ಶ್ರೀರಾಮುಲು ವಿರುದ್ಧ ಆಯೋಗಕ್ಕೆ ದೂರು ಸಲ್ಲಿಸಿದ ಡಿ.ಕೆ.ಶಿವಕುಮಾರ್‌

Recommended Video

      ಶ್ರೀರಾಮುಲು ವಿರುದ್ಧ ಡಿಕೆಶಿ ಹೋರಾಟ ಆರಂಭ..!

      ಹುಬ್ಬಳ್ಳಿ, ಮೇ 10: ಮಾಜಿ ಸಚಿವ ಶಿವಳ್ಳಿ ಸಾವಿಗೆ ಕಾಂಗ್ರೆಸ್ ಕಾರಣ ಎಂದಿದ್ದ ಬಿಜೆಪಿ ಮುಖಂಡ ಶ್ರೀರಾಮುಲು ವಿರುದ್ಧ ಸಚಿವ ಡಿ.ಕೆ.ಶಿವಕುಮಾರ್ ಅವರು ಗರಂ ಆಗಿದ್ದಾರೆ.

      ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಶ್ರೀರಾಮುಲು ಹೇಳಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

      ಚುನಾವಣಾ ಸಮಯದಲ್ಲಿ ಅಸಂಬದ್ಧ ಹೇಳಿಕೆಯನ್ನು ನೀಡಿರುವ ಶ್ರೀರಾಮುಲು ಅವರ ಕಾರ್ಯ ಅಕ್ಷಮ್ಯ, ಅವರು ಕಾಂಗ್ರೆಸ್‌ ಮೇಲೆ ಆಧಾರವೇ ಇಲ್ಲದ ಆರೋಪ ಮಾಡಿದ್ದಾರೆ ಎಂದು ಡಿಕೆ.ಶಿವಕುಮಾರ್ ಆಕ್ರೋಶ ಹೊರಹಾಕಿದ್ದಾರೆ.

      Congress filled complaint against Sriramulu for false alligation: DK Shivakumar

      ಮಾಜಿ ಸಚಿವ ಶಿವಳ್ಳಿ ಅವರು ಡಿ.ಕೆ.ಶಿವಕುಮಾರ್ ಅವರ ಪರಮಾಪ್ತರಲ್ಲಿ ಒಬ್ಬರಾಗಿದ್ದರು, ಅವರನ್ನು ನೆನೆದು ನಿನ್ನೆಯಷ್ಟೆ ಡಿ.ಕೆ.ಶಿವಕುಮಾರ್ ಅವರು ಸಾರ್ವಜನಿಕವಾಗಿ ಕಣ್ಣೀರಿಟ್ಟಿದ್ದರು.

      ಭ್ರಷ್ಟಾಚಾರದ ಹಣದಿಂದ ಉಪಚುನಾವಣೆ ನಡೆಸುತ್ತದ್ದಾರೆ ಎಂದಿದ್ದ ಯಡಿಯೂರಪ್ಪ ಅವರ ವಿರುದ್ಧವೂ ಕಿಡಿಕಾರಿರುವ ಡಿಕೆ ಶಿವಕುಮಾರ್, ಭ್ರಷ್ಟಾಚಾರ ನಡೆದಿದ್ದರೆ ಅದರ ಬಗ್ಗೆ ದಾಖಲೆ ಬಿಡುಗಡೆ ಆಗಲಿ, ಯಾರು ಭ್ರಷ್ಟರು ಎಂದು ತನಿಖೆ ಆಗಲಿ, ಚುನಾವಣೆ ಆಯೋಗ ತನಿಖೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.

      ಈ ಉಪಚುನಾವಣೆ ಶ್ರೀಮಂತರು ಬಡವರ ನಡುವೆ ನಡೆಯುತ್ತಿರುವ ಹೋರಾಟ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ, ತಮಗೆ ಕಡಿಮೆ ಮತ ಬಂದ ಕ್ಷೇತ್ರಗಳಿಗೆ ನೀರು ಸರಬರಾಜು ಮಾಡದೆ ದಬ್ಬಾಳಿಕೆ ನಡೆಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಆರೋಪ ಮಾಡಿದರು.

      ಸಂತೋಶ್ ಲಾಡ್ ಸೇರಿ ಇನ್ನೂ ಹಲವು ಕಾಂಗ್ರೆಸ್ ಮುಖಂಡರು ಶ್ರೀರಾಮುಲು ಹೇಳಿಕೆಯನ್ನು ಖಂಡಿಸಿದ್ದಾರೆ. ಮಾಜಿ ಸಚಿವ ಶಿವಳ್ಳಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು, ಈಗ ಅವರ ಪತ್ನಿ ಅವರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಸ್ಪರ್ಧಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+