ಯೋಧ ಹನುಮಂತಪ್ಪ ಆರೋಗ್ಯ ವಿಚಾರಿಸಿದ ಮೋದಿ
ನವದೆಹಲಿ, ಫೆಬ್ರವರಿ 09 : ದೆಹಲಿಯ ಆರ್.ಆರ್ ಆಸ್ಪತ್ರೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರ್ನಾಟಕದ ಯೋಧ ಹನುಮಂತಪ್ಪ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.['ಅಮರ' ಯೋಧ ಹನುಮಂತಪ್ಪನ ಅಂತಿಮ ಯಾತ್ರೆಯ ಚಿತ್ರಗಳು]
ಹಿಂದಿನ ಸುದ್ದಿ : ಸಿಯಾಚಿನ್ನಲ್ಲಿ ಪವಾಡ ನಡೆದಿದ್ದು, ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ ಅವರು ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದಿದ್ದಾರೆ. ಆರು ದಿನಗಳಿಂದ 25 ಅಡಿ ಆಳದ ಹಿಮದಲ್ಲಿ ಸಿಲುಕಿದ್ದ ಅವರನ್ನು ಸೋಮವಾರ ಪತ್ತೆ ಹಚ್ಚಲಾಗಿದೆ. ಅವರು ಕ್ಷೇಮವಾಗಿ ಮನೆಗೆ ಮರಳಲಿ ಎಂದು ಕುಟುಂಬದವರು ಪ್ರಾರ್ಥಿಸುತ್ತಿದ್ದಾರೆ.[ದೆಹಲಿಗೆ ಹೊರಟ ಯೋಧ ಹನುಮಂತಪ್ಪ ಕುಟುಂಬದವರು]
'ಮಂಜಿನೊಳಗೆ
ಸಿಲುಕಿದ್ದ
ಹನುಮಂತಪ್ಪ
ಅವರನ್ನು
ರಕ್ಷಣೆ
ಮಾಡಲಾಗಿದ್ದು,
ಸಿಯಾಚಿನ್ನಿಂದ
ದೆಹಲಿಯ
ಆರ್.ಆರ್.
ಆಸ್ಪತ್ರೆಗೆ
ರವಾನೆ
ಮಾಡಲಾಗಿದೆ'
ಎಂದು
ಸೇನೆಯ
ನಾರ್ತರ್ನ್
ಕಮಾಂಡರ್
ಲೆಫ್ಟಿನೆಂಟ್
ಜನರಲ್
ಡಿ.ಎಸ್.ಹೂಡಾ
ಅವರು
ತಿಳಿಸಿದ್ದಾರೆ.
ಹನುಮಂತಪ್ಪ
ಅವರ
ಸ್ಥಿತಿ
ಗಂಭೀರವಾಗಿದ್ದು,
ಚಿಕಿತ್ಸೆ
ನೀಡಲಾಗುತ್ತಿದೆ.
[ಸಿಯಾಚಿನ್
ಹಿಮಪಾತದಲ್ಲಿ
ಸಿಲುಕಿದ್ದ
ಯೋಧರ
ಸಾವು]
ಹನುಮಂತಪ್ಪ
ಅವರು
ಧಾರವಾಡ
ಜಿಲ್ಲೆಯ
ಕುಂದಗೋಳ
ತಾಲೂಕಿನ
ಬೆಟದೂರಿನವರು.
ಹನುಮಂತಪ್ಪ
ಬದುಕಿದ್ದಾರೆ
ಎಂಬ
ಸುದ್ದಿ
ಕೇಳಿ
ಪತ್ನಿ
ಮತ್ತು
ತಾಯಿ
ದೇವರಿಗೆ
ಪೂಜೆ
ಸಲ್ಲಿಸಿದ್ದಾರೆ,
ಅವರು
ಕ್ಷೇಮವಾಗಿ
ಮನೆಗೆ
ಬರಲಿ
ಎಂದು
ಪ್ರಾರ್ಥಿಸುತ್ತಿದ್ದಾರೆ.
[ಹಿಮಪಾತಕ್ಕೆ
ಎಚ್.ಡಿ.ಕೋಟೆಯ
ಯೋಧ
ಮಹೇಶ್
ಬಲಿ]
ಬುಧವಾರ
ಹಿಮಪಾತ
ಸಂಭವಿಸಿತ್ತು
:
ಫೆ.3ರಂದು
ಮದ್ರಾಸ್
ರೆಜಿಮೆಂಟ್ಗೆ
ಸೇರಿದ
10
ಯೋಧರು
19
ಸಾವಿರ
ಅಡಿಗಳ
ಎತ್ತರದಲ್ಲಿ
ಕರ್ತವ್ಯ
ನಿರ್ವಹಿಸುತ್ತಿದ್ದಾಗ
ಭಾರೀ
ಹಿಮಪಾತ
ಸಂಭವಿಸಿತ್ತು.
ಹಿಮದಲ್ಲಿ
ಸಿಲುಕಿದ್ದವರ
ರಕ್ಷಣೆಗೆ
ಕಾರ್ಯಾಚರಣೆ
ಕೈಗೊಳ್ಳಾಗಿತ್ತು.
[ಪವಾಡ
:
ಕಠ್ಮಂಡುವಿನಲ್ಲಿ
ನಾಲ್ಕು
ತಿಂಗಳ
ಮಗುವಿನ
ರಕ್ಷಣೆ]
Visuals from rescue operations in Siachen for bodies of soldiers buried after an avalanche last week (source-MoD) pic.twitter.com/G6sS0qVGSV
— ANI (@ANI_news) February 8, 2016
ಕರ್ನಾಟಕದ
ಹಾಸನದ
ತೇಜೂರಿನ
ಟಿ.ಟಿ
ನಾಗೇಶ್,
ಮೈಸೂರಿನ
ಎಚ್.ಡಿ.ಕೋಟೆ
ತಾಲೂಕಿನ
ಪಿ.ಎನ್.
ಮಹೇಶ್
ಮತ್ತು
ಧಾರವಾಡದ
ಹನುಮಂತಪ್ಪ
ಕೊಪ್ಪದ
ಅವರು
ಈ
ಹಿಮಪಾತದಲ್ಲಿ
ಸಿಲುಕಿದ್ದರು.
ಇವರ
ಪೈಕಿ
ನಾಗೇಶ್
ಮತ್ತು
ಮಹೇಶ್
ಮೃತಪಟ್ಟಿದ್ದರು.[ಸಿಯಾಚಿನ್
ಪವಾಡ:
ಹನುಮಂತಪ್ಪ
ಬಗ್ಗೆ
ಅವರ
ಅವ್ವ
ಹೇಳಿದ್ದೇನು?]