ಹುಬ್ಬಳ್ಳಿ-ಧಾರವಾಡಕ್ಕೆ ತೆರಳುವವರಿಗೆ ಸಹಾಯಕವಾಗಲಿದೆ ಈ ಆ್ಯಪ್
ಹುಬ್ಬಳ್ಳಿ, ಅಕ್ಟೋಬರ್ 12: ಇನ್ನುಮುಂದೆ ನೀವು ಹುಬ್ಬಳ್ಳಿಗೆ ಬಂದು ದಾರಿ ಹೋಕರನ್ನು ತಡೆದು ಯಾವ ಸ್ಥಳ ಎಲ್ಲಿ ಬರುತ್ತೆ ಎಂದು ಕೇಳಿ ತಲೆ ಕಡೆಸಿಕೊಳ್ಳಬೇಕಾಗಿಲ್ಲ. ಇದಕ್ಕೆಲ್ಲಾ ಒಂದು ಪರಿಹಾರ ಎಂಬಂತೆ ಹೊಸ ಆ್ಯಪ್ ಸಿದ್ದಗೊಂಡಿದೆ.
ಅವಳಿ ನಗರಗಳ ಪ್ರಮುಖ ಆಸ್ಪತ್ರೆಗಳು, ಪೊಲೀಸ್ ಠಾಣೆಗಳು, ಹೋಟೆಲ್ಗಳು, ಕಾಲೇಜುಗಳು, ಅಷ್ಟೆ ಅಲ್ಲ ಪಬ್ ಮತ್ತು ಬಾರ್ ಗಳ ಬಗ್ಗೆ ಮಾಹಿತಿ ತಿಳಿಯಲು ನೀವು ಈ ಆ್ಯಪ್ ಬಳಸಬಹುದು.
ಅಂದಹಾಗೆ ಈ ಆ್ಯಪ್ ತಯಾರಿಸಿದ್ದು ಹುಬ್ಬಳ್ಳಿಯ ನಿವಾಸಿಯಾದ ಗೌರೀಶ್. ದಾವಣಗೆರೆಯ ಬಾಪೂಜಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಕಲಿತಿರುವ ಇವರು ಎಂಜಿನಿಯರಿಂಗ್ ಕಲಿತು ಕೆಲಸಕ್ಕಾಗಿ ಅವರಿವರ ಎದಿರು ಕೈಕಟ್ಟಿ ನಿಲ್ಲುವ ಬದಲು ಸಮಾಜಕ್ಕೆ ತನ್ನದೇ ಆದ ಕೊಡುಗೆ ಕೊಡಲು ಈ ಆ್ಯಪ್ ಸಿದ್ಧಪಡಿಸಿದ್ದಾರೆ.

ಹೊರ ಊರಿನಿಂದ ಬರುವವರಿಗಾಗಿ ಈ ಆ್ಯಪ್
"ವೆಡ್ಡಿಂಗ್ ಇನ್ವಿಟೇಷನ್ ಎನ್ನುವ ಆ್ಯಪ್ ಅನ್ನು ಮೊದಲು ಸಿದ್ಧಪಡಿಸಿದ್ದದ್ದೆ. ಇದೀಗ ಅವಳಿ ನಗರದ ಮತ್ತು ಹೊರ ಊರುಗಳಿಂದ ಬರುವ ಜನರಿಗೆ ಸುಲಭವಾಗಿ ಊರಿನ ಬಗ್ಗೆ ತಿಳಿದುಕೊಳ್ಳಲು ಹೊಸ ಆ್ಯಪ್ ತಯಾರು ಮಾಡಿದ್ದೇನೆ," ಎನ್ನುತ್ತಾರೆ ಗೌರೀಶ್.

ನಾಲ್ಕು ಎಂಬಿ ಆ್ಯಪ್
'mycitie' ಎನ್ನುವ ಈ ಆ್ಯಪ್ ನಾಲ್ಕು ಎಂ.ಬಿ. ಇದೆ. 'ಬೆಟಾ' ಮಾದರಿಯಲ್ಲಿ ಈ ಆ್ಯಪ್ ಸಿದ್ಧಗೊಂಡಿದೆ.

ನಗರದ ಪ್ರಮುಖ ಸ್ಥಳಗಳ ಮಾಹಿತಿ
ಆ್ಯಪ್ ನಲ್ಲಿ ನಗರದ ಮತ್ತು ಸುತ್ತ ಮುತ್ತಲಿರುವ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳು, ಸಿನಿಮಾ ಮಂದಿರಗಳು, ಶಾಲೆಗಳ ಬಗ್ಗೆ ಮಾಹಿತಿ ಇದೆ.

ಸ್ಥಳಗಳ ಬಗ್ಗೆ ಖಚಿತ ಮಾಹಿತಿ
ಆಸ್ಪತ್ರೆ, ಹೋಟೆಲ್, ಕಾಲೇಜು ಆಯ್ಕೆ ಮಾಡಿಕೊಂಡ ಬಳಿಕ ಅದು ಇರುವ ವಿಳಾಸ, ದೂರವಾಣಿ ಸಂಖ್ಯೆ, ನಿಗದಿತ ಸ್ಥಳಕ್ಕೆ ಹೇಗೆ ತಲುಪಬೇಕು ಎನ್ನುವುದರ ಬಗ್ಗೆಯೂ ಇದರಲ್ಲಿ ಮಾಹಿತಿ ಇದೆ. ಇನ್ನು ಈ ಆ್ಯಪ್ ಗ್ರಾಮೀಣ ಜನರಿಗೆ ಮತ್ತು ಬೇರೆಯ ಊರುಗಳಿಂದ ಬಂದ ಜನರಿಗೆ ಉಪಯೋಗವಾಗಲಿದೆ
-
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು












Click it and Unblock the Notifications