Get Updates
Get notified of breaking news, exclusive insights, and must-see stories!

ರೈತರ ಸಮಸ್ಯೆ ಕುರಿತು ದೆಹಲಿಯಲ್ಲಿ ಆಂದೋಲನ: ಅಣ್ಣಾ ಹಜಾರೆ

ಹುಬ್ಬಳ್ಳಿ, ಜನವರಿ 2 : ರೈತರ ಸಮಸ್ಯೆ ಕುರಿತು ದೊಡ್ಡ ಮಟ್ಟದ ಆಂದೋಲನವನ್ನು ಮಾರ್ಚ್ 23 ರಂದು ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಿಳಿಸಿದರು.

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಅವರು, ಆಂದೋಲನ ಕುರಿತಾಗಿ ದೇಶವನ್ನು ಸುತ್ತುತ್ತಿದ್ದೇನೆ, ಮೋದಿ ಅವರು 3 ವರ್ಷಗಳಲ್ಲಿ ರೈತರ ಬಗ್ಗೆ ಏನನ್ನೂ ಮಾಡಿಲ್ಲ. ಮಹಾದಾಯಿ, ಕಳಬಾ ಬಡೂರಿ ಯೋಜನೆ ನೀರು ವಿವಾದದ ಕುರಿತು ಅಗತ್ಯ ಬಿದ್ದರೆ ಗೋವಾ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ ಎಂದರು.

Agitation over farmers problem on March 23 in Delhi by Anna Hazare

ಜನಲೋಕಪಾಲ್ ಮಸೂದೆಯನ್ನು ಮೋದಿ ಬಲಹೀನ ಮಾಡಿದ್ದಾರೆ. ಬೆಳಗಾವಿ ಗಡಿ ವಿವಾದ ವಿಚಾರ ಭಾರತ, ಪಾಕಿಸ್ತಾನದ ಹೋರಾಟ ಅಲ್ಲ. 2 ರಾಜ್ಯಗಳ ಮಧ್ಯೆ ಸಹಬಾಳ್ವೆ ಇರಬೇಕು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಕಿರಣ್ ಬೇಡಿ ಅವರು ನನ್ನ ಜತೆಗೆ ರೈತರ ಪರವಾಗಿ ಹೋರಾಟ ಮಾಡಿದ್ದಾರೆ. ನೂತನ ರಾಜಕೀಯ ಪಕ್ಷಕ್ಕೆ ಕಾಲಿಟ್ಟಿದ್ದಾರೆ ಆದರೆ ಅವರ ಮನಸ್ಸಿನಲ್ಲಿ ಏನಿದೆ ಎನ್ನವುದು ತಿಳಿದಿಲ್ಲ. ಹೀಗಾಗಿ ಈ ಬಾರಿ ಹೋರಾಟಕ್ಕೆ ಸೇರುವವರಿಗೆ 100 ರೂ. ಅಫಿಡೆವಿಟ್ ಮಾಡಿಕೊಂಡಿದ್ದು ಈಗಾಗಲೇ 4 ಸಾವಿರ ಅಫಿಡೆವಿಟ್ ಅರ್ಜಿಗಳು ಬಂದಿವೆ ಎಂದು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+