ಅನಂತ್ ಕುಮಾರ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರೈಲು ವ್ಯವಸ್ಥೆ
ಹುಬ್ಬಳ್ಳಿ, ನವೆಂಬರ್ 12 : ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಅಂತ್ಯಕ್ರಿಯೆ ಮಂಗಳವಾರ ನಡೆಯಲಿದೆ. ನೈಋತ್ಯ ರೈಲ್ವೆ ಅಂತ್ಯಕ್ರಿಯೆಗೆ ಆಗಮಿಸುವ ಜನರಿಗೆ ಸಹಾಯಕವಾಗಲಿ ಎಂದು ಹುಬ್ಬಳ್ಳಿಯಿಂದ ಆಗಮಿಸುವ ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಸಿದೆ.
1959-2018: ದಿವಂಗತ ಕೇಂದ್ರ ಸಚಿವ ಅನಂತಕುಮಾರ್ ಹೆಜ್ಜೆ ಗುರುತು
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಸೋಮವಾರ ಹುಬ್ಬಳ್ಳಿಯಿಂದ ಬೆಂಗಳೂರು ಕಡೆ ಹೊರಡುವ ಹಂಪಿ ಎಕ್ಸ್ಪ್ರೆಸ್ (16591), ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್ (16590) ಮತ್ತು ಗೋಲ್ ಗುಂಬಜ್ ಎಕ್ಸ್ಪ್ರೆಸ್ (16536) ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಕೆ ಮಾಡಲಾಗಿದೆ.
2014ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣೆ ನೆನಪು
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್ ಅವರು ಸೋಮವಾರ ಮುಂಜಾನೆ ವಿಧಿವಶರಾಗಿದ್ದಾರೆ. ಮಂಗಳವಾರ ಮಧ್ಯಾಹ್ನ ಚಾಮರಾಜಪೇಟೆಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಅನಂತ್ ಕುಮಾರ್ ಅವರು ಮೂಲತಃ ಹುಬ್ಬಳ್ಳಿಯವರು. ಅವರ ಅಪಾರ ಅಭಿಮಾನಿಗಳು ಉತ್ತರ ಕರ್ನಾಟಕ ಭಾಗದಲ್ಲಿಯೂ ಇದ್ದಾರೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮತ್ತು ಅಂತಿಮ ದರ್ಶನ ಪಡೆಯಲು ನೂರಾರು ಜನರು ಆಗಮಿಸುವ ನಿರೀಕ್ಷೆ ಇದೆ.
ಅನಂತ್ ಸೇರಿ ಮೂವರು ಸಚಿವರ ಅಕಾಲಿಕ ನಿಧನ ಕಂಡ ಮೋದಿ
ಮಂಗಳವಾರದ ಕಾರ್ಯಕ್ರಮಗಳು
*
ಬೆಳಗ್ಗೆ
8
ಗಂಟೆಗೆ
ರಾಜ್ಯ
ಬಿಜೆಪಿ
ಕಚೇರಿಗೆ
ಪಾರ್ಥಿವ
ಶರೀರ
ರವಾನೆ
*
ಬೆಳಗ್ಗೆ
10
ಗಂಟೆಯಿಂದ
ನ್ಯಾಷನಲ್
ಕಾಲೇಜು
ಮೈದಾನದಲ್ಲಿ
ಅಂತಿಮ
ದರ್ಶನ
*
ಮಧ್ಯಾಹ್ನ
1
ಗಂಟೆಗೆ
ಚಾಮರಾಜಪೇಟೆಯಲ್ಲಿ
ಅಂತ್ಯಕ್ರಿಯೆ