ಹುಬ್ಬಳ್ಳಿ: ಕೈಗಳಿಲ್ಲದಿದ್ದರೂ ಸಾಧನೆ ಎಂಬ ಹಠ ಬಿಡದ ಬಾಲಕಿ, ಯುವತಿಯ ಬಾಳಿಗೆ ಬೆಳಕಾದ ಅಜ್ಜಿ
ಹುಬ್ಬಳ್ಳಿ, ಜನವರಿ, 10: ಹುಟ್ಟಿನಿಂದಲೇ ಎರಡು ಕೈಗಳನ್ನು ಕಳೆದುಕೊಂಡ ಬಾಲಕಿಯೊಬ್ಬಳು ಉಳಿದುಕೊಳ್ಳಲು ಸೂರಿಲ್ಲದೇ ಪರದಾಡುತ್ತಿದ್ದಾಳೆ. ಬಾಲಕಿ ಈಗಾಗಲೇ ತಂದೆಯನ್ನು ಕಳೆದುಕೊಂಡಿದ್ದು, ಮತ್ತೊಂದೆಡೆ ಕೈಗಿಳಿಲ್ಲವೆಂದು ಹೆತ್ತ ತಾಯಿಯೇ ಬಾಲಕಿಯನ್ನು ಒಬ್ಬೊಂಟಿಯಾಗಿ ಬಿಟ್ಟು ಹೋಗಿದ್ದಾಳೆ. ಅಷ್ಟಕ್ಕೂ ಮನಕಲಕುವ ದೃಶ್ಯಗಳು ಹುಬ್ಬಳ್ಳಿ ಪಕ್ಕದಲ್ಲಿರುವ ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ಕಂಡು ಬಂದಿವೆ.
ಲಕ್ಷ್ಮಿ 12 ವರ್ಷದ ಬಾಲಕಿ ಆಗಿದ್ದು, ಹುಟ್ಟಿನಿಂದಲೇ ಆಕೆಗೆ ಎರಡೂ ಕೈಗಳಿಲ್ಲ. ಸದ್ಯ ಅಜ್ಜಿಯ ಮಡಿಲಲ್ಲೇ ಈಕೆ ಬೆಳೆಯುತ್ತಿದ್ದಾಳೆ. ಕೈ ಇಲ್ಲದೇ ಹುಟ್ಟಿದ್ದಕ್ಕೆ ತಾಯಿ ಕೂಡ ಆರೈಕೆ ಮಾಡಲು ಮನಸ್ಸು ಮಾಡಲಿಲ್ಲ. ಈಗ ಇಕ್ಷ್ಮಿಗೆ ಒಂದು ಸೂರು ಬೇಕಾಗಿದೆ. ಎರಡು ಕೈ ಇಲ್ಲದೆ ಇದ್ದರೂ ಊಟ ಮಾಡುವುದು, ಓದುವುದು, ಬರೆಯುವುದನ್ನು ಮಾಡುತ್ತಿದ್ದಾರೆ. ಹುಟ್ಟುವಾಗಲೇ ಎರಡೂ ಕೈ ಇಲ್ಲದೇ ಹುಟ್ಟಿದ್ದಾಳೆ. ಮೂಲತಃ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದವಳಾದ ಈಕೆ, ಇದೀಗ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ತನ್ನ ಅಜ್ಜಿಯ ಮನೆಯಲ್ಲೇ ಇದ್ದಾಳೆ. ಇನ್ನು ಈಕೆ ತಂದೆ ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದಾರೆ. ಹುಟ್ಟಿದಾಗ ಇವಳಿಗೆ ಕೈ ಇಲ್ಲ ಎಂದು ಗೊತ್ತಾದಾಗ ತಾಯಿ ಕೂಡ ದೂರ ಆಗಿದ್ದಾಳೆ.

ಸೂರಿಗಾಗಿ ಪರದಾಡುತ್ತಿರಿವ ಲಕ್ಷ್ಮಿ
ಹೀಗಾಗಿ ಈಕೆಯನ್ನು ಅಜ್ಜಿಯೇ ಸಾಕಿ ಬೆಳೆಸಿದ್ದಾಳೆ. ತಂದೆ ಸಾವಿನ ನಂತರ ಲಕ್ಷ್ಮಿ ಅಕ್ಕ ಹಾಗೂ ತಮ್ಮನ ಜೊತೆ ತಾಯಿ ಕೂಡ ಗಂಜಿಗಟ್ಟಿಯಲ್ಲೇ ಬಂದು ಇದ್ದಾಳೆ. ಸದ್ಯ ಲಕ್ಷ್ಮಿ ಕುಟುಂಬ ಸೋದರ ಮಾವನ ಮನೆಯಲ್ಲೇ ಇದ್ದಾಳೆ. ಇವರಿಗೆ ಇರುವುದಕೆ ಸ್ವಂತ ಮನೆಯಿಲ್ಲ. ಎಷ್ಟು ದಿನ ಅಂತಾ ಮಾವನ ಮನೆಯಲ್ಲಿ ಇರುವುದು ಎಂಬುದು ಇವರ ಪ್ರಶ್ನೆಯಾಗಿದೆ. ಯಾಕಂದರೆ ಅಜ್ಜ, ಅಜ್ಜಿ ಇರುವವರೆಗೆ ಈ ಮನೆಯಲ್ಲಿ ಇರಬಹುದು.

ಲಕ್ಷ್ಮಿಯ ನೆರವಿಗೆ ನಿಂತ ಅಜ್ಜಿ
ಆದರೆ ನಾಳೆ ಅವರ ನಂತರ ಜೀವನ ಹೇಗೆ ಎಂದು ವಿಚಾರ ಮಾಡಲಾಗುತ್ತಿದೆ. ಲಕ್ಷ್ಮಿ ಅಕ್ಕ ಈಗ ಹುಬ್ಬಳ್ಳಿ ಹಾಸ್ಟೆಲ್ನಲ್ಲೇ ಇದ್ದು, ಆಕೆ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇನ್ನು ಚಿಕ್ಕ ತಮ್ಮ ಗಂಜಿಗಟ್ಟಿ ಗ್ರಾಮದಲ್ಲೇ ಲಕ್ಷ್ಮಿ ಜೊತೆ ಶಾಲೆಗೆ ಹೋಗುತ್ತಾನೆ. ಸದ್ಯ ಇವರಿಗೆ ಒಂದು ಸೂರು ಆದರೆ ಸಾಕಾಗಿದೆ.

ಶಾಲೆಗೆ ಹೋಗಲು ಕೂಡ ಹಿಂದೆಟು, ಏಕೆ?
ಇನ್ನು ಲಕ್ಷ್ಮಿಗೆ ಬಟ್ಟೆ ತೊಡಿಸುವುದರಿಂದ ಆಕೆಯ ಎಲ್ಲ ಕೆಲಸ ಅಜ್ಜಿನೇ ಮಾಡುತ್ತಿದ್ದಾರೆ. ಹುಟ್ಟಿನಿಂದ ಅಜ್ಜಿನೇ ಎಲ್ಲ ಕೆಲಸಗಳನ್ನು ಮಾಡುತ್ತಾ ಬಂದಿದ್ದಾಳೆ. ಲಕ್ಷ್ಮಿಗೆ ಕೃತಕ ಕೈಹಾಕಲು ಕೂಡ ಬರದಂತಾಗಿದೆ. ದೇಹದಿಂದ ಕೈಗಳು ಸ್ವಲ್ಪ ಹೊರಗೆ ಬಂದಿದ್ದರೆ ಕೃತಕ ಕೈ ಹಾಕಬಹುದಿತ್ತು. ಆದರೆ ಅವು ಭುಜಕ್ಕೆ ಅಂಟಿಕೊಂಡೇ ಇವೆ. ಇನ್ನು ಶಾಲೆಗೆ ಹೋದಾಗ ಇವಳಿಗೆ ಕೈ ಇಲ್ಲದ್ದನ್ನ ನೋಡಿದ ಮಕ್ಕಳು ಹಿಯಾಳಿಸುತ್ತಲೇ ಇರುತ್ತಾರೆ. ಹೀಗಾಗಿ ಈಕೆ ಶಾಲೆಗೆ ಹೋಗಲು ಕೂಡ ಹಿಂದೆಟು ಹಾಕುತ್ತಿದ್ದಾಳೆ. ಆದರೆ ಅಜ್ಜಿ ಇವಳ ಬೆನ್ನಿಗೆ ನಿಂತು ಶಾಲೆಗೆ ಕಳಿಹಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಲಕ್ಷ್ಮಿಯ ವಿದ್ಯಾಭ್ಯಾಸದ ವಿವರ
ಸದ್ಯ ಲಕ್ಷ್ಮಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅಜ್ಜಿ ತಟ್ಟೆಯಲ್ಲಿ ಅನ್ನ ಹಾಕಿಕೊಟ್ಟರೆ ತಾನೇ ಕಾಲಿನಿಂದಲೇ ಊಟ ಮಾಡುತ್ತಾಳೆ. ನೀರು ಕೂಡ ತಾನೇ ಕುಡಿಯುತ್ತಾಳೆ. ಕಾಲಿನಿಂದಲೇ ಬರೆಯುವುದನ್ನು ಕಲಿತಿದ್ದಾಳೆ. ಆದರೆ ಇಷ್ಟೆಲ್ಲ ಇದ್ದರೂ ಕೂಡ ಅಜ್ಜಿಯ ನಂತರ ಮುಂದೇನು ಎಂದು ಈಕೆಗೆ ಚಿಂತೆ ಕಾಡುತ್ತಿದೆ. ಅಜ್ಜಿ ಇರುವಾಗಲೇ ಜೀವನಕ್ಕೆ ದಾರಿ ಹುಡುಕಬೇಕೆಂಬುದೇ ಈಕೆಯ ಚಿಂತೆಯಾಗಿದೆ. ಇನ್ನು ಲಕ್ಷ್ಮಿಗೆ ವಿಕಲಚೇತನರ ವೇತನ ಬರುತ್ತದೆ. ಆದರೆ ಕೆಲವೊಮ್ಮೆ ಅದೂ ಬರದೇ ಇದ್ದಾಗ, ಅಜ್ಜಿ ಕರೆವ್ವಾ ಓಡಾಡಿ ವೇತನವನ್ನು ಬರುವಂತೆ ಮಾಡಬೇಕು. ಅದನ್ನೆಲ್ಲ ನೋಡುವ ಲಕ್ಷ್ಮಿ ಕಣ್ಣಲ್ಲಿ ನೀರನ್ನು ತಂದೇ ಬಿಡುತ್ತಾಳೆ. ಸದ್ಯ ಲಕ್ಷ್ಮಿ ತನ್ನ ಎರಡು ಕೈಗಿಳಿಲ್ಲದಿದ್ದರೂ, ತನ್ನ ಸ್ವಾಭಿಮಾನ ಮಾತ್ರ ಬಿಡುತ್ತಿಲ್ಲ. ಒಳ್ಳೆಯ ಶಿಕ್ಷಣ ಕಲಿತು ತನ್ನ ಕಾಲಿನ ಮೇಲೆ ನಿಲ್ಲಬೇಕು ಎನ್ನುವ ಇವಳ ಹಠ ಅದೆಷ್ಟೋ ಜನಕ್ಕೆ ಮಾದರಿಯಾಗಲಿದೆ. ಇವಳ ಸಾಧನೆಗೆ ಕೈ ಜೋಡಿಸಲು ಸಹಾಯ ಹಸ್ತ ಬೇಕಿದೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications