ಹಾಸನ: ಅಕ್ರಮ ಸಾಗಾಟದ ವೇಳೆ 20ಕ್ಕೂ ಹೆಚ್ಚು ಕರುಗಳ ಸಾವು; 10 ಆರೋಪಿಗಳ ಬಂಧನ
ಹಾಸನ, ಆಗಸ್ಟ್ 23: ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲ್ಲಿ ಅಕ್ರಮ ಗೋವು ಸಾಗಾಟದ ವೇಳೆ 20ಕ್ಕೂ ಹೆಚ್ಚು ಕರುಗಳು ಸಾವನ್ನಪ್ಪಿರುವ ಪ್ರಕರಣ ಸಂಬಂಧ 10 ಆರೋಪಿಗಳನ್ನು ಬಂಧಿಸಲಾಗಿದೆ.
ಅರಸೀಕೆರೆ ತಾಲೂಕಿನ ಗಂಡಸಿ ಹಾಗೂ ಹೊಸೂರು ಮೂಲದ ನೂರುಲ್ಲಾ, ರಹೀಂ, ಸುಲ್ತಾನ್, ಆರೀಫ್, ಇರ್ಫಾನ್, ಸಬೀರ್ ಅಹಮದ್, ಅಬ್ದುಲ್ ಮುಬಾರಕ್, ಜೀವನ್, ಪುರುಷೋತ್ತಮ್ ಬಂಧಿತ ಆರೋಪಿಗಳಾಗಿದ್ದಾರೆ.
ಆಗಸ್ಟ್ 19ರಂದು ಬೇಲೂರು ತಾಲೂಕಿನ ದ್ಯಾವಪ್ಪನಹಳ್ಳಿ ಗ್ರಾಮದ ಬಳಿ 60ಕ್ಕೂ ಹೆಚ್ಚು ಕರುಗಳನ್ನು ಅಕ್ರಮ ಸಾಗಾಟ ಮಾಡುತ್ತಿದ್ದ ವಾಹನ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ 20ಕ್ಕೂ ಹೆಚ್ಚು ಕರುಗಳು ಸಾವನ್ನಪ್ಪಿದ್ದವು.
ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಈ ತನಿಖೆ ಕೈಗೆತ್ತಿಕೊಂಡ ಬೇಲೂರು ಸಿಪಿಐ ಶ್ರೀಕಾಂತ್ ನೇತೃತ್ವ ತಂಡ ತೀವ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣವೇನು?
ಕಳೆದ
ಜುಲೈ
ತಿಂಗಳಲ್ಲಿ
ನಡೆದ
38
ಮಂಗಗಳ
ಮಾರಣಹೋಮ
ಮಾಸುವ
ಮುನ್ನವೇ
ಹಾಸನ
ಜಿಲ್ಲೆಯ
ಬೇಲೂರು
ತಾಲೂಕಿನಲ್ಲಿ
ಮತ್ತೊಂದು
ಅಮಾನವೀಯ
ಘಟನೆ
ನಡೆದಿತ್ತು.
ಅಕ್ರಮವಾಗಿ ಕರುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಅಪಘಾತ ಸಂಭವಿಸಿ ಗೂಡ್ಸ್ ವಾಹನದಲ್ಲಿದ್ದ 20ಕ್ಕೂ ಹೆಚ್ಚು ಕರುಗಳು ಮೃತಪಟ್ಟಿದ್ದವು.
ಬೇಲೂರು ತಾಲೂಕಿನ ದ್ಯಾವಪ್ಪನಹಳ್ಳಿ ಬಳಿಯಿಂದ ಗೂಡ್ಸ್ ವಾಹನದಲ್ಲಿ 50ಕ್ಕೂ ಹೆಚ್ಚು ಕರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಗೋಹತ್ಯೆ ನಿಷೇಧ ಹಿನ್ನೆಲೆ ರಾತ್ರೋರಾತ್ರಿ ಕರುಗಳಿಗೆ ಬಾಯಿ, ಕಾಲುಗಳಿಗೆ ಹಗ್ಗ ಕಟ್ಟಿ ಅಮಾನವೀಯವಾಗಿ ಸಾಗಾಟ ಮಾಡುತ್ತಿದ್ದರು.
ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಗೂಡ್ಸ್ ವಾಹನದಲ್ಲಿದ್ದ ೨೦ಕ್ಕೂ ಹೆಚ್ಚು ಕರುಗಳು ಮೃತಪಟ್ಟಿವೆ. ಈ ಪೈಕಿ ಕೆಲವು ಕರುಗಳು ವಾಹನದಲ್ಲಿಯೇ ಉಸಿರುಗಟ್ಟಿ ಸಾವು ಸಂಭವಿಸಿರುವ ಶಂಕೆ ವ್ಯಕ್ತವಾಗಿದ್ದು, ಇನ್ನೂ ಕೆಲವು ಕರುಗಳು ಅಪಘಾತದ ತೀವ್ರತೆಗೆ ಗೂಡ್ಸ್ ವಾಹನದಲ್ಲಿಯೇ ಮೃತಪಟ್ಟಿವೆ ಎನ್ನಲಾಗಿದೆ.
ಅಪಘಾತ ಸ್ಥಳಕ್ಕೆ ಬೇಲೂರು ಶಾಸಕ ಲಿಂಗೇಶ್ ತೆರಳಿ 30 ಕರುಗಳನ್ನು ರಕ್ಷಿಸಿದ್ದರು. ಘಟನೆ ಬಗ್ಗೆ ಶಾಸಕ ಲಿಂಗೇಶ್ ಬೇಸರ ವ್ಯಕ್ತಪಡಿಸಿದ್ದು, ಘಟನಾ ಸ್ಥಳದಲ್ಲಿ ಆಹಾರವಿಲ್ಲದೆ 20ಕ್ಕೂ ಹೆಚ್ಚು ಕರುಗಳು ರೋದಿಸುತ್ತಿವೆ. ಸ್ಥಳಕ್ಕೆ ಇನ್ನೂ ಬಾರದ ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
38
ಕೋತಿಗಳ
ಮಾರಣಹೋಮ
ಇದೇ
ಹಾಸನ
ಜಿಲ್ಲೆಯ
ಉಗನೆ
ಗ್ರಾಮದಲ್ಲಿ
ಆಹಾರದ
ಆಸೆ
ತೋರಿಸಿ
ಕಳೆದ
ಜುಲೈ
28
ರಂದು
50ಕ್ಕೂ
ಹೆಚ್ಚು
ಕೋತಿಗಳನ್ನು
ಚೀಲದಲ್ಲಿ
ಬಂಧಿಸಿಟ್ಟಿದ್ದ
ಯಶೋಧ
ಹಾಗೂ
ರಾಮು,
ಅವುಗಳನ್ನು
ಸ್ಥಳಾಂತರ
ಮಾಡುವಾಗ
ಉಸಿರುಗಟ್ಟಿ
ಮೃತಪಟ್ಟಿವೆ
ಎಂದು
ತಿಳಿಸಿದ್ದು
ನಿಮಗೆಲ್ಲ
ನೆನೆಪಿದೆ.
ಈ ವೇಳೆ ಬೇಲೂರು ತಾಲೂಕಿನ ಚೌಡನಹಳ್ಳಿ ಬಳಿ 38 ಕೋತಿಗಳ ಸಾಮೂಹಿಕ ಮಾರಣಹೋಮ ನಡೆದಿತ್ತು. ಮಂಗಗಳನ್ನು ಚೀಲದಲ್ಲಿ ತುಂಬಿ ಬಿಸಾಡಿ ಹೋಗಿದ್ದ ಆರೋಪಿಗಳಿಗೆ, ಮರುದಿನ ಕೋತಿಗಳ ಸಾವಿನ ಸುದ್ದಿ ತಿಳಿದಿದೆ. ಹೀಗಾಗಿ ಆಂಜನೇಯ ದೇಗುಲದಲ್ಲಿ ಹೋಮ ಹವನ, ವಿಶೇಷ ಪೂಜೆ ಮಾಡಿಸಿದ್ದಾರೆ ಎಂಬುವುದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿತ್ತು.
ಅರಸೀಕೆರೆ ತಾಲ್ಲೂಕಿನ ಬಾಣಾವರದ ಕೋತಿ ಸೆರೆ ತಂಡಕ್ಕೆ ಮನವಿ ಮಾಡಿದ್ದ ಜಮೀನಿನ ಮಾಲೀಕರು, ಕೋತಿ ಸೆರೆಹಿಡಿದ ದಂಪತಿ, ಮೃತ ಕೋತಿ ಸ್ಥಳಾಂತರ ಮಾಡಿದ ವಾಹನ ಚಾಲಕ ಸೇರಿ, ಒಟ್ಟು 7 ಜನರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದ್ದರು.
ಜಾಮೀನು
ಅರ್ಜಿ
ತಿರಸ್ಕಾರ
ಅರೇಹಳ್ಳಿ
ಪೊಲೀಸ್
ಠಾಣಾ
ವ್ಯಾಪ್ತಿಯಲ್ಲಿ
ಮಂಗಗಳನ್ನು
ಮಾರಣಹೋಮ
ಮಾಡಿದ್ದ
ಪ್ರಕರಣದಲ್ಲಿ
ಆರೋಪಿಗಳು
ಜಾಮೀನು
ಕೋರಿ
ಸಲ್ಲಿಸಿದ್ದ
ಅರ್ಜಿಯನ್ನು
ಹಾಸನದ
ಘನ
5ನೇ
ಅಪರ
ಜಿಲ್ಲಾ
ಮತ್ತು
ಸತ್ರ
ನ್ಯಾಯಾಲಯದ
ನ್ಯಾಯಾಧೀಶರಾದ
ವಿತ್ತಲ್
ವಿಷ್ಣುಪಂತ್
ಜೋಷಿ
ರವರು
ತಿರಸ್ಕರಿಸಿ
ಆದೇಶ
ಹೊರಡಿಸಿದ್ದಾರೆ.
ಸರ್ಕಾರಿ ಅಭಿಯೋಜಕರಾದ ಈ.ಡಿ. ಶ್ರೀನಿವಾಸ ಸರ್ಕಾರದ ಪರ ವಾದ ಮಂಡಿಸಿದರು. ಜು.29 ರಂದು ಬೇಲೂರು ತಾಲ್ಲೂಕು ಬಿಕ್ಕೋಡು ಹೋಬಳಿ, ಚೌಡನಹಳ್ಳಿ ಗ್ರಾಮದ ಸರ್ಕಾರಿ ರಸ್ತೆಯಲ್ಲಿ ಯಾರೋ ಮಂಗಗಳ ಶವಗಳನ್ನು ಹಾಕಿರುತ್ತಾರೆಂದು ಪಿರ್ಯಾದಿಯವರಿಗೆ ಬಂದ ಮಾಹಿತಿ ಮೇರೆಗೆ ಪಿರ್ಯಾದಿಯವರು ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿದ್ದು, 20 ಗಂಡು ಮತ್ತು 18 ಹೆಣ್ಣು ಮಂಗಗಳನ್ನು ಯಾರೋ ಆಸಾಮಿಗಳು ಬೇರೆ ಜಾಗದಲ್ಲಿ ಕೊಂದು ತಂದು ಹಾಕಿರುವುದು ಕಂಡು ಬಂದಿತ್ತು.
Recommended Video
ನಂತರ ಈ ಬಗ್ಗೆ ಬೇಲೂರು ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ 11/2021.22 ರ ರೀತ್ಯಾ ಪ್ರಕರಣ ದಾಖಲಿಸಿ 38 ಮಂಗಗಳ ಶವಗಳನ್ನು ಅಮಾನತ್ತು ಪಡಿಸಿಕೊಂಡು ಘನ ನ್ಯಾಯಾಲಯದ ಅನುಮತಿ ಪಡೆದು ಪಶು ವೈದ್ಯರಿಂದ ಮರಣೋತ್ತರ ಪರೀಕ್ಷೆ ಮಾಡಿಸಿ ನಂತರ ಶವಗಳನ್ನು ತಗರೆ ರಕ್ಷಿತ ಅರಣ್ಯ ಪ್ರದೇಶದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದರು.