ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ : ಮಗನನ್ನು ಕೊಂದು ತಂದೆ ಆತ್ಮಹತ್ಯೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್ 21 : ಮಗನನ್ನು ಕೊಂದು ತಂದೆಯೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ನಗರದ ಸಿದ್ದರಾಮೇಶ್ವರ ಕಾಲೋನಿ ನಿವಾಸಿ ಶಂಕರ್ ಕರವೆ (34) ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಗೂ ಮುನ್ನ ಇವರು ಪುತ್ರ ರಮಾನಂದ ಕರವೆ (11)ಯನ್ನು ಹತ್ಯೆ ಮಾಡಿದ್ದಾರೆ.

ಯುವತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನ: ಅಪಾಯದಿಂದ ಪಾರುಯುವತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನ: ಅಪಾಯದಿಂದ ಪಾರು

Hubballi man commits suicide after murdering son

ತಂದೆಯ ಆತ್ಮಹತ್ಯೆ, ಮಗನ ಕೊಲೆಗೆ ಸಾಲ ಬಾಧೆ ಕಾರಣ ಎಂದು ತಿಳಿದುಬಂದಿದೆ. ಶಂಕರ್ ಕರವೆ ಅವರಿಗೆ ಎರಡು ಮದುವೆ ಆಗಿತ್ತು. ಮೊದಲನೇ ಹೆಂಡತಿ ತೀರಿ ಹೋದ ಬಳಿಕ ಮತ್ತೊಂದು ಮದುವೆ ಆಗಿದ್ದರು.

ಒಂದೇ ಗುಂಡಿಯಲ್ಲಿ ಮಣ್ಣು ಮಾಡಿ ಎಂದ್ಹೇಳಿ ಪ್ರಾಣ ಬಿಟ್ಟ ಪ್ರೇಮಿಗಳುಒಂದೇ ಗುಂಡಿಯಲ್ಲಿ ಮಣ್ಣು ಮಾಡಿ ಎಂದ್ಹೇಳಿ ಪ್ರಾಣ ಬಿಟ್ಟ ಪ್ರೇಮಿಗಳು

ಹತ್ಯೆಯಾಗಿರುವ ರಮಾನಂದ ಕರವೆ ಮೊದಲ ಹೆಂಡತಿಯ ಮಗ. ಎರಡನೇ ಮದುವೆ ಬಳಿಕ ಹೆಚ್ಚಾಗಿ ಸಾಲ ಮಾಡಿಕೊಂಡಿದ್ದರು. ಸಾಲಗಾರರು ಪದೇ-ಪದೇ ಮನೆಗೆ ಬಂದು ಕಿರುಕುಳ ನೀಡುತಿದ್ದರು. ಆದ್ದರಿಂದ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

English summary
A Hubballi man murdered his 11 year old son, before committing suicide in Siddarameshwara Nagar on December 20, 20107 night. Case registered in Old Hubballi police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X