ಎಚ್ಡಿಕೆ ಮಲೇಷ್ಯಾಗೆ ಮಜಾ ಮಾಡಲು ತೆರಳಿದ್ದರೆ ಅದು ದುರ್ದೈವ

Recommended Video

      ದೋಸ್ತಿ ಸಂಕಟಕ್ಕೆ ನೆರವಾಗ್ತಾರ ಕುಮಾರಣ್ಣ..? | hd kumaraswamy | Oneindia Kannada

      ಹುಬ್ಬಳ್ಳಿ, ಆಗಸ್ಟ್ 30: ಮಾಜಿ ಸಚಿವ ಡಿ ಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆಯನ್ನು ನೀಡಿದ್ದಾರೆ.

      ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಜೋಶಿ, ಡಿಕೆಶಿಯವರನ್ನು ಉಲ್ಲೇಖಿಸಿ, " ಉಪ್ಪು ತಿಂದವರು ನೀರು ಕುಡಿಯಲೇ ಬೇಕು" ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

      " ಮಾಧ್ಯಮದಲ್ಲಿ ಬರುತ್ತಿರುವ ಸುದ್ದಿಯಂತೆ, ಒಂದು ವೇಳೆ ಕುಮಾರಸ್ವಾಮಿ ಮಲೇಷ್ಯಾಗೆ ಮಜಾ ಮಾಡಲು ತೆರಳಿದ್ದರೆ, ಅದು ದುರ್ದೈವ" ಎಂದು ಜೋಶಿ ಹೇಳಿದ್ದಾರೆ.

      If HD Kumaraswamy Gone To Malaysia For Enjoying That Is Wrong, Prahlad Joshi

      " ಇಡಿ ಸಮನ್ಸ್ ಜಾರಿ ಮಾಡಿದ ವಿಚಾರವನ್ನು ಇಟ್ಟುಕೊಂಡು ಯಾರೂ ರಾಜಕೀಯ ಮಾಡಬಾರದು, ಇದರಲ್ಲಿ ಕೇಂದ್ರದ ಪಾತ್ರ ಏನೂ ಇಲ್ಲ" ಎಂದು ಜೋಶಿ, ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

      " ಅಧಿಕಾರ ಇದ್ದಾಗ ಜನರ ಬಳಿ ಹೋಗುವವರು, ಅಧಿಕಾರ ಹೋದ ಕೂಡಲೇ ಮಜಾ ಮಾಡಲು ಹೋಗಿದ್ದಾರೆ" ಎಂದು ಕುಮಾರಸ್ವಾಮಿಯವರ, ಮಲೇಷ್ಯಾ ಪ್ರವಾಸವನ್ನು ಜೋಶಿ ವಿಶ್ಲೇಷಿಸಿದ್ದಾರೆ.

      " ರಾಜಕೀಯ ಪ್ರೇರಿತ ದಾಳಿ ನನ್ನ ಮೇಲೆ 2017ರಿಂದ ನಡೆಯುತ್ತಲೇ ಇದೆ. ಆದರೆ ಇವೆಲ್ಲವನ್ನೂ ನಾನು ಎದಿರುಸುತ್ತೇನೆಯೇ ಹೊರತು ಯಾವುದರಿಂದಲೂ ಪಲಾಯನ ಮಾಡುವುದಿಲ್ಲ" ಎಂದು ಡಿ.ಕೆ.ಶಿವಕುಮಾರ್, ಇಡಿ ಸಮನ್ಸ್ ಬಗ್ಗೆ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+