ನೃತ್ಯದ ವೇಳೆ ಕಮಲ ಹಿಡಿದ ಮಕ್ಕಳು: ಕೆಂಡಾಮಂಡಲರಾದ ಶಾಸಕ ಶಿವಲಿಂಗೇಗೌಡ
ಹಾಸನ ಜನವರಿ 27: ನೃತ್ಯ ಮಾಡುವ ವೇಳೆ ಶಾಲಾ ಮಕ್ಕಳು ಕಮಲದ ಹೂವು ಹಿಡಿದಿರುವುದನ್ನು ಆಕ್ಷೇಪಿಸಿ ಶಾಲಾ ಶಿಕ್ಷಕರೊಂದಿಗೆ ಶಾಸಕರೊಬ್ಬರು ವಾಗ್ವಾದಕ್ಕಿಳಿದ ಘಟನೆ ಹಾಸನದಲ್ಲಿ ನಡೆದಿದೆ.
ಜನವರಿ 26 ರಂದು ಗಣರಾಜ್ಯೋತ್ಸವದ ಅಂಗವಾಗಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹಾಸನ ಜಿಲ್ಲೆಯ ಅರಸೀಕೆರೆಯ ಶಾಲೆಯೊಂದರಲ್ಲೂ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ನೃತ್ಯ ಪ್ರದರ್ಶನದಲ್ಲಿ ಶಾಲಾ ಮಕ್ಕಳು ಕಮಲದ ಹೂ ಬಳಸಿದ್ದಕ್ಕೆ ಕಾಂಗ್ರೆಸ್ ಶಾಸಕ ಎಂ.ಕೆ.ಶಿವಲಿಂಗೇಗೌಡ ವಿರೋಧ ವ್ಯಕ್ತಪಡಿಸಿದರು.

ಅರಸೀಕೆರೆ ಟೌನ್ ಸ್ಟೇಡಿಯಂನಲ್ಲಿ ನಡೆದ ನೃತ್ಯ ಪ್ರದರ್ಶನದಲ್ಲಿ ಶ್ರೀ ಚಂದ್ರಶೇಖರ ಭಾರತಿ ಅಂತರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳು ಕಮಲ ಮತ್ತು ನವಿಲು ಗರಿಗಳನ್ನು ಬಳಸಿದರು. ಇದನ್ನು ವಿರೋಧಿಸಿ ನೃತ್ಯ ಪ್ರದರ್ಶನದ ಬಗ್ಗೆ ಅರಸೀಕೆರೆ ಶಾಸಕರು ಶಾಲಾ ಶಿಕ್ಷಕರೊಂದಿಗೆ ವಾಗ್ವಾದ ನಡೆಸಿದರು.
"ಕಮಲ ಚಿಹ್ನೆ ಪಾರ್ಟಿಗೆ ಸೇರಿದ್ದು, ಅದನ್ನು ನೃತ್ಯ ಪ್ರದರ್ಶನದಲ್ಲಿ ಏಕೆ ಬಳಸಿದ್ದೀರಿ? ಅದರ ಬಗ್ಗೆ ನನಗೆ ಮೊದಲೇ ತಿಳಿಸಬೇಕಿತ್ತು. ನೃತ್ಯ ಪ್ರದರ್ಶನಗಳಿಗೆ ಚಿಹ್ನೆಗಳನ್ನು ಆಯ್ಕೆಮಾಡುವ ಮೊದಲು ಶಿಕ್ಷಕರು ತಿಳಿದಿರಬೇಕು. ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಳ್ಳಿ' ಎಂದು ಶಿವಲಿಂಗೇಗೌಡ ಶಿಕ್ಷಕರ ಜತೆ ವಾಗ್ವಾದ ನಡೆಸಿದರು. ನೃತ್ಯ ಪ್ರದರ್ಶನದ ಬಗ್ಗೆ ಶಿವಲಿಂಗೇಗೌಡ ಮತ್ತು ಶಿಕ್ಷಕರ ವಾದವನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ.

ಶ್ರೀ ಚಂದ್ರಶೇಖರ ಭಾರತಿ ಅಂತರಾಷ್ಟ್ರೀಯ ಶಾಲೆಯ ಶಿಕ್ಷಕರೊಬ್ಬರು ಕಮಲ ಮತ್ತು ನವಿಲು ಗರಿಗಳನ್ನು ಬಳಸಿದ್ದಕ್ಕೆ ಕಾರಣ ನೀಡಿದ್ದಾರೆ. ಅದು ರಾಷ್ಟ್ರೀಯ ಹೂವು ಮತ್ತು ಭಾರತದ ಪಕ್ಷಿಯಾಗಿದೆ ಎಂದು ಶಾಸಕರಿಗೆ ವಿವರಿಸಲು ಪ್ರಯತ್ನಿಸಿದರು.
"ಕಮಲ ಭಾರತದ ರಾಷ್ಟ್ರೀಯ ಹೂವು ಮತ್ತು ನವಿಲು ಭಾರತದ ರಾಷ್ಟ್ರೀಯ ಪಕ್ಷಿಯಾಗಿದೆ. ಅದಕ್ಕಾಗಿಯೇ ನಾವು ಅದನ್ನು ನೃತ್ಯ ಪ್ರದರ್ಶನದಲ್ಲಿ ಬಳಸಿದ್ದೇವೆ. ಕಳೆದ ಎರಡು ದಿನಗಳಿಂದ ನಡೆದ ತಾಲೀಮು ವೇಳೆ ವಿದ್ಯಾರ್ಥಿಗಳು ಹೂಗಳನ್ನು ಬಳಸಿದರು. ರಿಹರ್ಸಲ್ ವೇಳೆ ಯಾರೂ ಆಕ್ಷೇಪಿಸಿಲ್ಲ ಅಥವಾ ಏನನ್ನೂ ಹೇಳಿಲ್ಲ' ಎಂದು ಶಿಕ್ಷಕರು ಶಾಸಕರೊಂದಿಗೆ ವಾಗ್ವಾದ ನಡೆಸಿದರು. ಆದರೂ ಶಾಸಕರು ಅದು ತಪ್ಪು ಎಂದು ಶಿಕ್ಷಕರೊಂದಿಗೆ ವಾದಕ್ಕಿಳಿದರು.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video











Click it and Unblock the Notifications