ಮಹಾದಾಯಿ ವಿಚಾರ ಮೋದಿ ಮಧ್ಯ ಪ್ರವೇಶಕ್ಕೆ ಕೋನರೆಡ್ಡಿ ಆಗ್ರಹ
ಧಾರವಾಡ, ಡಿಸೆಂಬರ್, 27 : ಮಹಾದಾಯಿ ಸಂಬಂಧ ವಿಧಾನ ಸಭೆಯಲ್ಲಿ ಎರಡು ಬಾರಿ ನಿರ್ಣಯವಾಗಿದೆ ಈ ಕೂಡಲೇ ಪ್ರಧಾನಿ ಮಧ್ಯಸ್ಥಿಕೆವಹಿಸಬೇಕು ಎಂದು ಶಾಸಕ ಎನ್.ಎಚ್. ಕೋನರೆಡ್ಡಿ ಹೇಳಿದರು.
ಉತ್ತರ ಕರ್ನಾಟಕ ಬಂದ್ ಗೆ ನನ್ನ ಸಂಪೂರ್ಣ ಬೆಂಬಲವಿದೆ. ಮಹದಾಯಿ ನೀರಿನ ವಿವಾದ ಇತ್ಯರ್ಥ ಪಡಿಸದಿದ್ದರೆ ಮುಂದೆ ಬಿಜೆಪಿಗೆ ಉತ್ತರ ಕರ್ನಾಟಕಕ್ಕೆ ಪ್ರವೇಶ ನೀಡುವುದು ಕಷ್ಟವಾಗುತ್ತದೆ. ಜನ ಈ ಕಡೆ ಕಾಲಿಡುವುದಕ್ಕೆ ಬಿಡದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದ್ದರಿಂದ ಈ ಕೂಡಲೇ ಪ್ರಧಾನಿ ಮಧ್ಯಪ್ರವೇಶಿಸಬೇಕು.

ಕಾವೇರಿ ವಿವಾದದಲ್ಲಿ ಆ ಭಾಗದ ರಾಜಕಾರಣಿಗಳು ಒಂದಾದಂತೆ ಮಹದಾಯಿ ವಿಷಯದ ಉತ್ತರ ಕರ್ನಾಟಕಭಾಗದ ಎಲ್ಲ ಪಕ್ಷದವರು ಒಂದಾಗಬೇಕಿದೆ. ಧಾರವಾಡ ಜ್ಯುಬಿಲಿ ಸರ್ಕಲ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಾದಾಯಿ ವಿವಾದ ಇತ್ಯರ್ಥಗೊಳಿಸಲು ವಿಫಲವಾಗಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿಲುವು ಖಂಡಿಸಿ ಬುಧವಾರ ಬಂದ್ಗೆ ಕರೆ ನೀಡಲಾಗಿದೆ.











Click it and Unblock the Notifications