Get Updates
Get notified of breaking news, exclusive insights, and must-see stories!

ಹುಬ್ಬಳ್ಳಿ: ಜಗದೀಶ್ ಶೆಟ್ಟರ್-ದೇಶಪಾಂಡೆ ನಡುವೆ ಮಾತಿನ ಚಕಮಕಿ

ಹುಬ್ಬಳ್ಳಿ, ನವೆಂಬರ್ 17: ಹುಬ್ಬಳ್ಳಿಯಲ್ಲಿ ಇಂದು ಇಂದಿರಾ ಕ್ಯಾಂಟೀನ್ ಉದ್ಘಾಟನೆ ಸಂದರ್ಭ ಹಿರಿಯ ರಾಜಕೀಯ ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಇಂದಿರಾ ಕ್ಯಾಂಟೀಸ್ ಉದ್ಘಾಟನೆಗೆ ಮಾಜಿ ಸಿಎಂ ಬಿಜೆಪಿಯ ಜಗದೀಶ್ ಶೆಟ್ಟರ್ ಮತ್ತು ಕಾಂಗ್ರೆಸ್ ಸಚಿವ ಆರ್‌.ವಿ.ದೇಶಪಾಂಡೆ ಅವರು ಆಗಮಿಸಿದ್ದರು, ಈ ಸಂದರ್ಭ ವಿಷಯವೊಂದಕ್ಕೆ ಸಂಬಂಧಿಸಿದಂತೆ ಪರಸ್ಪರ ನಾಯಕರು ಮಾತಿನ ಸಮರಕ್ಕೆ ಇಳಿದರು.

Quarrel between Jagadish Shettar and RV Deshpande

ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಸರ್ಕಾರ 30% ಹಣ ನೀಡುತ್ತದೆ ಉಳಿದ 70% ಹಣ ಪಾಲಿಕೆ ಭರಿಸಬೇಕಾಗುತ್ತದೆ. ಆದರೆ ಹಬ್ಬಳ್ಳಿ-ಧಾರವಾಡ ಪಾಲಿಕೆ ಸಂಕಷ್ಟದಲ್ಲಿದ್ದು ಆ ಹಣವನ್ನು ರಾಜ್ಯ ಸರ್ಕಾರವೇ ನೀಡಬೇಕು ಎಂದು ಜಗದೀಶ್ ಶೆಟ್ಟರ್ ಆಗ್ರಹ ಮಾಡಿದರು.

ಇದಕ್ಕೆ ಕೆರಳಿದ ದೇಶಪಾಂಡೆ ಅವರು, ಸರ್ಕಾರ ತಾನು ಕೊಡಬೇಕಾದದ್ದನ್ನು ಕೊಡುತ್ತದೆ. ಪಾಲಿಕೆಯಿಂದ ಕೊಡಬೇಕಾದುದ್ದನ್ನು ಪಾಲಿಕೆಯೇ ಕೊಡಬೇಕು ಎಂದು ಕಠುವಾಗಿ ಹೇಳಿದರು.

ಇದು ಜಗದೀಶ್ ಶೆಟ್ಟರ್ ಅವರನ್ನು ಕೆರಳಿಸಿತು, ಪಾಲಿಕೆ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಶೇ.70ರಷ್ಟು ಅನುದಾನವನ್ನು ಸರ್ಕಾರವೇ ನೀಡಬೇಕು ಎಂದು ಪಟ್ಟು ಹಿಡಿದರು.

ಕೊನೆಗೆ ಮಣಿದ ಸಚಿವ ದೇಶಪಾಂಡೆ ಅವರು 'ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದಾಗ, ಪರಿಸ್ಥಿತಿ ತಿಳಿಯಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+