆದರು.
ಸಂವಿಧಾನದ ಬಗ್ಗೆ ಚರ್ಚೆ ಆರಂಭಿಸಲು ಸ್ಪೀಕರ್ ಮತ್ತೊಮ್ಮೆ ಮುಂದಾದಾಗ ಉಳಿದ ಕೆಲ ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಶಾಸಕರು ಕಾಲ್ ಮನಿ ಬಗ್ಗೆ ಚರ್ಚೆಗೆ ಅಗ್ರಹಿಸಿದರು..

ಸದನದಿಂದ ಹೊರಕ್ಕೆ ಹೋಗುವುದನ್ನು ಸ್ಪೀಕರ್ ಗೆ ಕೂಡಾ ತಿಳಿಸದೆ ವೈಎಸ್ಸಾರ್ ಪಕ್ಷದ ಮುಖಂಡರು ಪ್ರಮಾದ ಎಸಗಿದ್ದಾರೆ. ಸಿಎಂರನ್ನು ನಿಂದಿಸಿ ಅಸಂವಿಧಾನಾತ್ಮಕ ಶಬ್ದಗಳನ್ನು ಬಳಸಿರುವ ರೋಜಾ ಅವರ ವಿರುದ್ಧ ಕ್ರಮ ಜರುಗಿಸುವಂತೆ ಆಡಳಿತಾರೂಢ ತೆಲುಗುದೇಶಂ ಪಾರ್ಟಿಯ ವಿತ್ತ ಸಚಿವ ಯೆನಮಾಲಾ ರಾಮಕೃಷ್ಣನುಡು ಆಗ್ರಹಿಸಿದರು.
ರಕ್ತ ಚರಿತ ಕಥೆ: ರಾಯಲಸೀಮೆಯನ್ನು ನಡುಗಿಸಿದ ರಕ್ತಚರಿತದ ಅಂತ್ಯವನ್ನು ರಾಜಕೀಯ ದಾಳವಾಗಿ ಬಳಸಿಕೊಂಡ ವೈಎಸ್ ರಾಜಶೇಖರ ರೆಡ್ಡಿ ಹಾಗೂ ಜಗನ್ ಮೋಹನ್ ರೆಡ್ಡಿ ವಿರುದ್ಧ ಟಿಡಿಪಿ ಶಾಸಕರು ಮುಗಿಬಿದ್ದರು. ಮಾಜಿ ಸಚಿವ ಪೆರಿಟಾಲ ರವಿ ಸೇರಿದಂತೆ 400ಕ್ಕೂ ಅಧಿಕ ಟಿಡಿಪಿ ಮುಖಂಡರ ಹತ್ಯೆ ಆರೋಪವನ್ನು ಜಗನ್ ಮೇಲೆ ಹೊರೆಸುತ್ತಿದ್ದಂತೆ ಸದನದಲ್ಲಿ ಗದ್ದಲ ಮುಗಿಲು ಮುಟ್ಟಿತು.
ಕಾಲ್ ಮನಿ: ಬೆಂಗಳೂರಿನಲ್ಲಿ ಜನಪ್ರಿಯಗೊಂಡು ಕುಖ್ಯಾತಿ ಗಳಿಸಿರುವ ಮೀಟರ್ ಬಡ್ಡಿ ದಂಧೆಯ ಮಾದರಿಯ ಲೇವಾದೇವಿ ವ್ಯವಹಾರ ಇದಾಗಿದೆ. ಆಂಧ್ರಪ್ರದೇಶದಲ್ಲಿ ಸುಮಾರು 80ಕ್ಕೂ ಅಧಿಕ ಕಾಲ್ ಮನಿ ಆಪರೇಟರ್ ಗಳನ್ನು ಗುರುತಿಸಲಾಗಿದೆ. ಕಾಲ್ ಮಾಡಿದರೆ ಸಾಕು ಮನೆ ಬಾಗಿಲಿಗೆ ಹಣವನ್ನು ತಲುಪಿಸಲಾಗುತ್ತದೆ. ಆದರೆ, ಅವರು ಕೇಳಿದ್ದಷ್ಟು ಬಡ್ಡಿ ನೀಡಬೇಕು. ಹಾಗೂ ಯಾವಾಗ ಬೇಕಾದ್ರೂ ವ್ಯವಹಾರ ನಿಲ್ಲಿಸಿ ಅಸಲು ಸಮೇತ ಎಲ್ಲವನ್ನು ಚುಕ್ತಾ ಮಾಡಬೇಕಾಗುತ್ತದೆ. (ಪಿಟಿಐ)
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications