ನಾವು ಸನ್ಯಾಸಿಗಳಲ್ಲ, ಅವಕಾಶ ಸಿಕ್ಕರೆ ಸರ್ಕಾರ ರಚಿಸುತ್ತೇವೆ: ಕೋಟಾ ಶ್ರೀನಿವಾಸ್
ಹಾವೇರಿ, ಡಿಸೆಂಬರ್: ನಾವೇನು ಸನ್ಯಾಸಿಗಳಲ್ಲ ಆಡಳಿತ ಮಾಡುವ ಅವಕಾಶ ಸಿಕ್ಕರೆ ಸುಮ್ಮನಿರಲ್ಲ. ಬಿಜೆಪಿ ಸರ್ಕಾರ ರಚಿಸಬೇಕು ಎನ್ನುವುದು ನಮ್ಮ ಆಶಯ ಎಂದು ಬಿಜೆಪಿ ಮುಖಂಡ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ರಾಣೆಬೆನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಸರ್ಕಾರ ರಚಿಸುವ ಉದ್ದೇಶ ಇದೆ, ಐದು ಶಾಸಕರು ಬಿಜೆಪಿಗೆ ಬಂದರೆ ಸರ್ಕಾರ ರಚಿಸುವುದು ಪಕ್ಕಾ ಎಂದು ಅವರು ಹೇಳಿದರು.
ಬಿಜೆಪಿ ಎಷ್ಟು ಶಾಸಕರನ್ನಾದರೂ ಭೇಟಿ ಆಗಲಿ ಡೋಂಟ್ ಕೇರ್: ಡಿ.ಕೆ.ಶಿವಕುಮಾರ್
ಆಪರೇಷನ್ ಕಮಲ ಮಾಡುವ ಅವಶ್ಯಕತೆ ಬಿಜೆಪಿಗೆ ಇಲ್ಲ, ಆದರೆ ಯಾರೇ ಶಾಸಕರು ಬಿಜೆಪಿಗೆ ಬಂದರೂ ಸ್ವಾಗತ ಎಂದು ಅವರು ಹೇಳಿದರು.
ಸರ್ಕಾರದ ಮೇಲೆ ಅದರ ಶಾಸಕರಿಗೇ ವಿಶ್ವಾಸವಿಲ್ಲ ಎಂದು ಅವರು ಹಲವು ಶಾಸಕರ ಸ್ವ-ಇಚ್ಛೆಯಿಂದಲೇ ಪಕ್ಷ ಬಿಟ್ಟು ಬಿಜೆಪಿಯ ಜೊತೆ ಸೇರಲು ತುದಿಗಾಲಿನಲ್ಲಿದ್ದಾರೆ ಎಂದು ಅವರು ಹೇಳಿದರು.
ಅತೃಪ್ತ ಶಾಸಕ ಎಂಟಿಬಿಯಿಂದ ಕಾಂಗ್ರೆಸ್ ವಿರುದ್ಧ ಬ್ಲಾಕ್ಮೇಲ್ ತಂತ್ರ?
ಇನ್ನೂ ಮಣ್ಣಿನ ಮಕ್ಕಳ ಹೆಸರಲ್ಲಿ ಅಧಿಕಾರಕ್ಕೆ ಬಂದು ನಾಡಿನ ರೈತರನ್ನು ತುಳಿಯುತ್ತಿದ್ದಾರೆ. ಅಷ್ಟೆ ಅಲ್ಲದೇ ರಾಜ್ಯದಲ್ಲಿ ಸಮನ್ವಯ ಸಮಿತಿ ಅನ್ನೋದು ಎಲ್ಲಿದೆ..? ಎಂದು ಪ್ರಶ್ನಿಸಿದ್ರು. ಮಾಜಿ ಹಾಗೂ ಹಾಲಿ ಸಿಎಂ ಇಬ್ರೂ ನಾನೊಂದು ತೀರ ನೀನೊಂದು ತೀರ ಅಂತಿದ್ದಾರೆ ಎಂದು ಅವರು ಹೇಳಿದರು.