ಬಿಎಸ್ ಎಫ್ ಎಎಸ್ ಐ, ಅವರ ಪತ್ನಿ ಈಗ ಅಸ್ಸಾಂನಲ್ಲಿ 'ವಿದೇಶೀಯರು'
ಗುವಾಹತಿ, ಆಗಸ್ಟ್ 23: ಗಡಿ ಭದ್ರತಾ ಪಡೆಯ (ಬಿಎಸ್ ಎಫ್) ಸಹಾಯಕ ಸಬ್ ಇನ್ ಸ್ಪೆಕ್ಟರ್ ಹಾಗೂ ಅವರ ಪತ್ನಿಯನ್ನು ವಿದೇಶೀಯರು ಎಂದು ಘೋಷಿಸಲಾಗಿದೆ. ಪೂರ್ವ ಅಸ್ಸಾಂನ ಜೊಹ್ರತ್ ಪಟ್ಟಣದ ವಿದೇಶಿಯರ ನ್ಯಾಯಮಂಡಳಿಯು ಈ ಘೋಷಣೆ ಮಾಡಿದೆ. ಮುಜಿಬುರ್ ರೆಹಮಾನ್ ಮತ್ತು ಅವರ ಪತ್ನಿಯನ್ನು ಭಾರತೀಯೇತರರು ಎಂದು ಜುಲೈ ತಿಂಗಳಲ್ಲಿ ನೀಡಿದ ತೀರ್ಪಿನಲ್ಲಿ ಏಕಪಕ್ಷೀಯವಾಗಿ ಘೋಷಿಸಲಾಗಿದೆ.
ಈ ಅಧಿಕಾರಿಯ ಪೋಷಕರು, ಸೋದರ- ಸೋದರಿಯರ ಪೌರತ್ವದ ಬಗ್ಗೆ ಯಾವುದೇ ಸಂಶಯ ಇಲ್ಲ. ಅಸ್ಸಾಂ- ನಾಗಾಲ್ಯಾಂಡ್ ಗಡಿಯ ಸಮೀಪ ಗೋಲಾಘಾಟ್ ಜಿಲ್ಲೆಯ ಉದಯ್ ಪುರ್- ಮಿಕಿರ್ ಪಟ್ಟಿಯಲ್ಲಿ ಈ ಕುಟುಂಬ ವಾಸವಿದೆ.
ರೆಹಮಾನ್ ಅವರು ಸದ್ಯಕ್ಕೆ ಪಂಜಾಬ್ ನಲ್ಲಿ ಸೇವೆಗೆ ನಿಯೋಜನೆ ಆಗಿದ್ದಾರೆ. ಜುಲೈ ಕೊನೆ ವಾರದಲ್ಲಿ ರಜಾ ಕಳೆಯಲು ಮನೆಗೆ ಹಿಂತಿರುಗಿದ ಸಂದರ್ಭದಲ್ಲಿ ತೀರ್ಪಿನ ಬಗ್ಗೆ ಗೊತ್ತಾಗಿದೆ.

ನಮ್ಮ ಹತ್ತಿರ 1923ನೇ ಇಸವಿಯ ಭೂ ದಾಖಲಾತಿಗಳು ಇವೆ. ಯಾರೋ ಕುಡುಕರ ಮಾತು ಕೇಳಿಸಿಕೊಂಡು ನಿಜವಾದ ಭಾರತದ ನಾಗರಿಕನನ್ನೇ ವಿದೇಶಿ ಎನ್ನುವುದು ತೀರಾ ಚಿಲ್ಲರೆತನ. ನನ್ನ ಕುಟುಂಬಕ್ಕೆ ನ್ಯಾಯಮಂಡಳಿಯ ನೋಟಿಸ್ ಕೂಡ ಬಂದಿಲ್ಲ. ಕರ್ತವ್ಯದ ಮೇಲೆ ಹೊರಗೆ ಇದ್ದಾಗ ನನ್ನ ಗ್ರಾಮದ ಮುಖ್ಯಸ್ಥರೂ ಈ ಬಗ್ಗೆ ತಿಳಿಸಿಲ್ಲ ಎಂದು ರೆಹಮಾನ್ ಹೇಳಿದ್ದಾರೆ. ಇದೀಗ ರೆಹಮಾನ್ ಅವರು ಗುವಾಹತಿ ಹೈ ಕೋರ್ಟ್ ಮೆಟ್ಟಿಲೇರಿದ್ದಾರೆ.
ನಿವೃತ್ತ ಯೋಧ ಮೊಹಮ್ಮದ್ ಸನಾವುಲ್ಲಾ ಅವರಿಗೆ ಜೂನ್ ನಲ್ಲಿ ಜಾಮೀನು ಸಿಕ್ಕಿತ್ತು. ಅವರನ್ನು ಮೇ 28ರಂದು ಗುವಾಹತಿಯಲ್ಲಿ ಇರುವ ವಿದೇಶಿ ನ್ಯಾಯಮಂಡಳಿಯಿಂದ 'ವಿದೇಶೀಯ' ಎಂದು ಘೋಷಿಸಲಾಗಿತ್ತು. ಪಶ್ಚಿಮ ಅಸ್ಸಾಂನ ಗೋಲ್ ಪರದಲ್ಲಿರುವ ವಿಚಾರಣೆ ಕೇಂದ್ರದಲ್ಲಿ ಅವರು ಒಂದು ವಾರಕ್ಕಿಂತ ಹೆಚ್ಚು ಕಾಲ ಇದ್ದರು.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications