ಹುಬ್ಬಳ್ಳಿ ಪೊಲೀಸರ ಬಲೆಗೆ ಬಿದ್ದ ಹೆದ್ದಾರಿ ದರೋಡೆಕೋರರು
ಹುಬ್ಬಳ್ಳಿ, ಆಗಸ್ಟ್, 03: ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಂ.4 ರಲ್ಲಿ ಕೊಲೆ, ದರೋಡೆ ಸೇರಿದಂತೆ ಇತರೆ ಅಪರಾಧ ಪ್ರಕರಣಗಳನ್ನು ನಡೆಸುತ್ತಿದ್ದ 6 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಮೂವರು ಅಪ್ರಾಪ್ತ ಬಾಲಕರು ಸೇರಿದ್ದಾರೆ ಎಂದು ಹು-ಧಾ ಪೊಲೀಸ್ ಕಮೀಷನರ್ ಪಾಂಡುರಂಗ ರಾಣೆ ಹೇಳಿದ್ದಾರೆ.
ಅವರು ನಗರದ ಉಪನಗರ ಪೊಲೀಸ್ ಠಾಣೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತ, ಬೈಕ್ ಮೇಲೆ ಬಂದು ಹೆದ್ದಾರಿಗಳಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು ಎಂದರು.[ಹುಬ್ಬಳ್ಳಿ: ಕರುವಿಗೆ ಕಾರು ಡಿಕ್ಕಿ, ಮಾರಕಾಸ್ತ್ರಗಳಿಂದ ಹಲ್ಲೆ]
ಸ್ಥಳೀಯ ಶಿವಪುತ್ರ ನಗರದ ಶಾಂತಪ್ಪ ಸದಾನಂದ ವೀರಾಪುರ (27), ಗಿರಣಿ ಚಾಳ ನಿವಾಸಿ ಮಹದೇವ ಸದಾಶಿವ ಭರಮಣ್ಣವರ (28) ಮತ್ತು ಹಳೇಹುಬ್ಬಳ್ಳಿಯ ಕೃಷ್ಣಾಪುರ ಓಣಿಯ ನಿವಾಸಿ ಅರ್ಜುನ ಪರಶುರಾಮ ಬುಗಡಿ(19) ಬಂಧಿತರು.[ಯಮನೂರಿಗೆ ಬರುವ ರಾಜಕಾರಣಿಗೆ ಸೆಗಣಿ ಎರಚುವ ಚಳವಳಿ]
ಬಂಧಿತರಿಂದ 7 ಮೊಬೈಲ್, 2 ಪಲ್ಸರ್ ಬೈಕ್, 1 ಆಟೋ ಮತ್ತು 6,650 ರೂ.ನಗದು ವಶಪಡಿಸಿಕೊಳ್ಳಲಾಗಿದೆ. ಇವರೊಂದಿಗೆ ಮತ್ತೆ ಮೂವರು ಅಪ್ರಾಪ್ತ ಬಾಲಕರನ್ನು ಬಂಧಿಸಲಾಗಿದ್ದು, ಇವರು 9 ವರ್ಷಗಳ ಕಾಲ ಕಳ್ಳತನ ಮಾಡುತ್ತಿದ್ದರು, ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದರು.
ಬಂಧಿತರ
ಮೇಲಿರುವ
ಆರೋಪಗಳು
ಶಾಂತಪ್ಪ
ಮತ್ತು
ಮಹಾದೇವ
ಇಬ್ಬರು
ನಗರದ
ಬೈಪಾಸ್
ಬಳಿಯ
ತಾರಿಹಾಳ
ಸೇತುವೆ
ಹತ್ತಿರ
ಬೈಕ್
ಅಡ್ಡಗಟ್ಟಿ
ಬಾಲು
ನಾಯಕ
ಎಂಬುವರನ್ನು
ಬೆದರಿಸಿ
58
ಸಾವಿರ
ರೂ.ಗಳನ್ನು
ದೋಚಿದ್ದರು.
ಇಬ್ಬರು
ಹೆದ್ದಾರಿಯಲ್ಲಿ
ದರೋಡೆ
ನಡೆಸುತ್ತಿದ್ದರೆನ್ನಲಾಗಿದೆ.
ಇನ್ನೋರ್ವ ಆರೋಪಿ ಅರ್ಜುನ ನಗರದ ಹೊರವಲಯದಲ್ಲಿನ ಅಂಚಟಗೇರಿ ಬಳಿ ಕುಂದಗೋಳ ಪಟ್ಟಣದ ಮೌಲಾಸಾಬ ಬಾಪುಸಾಬ ಚಂದರಗಿ ಎಂಬುವರನ್ನು ಕೊಲೆ ಮಾಡಿ ಅವರಿಂದ 17 ಸಾವಿರ ರೂ. ದೋಚಿದ್ದನು. ಇದೇ ವ್ಯಕ್ತಿ ಇತ್ತೀಚೆಗೆ ಉಡುಪಿ ಮೂಲದ ಮಂಜುನಾಥ ಕೃಷ್ಣಾ ಶೆಟ್ಟಿ ಎಂಬುವರ ಕಾರನ್ನು ಅಡ್ಡಗಟ್ಟಿ 4300 ರೂ. ನಗದು ಮತ್ತು ಮೊಬೈಲ್ ದರೋಡೆ ಮಾಡಿದ್ದ ಎಂದು ಆಯುಕ್ತ ರಾಣೆ ತಿಳಿಸಿದ್ದಾರೆ.