ಒಲಿಂಪಿಕ್ 2017: ವೀಕ್ಷಕರು, ಕ್ರೀಡಾಪಟುಗಳಿಗೆ ಜೀವ ವಿಮೆ
ಹುಬ್ಬಳ್ಳಿ, ಫೆಬ್ರವರಿ, 4: ರಾಜ್ಯಮಟ್ಟದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಎಲ್ಲ ಕ್ರೀಡಾಪಟುಗಳಿಗೆ, ವೀಕ್ಷಕರಿಗೆ ಜೀವ ವಿಮೆ ಮಾಡಿಸಲಾಗಿದೆ ಎಂದು ರಾಜ್ಯ ಒಲಿಂಪಿಕ್ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಗೋವಿಂದರಾಜು ತಿಳಿಸಿದರು.
ಈ ಕುರಿತು ಒನ್ ಇಂಡಿಯಾದೊಂದಿಗೆ ಮಾತನಾಡಿ, ಕ್ರೀಡಾಕೂಟ ನಡೆಯುವ ಸಂದರ್ಭದಲ್ಲಿ ಪ್ರೇಕ್ಷಕರಾಗಲಿ ಅಥವಾ ಕ್ರೀಡಾಳುಗಳಾಗಲಿ ಮೃತಪಟ್ಟರೆ ಅವರಿಗೆ 10 ಲಕ್ಷ ರೂ. ಜೀವ ವಿಮೆಯಿಂದ ಪರಿಹಾರ ನೀಡಲಾಗುವುದು ಇದಕ್ಕಾಗಿ ಯುವಜನ ಮತ್ತು ಕ್ರೀಡಾ ಇಲಾಖೆ ಈ ಜೀವ ವಿಮೆಯನ್ನು ಮಾಡಿಸಿದೆ ಎಂದರು. ಕ್ರೀಡಾ ಇಲಾಖೆಯು ನ್ಯೂ ಇಂಡಿಯಾ ಇನ್ಸೂರೇಶ್ಸ್ ಕಂಪನಿಗೆ ವಿಮಾ ಮೊತ್ತ ರು. 55,600 ಗಳನ್ನು ಈಗಾಗಲೆ ಪಾವತಿಸಲಾಗಿದೆ ಎಂದರು.[ಧಾರವಾಡದಲ್ಲಿ ರಂಗೇರಿದ ರಾಜ್ಯ ಒಲಿಂಪಿಕ್ ಹವಾ]

ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಕ್ರೀಡಾಕೂಟವೊಂದಕ್ಕೆ ವಿಮಾ ಸೌಲಭ್ಯ ಪಡೆದುಕೊಂಡಿದೆ. ಕ್ರೀಡೆಗೆ ಹೆಸರು ನೋಂದಾಯಿಸಿರುವ 3980 ಕ್ರೀಡಾಪಟುಗಳು ಮತ್ತು 499 ತಾಂತ್ರಿಕ ಸಿಬ್ಬಂದಿಗಳು ಸೇರಿದಂತೆ ವೀಕ್ಷಕರಿಗೂ ವಿಮಾ ಸೌಲಭ್ಯ ದೊರಕಲಿದೆ. ಜೊತೆಗೆ ಮೈದಾನ ಮತ್ತು ಕ್ರೀಡಾಳುಗಳಿಗೆ ನೀಡಿರುವ ವಸತಿಗೃಹಗಳಲ್ಲಿ ಏನಾದರೂ ಅವಘಡ ಸಂಭವಿಸಿದರೆ, ಕಾಲ್ತುಳಿತ ಅಥವಾ ಗದ್ದಲ ಉಂಟಾದರೆ ಕ್ರೀಡಾ ಪಟುಗಳು ಹಾಗೂ ವೀಕ್ಷಕರಿಗೂ ವಿಮಾ ಸೌಕರ್ಯ ದೊರಕಲಿದೆ. ಮೃತಪಟ್ಟವರಿಗೆ ರು 10 ಲಕ್ಷ ಮತ್ತು ಗಾಯಗೊಂಡರೆ 2 ಲಕ್ಷ ರೂ. ಹಣ ಸಿಗಲಿದೆ ಎಂದರು.

ಇದಕ್ಕಾಗಿ ಮೊಬೈಲ್ ತಂತ್ರಾಂಶ ಕೂಡ ಇದ್ದು ಗೂಗಲ್ ಪ್ಲೇ ಸ್ಟೋರಿನಲ್ಲಿ scoreup-koa ಎಂಬ ಆಪ್ ಅನ್ನು ಡೌನಲೋಡ್ ಮಾಡಿಕೊಳ್ಳಬಹುದು. ವಿವರಗಳನ್ನು ವೆಬಸೈಟ್ ಮೂಲಕ ನೋಡಬಹುದು. ವೆಬಸೈಟ್ ವಿಳಾಸ www.scoreup-koa.in ಎಂದು ವಿವರಿಸಿದರು.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications