ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೇಲೂರು, ಹಂದಿ ಉರುಳಿನಲ್ಲಿ ಮೃತವಾದ ಚಿರತೆ

By Ananthanag
|
Google Oneindia Kannada News

ಬೇಲೂರು: ಹಂದಿ ಹಿಡಿಯಲು ಹಾಕಿದ್ದ ಉರುಳಿಗೆ ಆರು ವರ್ಷದ ಚಿರತೆಯೊಂದು ಸಿಲುಕಿ ಮೃತಪಟ್ಟಿರುವ ಘಟನೆ ಬೇಲೂರು ತಾಲ್ಲೂಕಿನ ಹೆಬ್ಬಾಳು ಸಮೀಪದ ಅಮ್ಮನಗುಡಿ ಕಾವಲ್‌ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಅಮ್ಮನಗುಡಿ ಕಾವಲ್ ಅರಣ್ಯ ಪ್ರದೇಶದ ಸಮೀಪವಿರುವ ತೋಟವೊಂದರಲ್ಲಿ ಕೂಲಿ ಕಾರ್ಮಿಕ ಮೃತಪಟ್ಟ ಚಿರತೆಯನ್ನು ನೊಡಿ ಶಿವಾಲದಹಳ್ಳಿ ಗ್ರಾಮಸ್ಥರಿಗೆ ತಿಳಿಸಿದ್ದು ಅವರು ನೊಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡುಬಂದಿದೆ.[ನಿದ್ದೆಗೆಡಿಸಿದ್ದ ಚಿರತೆಯನ್ನು ಸೆರೆ ಹಿಡಿದ ಪದೂರು ಗ್ರಾಮದ ಯುವಕರು]

A leopard was trapped in pig trap in Ammanagudi forest in belur

ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಗಿರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ದುಷ್ಕರ್ಮಿಗಳು ಕಾಡು ಹಂದಿ ಸಾಯಿಸಲು ಹಾಕಿದ್ದ ಉರುಳುನಲ್ಲಿ ಸಿಲುಕಿ ಚಿರತೆ ಮೃತವಾಗಿದೆ ಎಂದು ಇಖಾಖೆ ಸ್ಪಷ್ಟಪಡಿಸಿದ್ದು, 'ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು' ಎಂದು ಹೇಳಿದರು.

ಈ ಹಿಂದೆ ಕಲ್ಲಹಳ್ಳಿ ಅರಣ್ಯ ಪ್ರದೇಶ ವ್ಯಾಪ್ತಿಯ ಬೇಲೂರು- ಹಳೇಬೀಡು ರಸ್ತೆಯಲ್ಲಿ ಎರಡು ವರ್ಷದ ಚಿರತೆ ವಾಹನಕ್ಕೆ ಡಿಕ್ಕಿಹೊಡೆದು ಅಸುನೀಗಿತ್ತು. ಈಗ ಮತ್ತೊಂದು ಚಿರತೆ ಉರುಳಿಗೆ ಸಿಲುಕಿದೆ. ಹೀಗೆ ಮಾನವ-ಪ್ರಾಣಿ ಸಂಘರ್ಷದಲ್ಲಿ ವನ್ಯಜೀವಿಗಳು ನಾಶವಾಗುತ್ತಿರುವುದು ಪ್ರಾಣಿಸಂಕುಲಕ್ಕೆ ತುಂಬಲಾದ ನಷ್ಟವಾಗಿದೆ ಎನ್ನುತ್ತಾರೆ ಪರಿಸರವಾದಿಗಳು.

English summary
A 6 year leopard was trapped in pig trap in Ammanagudi forest in the garden near beluru hassan. Forest Department officials reached the spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X