ತೆಲಂಗಾಣ ತಾಯಿ ಸೋನಿಯಾಗೆ ದೇಗುಲ
ಹೈದರಾಬಾದ್, ಜ.8: ದಶಕಗಳ ಬೇಡಿಕೆ ಈಡೇರಿಸಿದ ಭಾಗ್ಯ ದೇವತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆಂಧ್ರದ ಕಾಂಗ್ರೆಸ್ ಶಾಸಕರೊಬ್ಬರಿಗೆ ದೇವತೆಯಾಗಿ ಕಾಣಿಸಿದ್ದಾರೆ. ಸೋನಿಯಾ ಪ್ರತಿಮೆ ನಿರ್ಮಿಸಿ ದೇಗುಲ ಸ್ಥಾಪನೆ ಕಾರ್ಯ ಭರದಿಂದ ಸಾಗುತ್ತಿದೆ.
ತೆಲಂಗಾಣ ರಾಜ್ಯ ರಚನೆಗೆ ಯುಪಿಎ ಸರ್ಕಾರ ಚಾಲನೆ ನೀಡಿದ ಬೆನ್ನಲ್ಲೇ ಸೋನಿಯಾ ಗಾಂಧಿ ಅವರ ಹೆಸರಿನಲ್ಲಿ ದೇಗುಲ ನಿರ್ಮಾಣಕ್ಕೆ ಮುಂದಾಗಲಾಯಿತು. ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿರುವ ಜಾಗವೊಂದರಲ್ಲಿ 'ಸೋನಿಯಾ ಗಾಂಧಿ ಶಾಂತಿವನ' ಸ್ಥಾಪಿಸಿ ಅಲ್ಲಿ ಸೋನಿಯಾ ಅವರ ಪ್ರತಿಮೆಯನ್ನು ನಿಲ್ಲಿಸಲು ಮಾಜಿ ಸಚಿವ ಶಂಕರ್ ರಾವ್ ಅವರು ಇಚ್ಛಿಸಿದ್ದಾರೆ. ಈ ಜಾಗ ಶಂಕರ್ ರಾವ್ ಅವರ ಪುತ್ರಿ ಸುಸ್ಮಿತಾ ಅವರ ಹೆಸರಿನಲ್ಲಿದೆ.

ಲಕ್ಷ್ಮಿ ದೇವರನ್ನು ಹೋಲುವ ಸೋನಿಯಾ ಗಾಂಧಿ
ಲಕ್ಷ್ಮಿ ದೇವರನ್ನು ಹೋಲುವ ಸೋನಿಯಾ ಗಾಂಧಿ ಅವರ ಪ್ರತಿಮೆ ಬರೋಬ್ಬರಿ 500 ಕೆಜಿ ತೂಗುತ್ತದೆ.

ಈ ಶಿಲ್ಪವನ್ನು ಕೆತ್ತಿದ್ದು ಸೀಮಾಂಧ್ರ ಭಾಗದ ಶಿಲ್ಪಿ
ಕುತೂಹಲಕಾರಿ ಸಂಗತಿ ಎಂದರೆ ಸೀಮಾಂಧ್ರ ಭಾಗಕ್ಕೆ ಸೇರಿದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಲ್ಪಿಯೊಬ್ಬರು ಈ ಶಿಲ್ಪವನ್ನು ಕೆತ್ತಿದ್ದಾರೆ.

ತೆಲಂಗಾಣ ದೇವತೆಯ ಜನ್ಮದಿನ
2013ರ ಡಿಸೆಂಬರ್ 9 ರಂದು ಸೋನಿಯಾ ಗಾಂಧಿ ದೇಗುಲ ನಿರ್ಮಾಣ ಕಾರ್ಯಕ್ಕೆ ನಾಂದಿ ಹಾಡಲಾಯಿತು. ಸೋನಿಯಾ ಅವರ ಹುಟ್ಟುಹಬ್ಬವನ್ನು ದೇವತೆಯ ಜನ್ಮದಿನ ಎಂದೇ ಆಚರಿಸಲಾಯಿತು. ಅಂದೇ ಪಿ ಚಿದಂಬರಂ ಅವರು ಮಧ್ಯರಾತ್ರಿ ವೇಳೆ ತೆಲಂಗಾಣ ರಾಜ್ಯ ರಚನೆಯ ಆದೇಶವನ್ನು ಪ್ರಕಟಿಸಿದರು.

ಪುತ್ರಿ ಸುಸ್ಮಿತಾ ಜತೆ ಶಂಕರ್ ರಾವ್
ಈ ರೀತಿ ವ್ಯಕ್ತಿಪೂಜೆ ಅಭಿಮಾನದ ಪರಾಕಾಷ್ಠೆ ಮೆರೆದ ಉದಾಹರಣೆಗಳು ಈ ಹಿಂದೆ ಕೂಡಾ ಘಟಿಸಿದೆ. ನಟಿ ಖುಷ್ಬೂ, ನಟ, ರಾಜಕಾರಣಿ ಎಂಜಿ ರಾಮಚಂದ್ರನ್, ನಟ ಅಮಿತಾಬ್ ಬಚ್ಚನ್, ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರ ಪ್ರತಿಮೆ ಸಹಿತ ದೇಗುಲಗಳು ಕಾಣಬಹುದು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications