ತೊಗಾಡಿಯಾ ಬದಲಿಗೆ ಓವೈಸಿ ಎನ್ ಕೌಂಟರ್ ಮಾಡಿ: ಮುತಾಲಿಕ್
ಹುಬ್ಬಳ್ಳಿ, ಫೆಬ್ರವರಿ 05 : ತೊಗಾಡಿಯಾ ಅವರ ಎನ್ ಕೌಂಟರ್ ಮಾಡುವ ಬದಲು , ಹಿಂದು ವಿರೋಧಿ ಓ ವೈ ಸಿ ಎನ್ ಕೌಂಟರ್ ಮಾಡಬೇಕಿತ್ತು, ಆದರೆ ಈ ಹಿಂದುಸ್ತಾನದಲ್ಲಿಯೇ ಹಿಂದೂ ಹೋರಾಟಗಾರನ ಎನ್ ಕೌಂಟರ್ ಮಾಡಲು ಮುಂದಾಗಿದ್ದು ದುರಂತ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಹುಬ್ಬಳ್ಳಿಯಲ್ಲಿ ಪ್ರವೀಣ್ ಭಾಯಿ ತೊಗಾಡಿಯಾ ಅಭಿಮಾನಿಗಳ ಸಂಘಟನೆ ಉದ್ಘಾಟನಾ ಸಮಾರಂಭದಲ್ಲಿ ಸೋಮವಾರ ಮಾತನಾಡಿದ ಅವರು, ಹಿಂದು ಸಮಾಜವನ್ನು ಬಳಸಿಕೊಂಡು ಬಿ ಜೆ ಪಿ ಅಧಿಕಾರ ಹಿಡಿದಿದ್ದಾರೆ. ಹಿಂದೂ ಹೋರಾಟಗಾರ ತೆಲೆಯ ಮೇಲೆ ಕಾಲಿಟ್ಟು ಬಿ ಜೆ ಪಿ ಅಧಿಕಾರ ಮಾಡುತ್ತಿದೆ. ನಮ್ಮ ಹೋರಾಟವನ್ನು ಬಳಸಿಕೊಂಡು ಬಿ ಜೆ ಪಿ ಅವರು ಅಧಿಕಾರ ಹಿಡಿದಿದ್ದಾರೆ ಎಂದರು.
ಅವರಿಗೆ ತಕ್ಕ ಪಾಠ ಕಲಿಸುವ ಕಾಲ ಬಂದಿದೆ. ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ರೀತಿ ದರ್ಪ ಬರಲು ಬಿಜೆಪಿ ದುರಾಡಳಿತವೇ ಕಾರಣ, 50 ವರ್ಷದಲ್ಲಿ ಕಾಂಗ್ರೆಸ್ ಲೂಟಿ ಮಾಡಿದಕ್ಕಿಂತ ಹೆಚ್ಚು, 5 ವರ್ಷದಲ್ಲಿ ಬಿ ಜೆ ಪಿ ಅವರು ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.