ಹಾವೇರಿ : ಯಡಿಯೂರಪ್ಪಗೆ ಸವಾಲ್ ಹಾಕಿದ ಸಿದ್ದರಾಮಯ್ಯ

Recommended Video

      ಹಾವೇರಿಯಲ್ಲಿ ಯಡಿಯೂರಪ್ಪನವರಿಗೆ ಸಿದ್ದರಾಮಯ್ಯ ಸವಾಲ್ | Oneindia Kannada

      ಹಾವೇರಿ, ಡಿಸೆಂಬರ್ 06 : ಹಾವೇರಿಯ ಶಿಗ್ಗಾವಿಯಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ಮುಖಂಡರು ವಿರೋಧ ಪಕ್ಷಗಳ ಮೇಲೆ ಹರಿಹಾಯ್ದರು.

      2018ರ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯ ಸಾಧಿಸುವುದಾಗಿ ಅಬ್ಬರಿಸಿದ ಸಿದ್ದರಾಮಯ್ಯ ಬಿಜೆಪಿಯ ಪರಿವರ್ತನಾ ಯಾತ್ರೆಯನ್ನು ತಮ್ಮದೇ ಶೈಲಿಯಲ್ಲಿ ಗೇಲಿ ಮಾಡಿ, ಬಿಜೆಪಿ ಮಿಷನ್ 150 ಟುಸ್‌ಸ್‌ ಎನ್ನಲಿದೆ ಎಂದರು.

      ವ್ಯಂಗ್ಯ, ಮೊನಚು ಮಾತು, ಗೇಲಿ ಕಾಂಗ್ರೆಸ್ ಸಾಧನೆ ಪಟ್ಟಿ ಎಲ್ಲವೂ ಇದ್ದ ಸಿದ್ದರಾಮಯ್ಯ ಭಾಷಣಕ್ಕೆ ಕಾಂಗ್ರೆಸ್ ಕಾರ್ಯತರು ಚಪ್ಪಾಳೆಗಳ ಸುರಿಮಳೆಗೈದರು. ಸಿದ್ದರಾಮಯ್ಯ ಅವರ ಜೊತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಕೂಡ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದರು.

      ಸಿದ್ದರಾಮಯ್ಯ ಅವರನ್ನು ಹೊಗಳಿದ ಎಸ್.ಆರ್.ಪಾಲೀಲ್ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದರು. ಸಿದ್ದರಾಮಯ್ಯ ಅವರ ಭಾಷಣದ ಮುಖ್ಯಾಂಶಗಳನ್ನು ತಿಳಿಯಲು ಮುಂದೆ ಓದಿರಿ...

      ನುಡಿದಂತೆ ನಡೆಯಲಿ

      ನುಡಿದಂತೆ ನಡೆಯಲಿ

      ಮಹದಾಯಿ ವಿಚಾರವಾಗಿ ಮಾತನಾಡಿದ ಸಿ.ಎಂ ಅವರು ಯಡಿಯೂರಪ್ಪನವರು ಮಹದಾಯಿ ವಿವಾದವನ್ನ ಕೇಂದ್ರ ಸರಕಾರದ ಸಹಾಯದಿಂದ ಒಂದೇ ತಿಂಗಳಲ್ಲಿ ಬಗೆಹರಿಸುತ್ತೆನೆಂದು ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇಂತಹ ಮಾತುಗಳು ಸಹಜ. ಯಡಿಯೂರಪ್ಪನವರು ಮಾತಿಗೆ ತಕ್ಕಹಾಗೇ ಮಹದಾಯಿ ವಿವಾದವನ್ನ ಬಗೆಹರಿಸಲಿ ಎಂದು ಬಿ ಎಸ್.ವೈ ಗೆ ಸವಾಲೆಸೆದರು.

      ಜನವರಿಯಲ್ಲಿ ಪಟ್ಟಿ ಬಿಡುಗಡೆ

      ಜನವರಿಯಲ್ಲಿ ಪಟ್ಟಿ ಬಿಡುಗಡೆ

      ಕಾಂಗ್ರೆಸ್ ಪಕ್ಷದ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಜನವರಿಯಲ್ಲಿ ಬಿಡುಗಡೆ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದರು. ಜೆಡಿಎಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಡಿಸೆಂಬರ್ 15 ರಂದು ಬಿಡುಗಡೆ ಮಾಡುತ್ತಿದೆ. ಬಿಜೆಪಿಯು ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಿದೆ.

      ಮೀಸಲಾತಿ ಹೆಚ್ಚು ಮಾಡಲು ಶಿಫಾರಸ್ಸು

      ಮೀಸಲಾತಿ ಹೆಚ್ಚು ಮಾಡಲು ಶಿಫಾರಸ್ಸು

      ಜಾತಿವಾರು ಸಮೀಕ್ಷೆ ಬಿಡುಗಡೆ ಆಗದಿರುವ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು 'ಜಾತಿವಾರು ಸಮಿಕ್ಷೆ ಬಿಡುಗಡೆಯಾಗಲು ತಡವಾಗಿರುವುದು ಸತ್ಯ. ಮಿಸಲಾತಿ ಹೆಚ್ಚುಮಾಡಲು ಶಿಫಾರಸ್ಸು ಮಾಡಿದ ಕಾರಣ ಆ ಕುರಿತು ಚರ್ಚೆ ನಡೆಯುತ್ತಿದೆ, ನಿರ್ಧಾರಕ್ಕೆ ಬಂದ ಕೂಡಲೇ ಸಮೀಕ್ಷ ಹೊರ ಬರಲಿದೆ ಎಂದು ಭರವಸೆ ನೀಡಿದರು.

      ವರ್ತೂರು ಏನೂ ಮಾಡೋಕಾಗಲ್ಲ

      ವರ್ತೂರು ಏನೂ ಮಾಡೋಕಾಗಲ್ಲ

      'ನಮ್ಮ ಕಾಂಗ್ರೆಸ್' ಎಂಬ ಹೊಸ ಪಕ್ಷ ಕಟ್ಟುತ್ತಿರುವ ಕೋಲಾರ ಶಾಸಕ ವರ್ತೂರು ವರ್ತೂರ ಪ್ರಕಾಶಗೆ ಟಾಂಗ್ ನೀಡಿದ ಸಿದ್ದರಾಮಯ್ಯ ' ಕಾಂಗ್ರೇಸ್ ಪಕ್ಷದಲ್ಲಿದ್ದು ಹೊರ ಹೋಗಿ ಹೊಸ ಪಕ್ಷ ಕಟ್ಟಿದವರು ಇನ್ನೂ ಏನು ಮಾಡೊಕೆ ಆಗಿಲ್ಲ. ವರ್ತೂರು ಪ್ರಕಾಶ್ ಕೂಡ ಕಡೆಗೆ ಏನು ಆಗದೆ ಉಳಿದುಬಿಡುತ್ತಾರೆ' ಎಂದರು.

      ಕೋಮುದಳ್ಳುರಿ ಹೊತ್ತಿಸುವ ಯತ್ನ

      ಕೋಮುದಳ್ಳುರಿ ಹೊತ್ತಿಸುವ ಯತ್ನ

      ಬ್ಯಾರಿಕೆಟ್ ಗುದ್ದಿ ದರ್ಪ ತೋರಿದ ಪ್ರತಾಪ್ ಸಿಂಹ ಅವರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ "ಪ್ರತಾಪ್ ಸಿಂಹ ಹಾಳಾಗಿ ಹೋಗಿದ್ದಾರೆ' ಎಂದರು. ಅಭಿವೃದ್ಧಿಯಿಂದ ಜನಗಳ ದೃಷ್ಠಿಯನ್ನು ಬೇರೆಡೆ ಸೆಳೆಯಲು ಹೀಗೆ ಕೋಮುದಳ್ಳರು ಹೊತ್ತಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಅವರು ಜರಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+