ಧಾರವಾಡಕ್ಕೆ ಮೋದಿ ಬರುವ ಹಿನ್ನೆಲೆ ಹಾಸ್ಟೆಲ್ ಖಾಲಿ ಮಾಡಲು ಸೂಚನೆ; ವಿದ್ಯಾರ್ಥಿಗಳ ಆಕ್ರೋಶ
ಧಾರವಾಡ, ಡಿಸೆಂಬರ್, 30: ಧಾರವಾಡಲ್ಲಿ ಜನವರಿ 12 ರಿಂದ 16ರವರೆಗೂ ಯುವಜನೋತ್ಸವ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ವಿರೋಧಿ ನಿಲುವನ್ನು ತಾಳಿರುವುದು ಇದೀಗ ಟೀಕೆಗೆ ಗುರಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಧಾರವಾಡದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಒಂಬತ್ತು ದಿನಗಳ ಕಾಲ ಹಾಸ್ಟೆಲ್ ಖಾಲಿ ಮಾಡುವಂತೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ (ಕೆಯುಡಿ) ವಿದ್ಯಾರ್ಥಿಗಳಿಗೆ ಸೂಚಿಸಿದೆ. 2023ರ ಜನವರಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳ ವಾಸ್ತವ್ಯಕ್ಕಾಗಿ ಒಂಬತ್ತು ದಿನಗಳ ಕಾಲ ಹಾಸ್ಟೆಲ್ ಖಾಲಿ ಮಾಡುವಂತೆ "ಕೆಯುಡಿ" ಹೇಳಿದೆ. ಈ ನಿಲುವಿನ ವಿರುದ್ಧ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡ: ಯುವಜನೋತ್ಸವಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ, ಅಕ್ಷಯ್ ಕುಮಾರ್ಗೆ ಆಹ್ವಾನ ಕೊಟ್ಟ ಜೋಶಿ
ಕಾಲೇಜು
ಮೈದಾನದಲ್ಲಿ
ಕಾರ್ಯಕ್ರಮ
ಐದು
ದಿನಗಳ
ಉತ್ಸವವನ್ನು
ಜನವರಿ
12ರಂದು
ಪ್ರಧಾನ
ಮಂತ್ರಿ
ನರೇಂದ್ರ
ಮೋದಿ
ಅವರು
ಕಾಲೇಜು
ಮೈದಾನದಲ್ಲಿ
ಉದ್ಘಾಟಿಸಲಿದ್ದಾರೆ.
ಈ
ಕಾರ್ಯಕ್ರಮದಲ್ಲಿ
ಭಾಗವಹಿಸಲು
ದೇಶದ
ವಿವಿಧ
ಭಾಗಗಳಿಂದ
ಸಾವಿರಾರು
ವಿದ್ಯಾರ್ಥಿಗಳು
ಧಾರವಾಡಕ್ಕೆ
ಬರಲಿದ್ದಾರೆ.
ವಿಶ್ವವಿದ್ಯಾನಿಲಯದ
ನಿಲುವನ್ನು
ನಿರ್ಧಾರವನ್ನು
ವಿರೋಧಿಸುತ್ತಿರುವ
ವಿದ್ಯಾರ್ಥಿಗಳು,
"ಕಾರ್ಯಕ್ರಮದ
ಅತಿಥಿಗಳಿಗೆ
ಕಾಲೇಜು
ಕೊಠಡಿಗಳನ್ನು
ಬಳಸುವಂತೆ
ಹೇಳಬಹುದಿತ್ತು.
ಹೋಟೆಲ್ಗಳನ್ನು
ಕಾಯ್ದಿರಿಸಬಹುದಿತ್ತು
ಅಥವಾ
ಟೆಂಟ್ಗಳನ್ನು
ಹಾಕಬಹುದಿತ್ತು.
ಇದೆಲ್ಲದರ
ಬದಲಿಗೆ
ವಿದ್ಯಾರ್ಥಿಗಳನ್ನು
ಹಾಸ್ಟೆಲ್ನಿಂದ
ಖಾಲಿ
ಮಾಡಿಸುವುದು
ಎಷ್ಟರ
ಮಟ್ಟಿದೆ
ಸರಿ?"
ಎಂದು
ಪ್ರಶ್ನಿಸಿದ್ದಾರೆ.
ಕಾರ್ಯಕ್ರಮಕ್ಕೆ
ಖರ್ಚು
ಮಾಡಿದ
ಹಣದ
ವಿವರ
"ಕಾರ್ಯಕ್ರಮಕ್ಕಾಗಿ
ಸರ್ಕಾರ
20
ಕೋಟಿ
ರೂಪಾಯಿ
ಖರ್ಚು
ಮಾಡುತ್ತಿದೆ.
ಆದರೆ,
ಕಾರ್ಯಕ್ರಮಕ್ಕೆ
ಬರುವವರು
ತಂಗಲು
ವ್ಯವಸ್ಥೆ
ಮಾಡಲು
ಹಾಸ್ಟೆಲ್
ಖಾಲಿ
ಮಾಡಿಸುತ್ತಿರುವುದು
ಮಾತ್ರ
ವಿಚಿತ್ರವಾಗಿದೆ.
ಈಗಾಗಲೇ
ನಮ್ಮ
ತರಗತಿಗಳು
ನಿಗದಿತ
ಸಮಯದಲ್ಲಿ
ಮುಗಿಯದೆ
ಹಿಂದೆ
ಉಳಿದಿದೆ.
ಇಂತಹ
ಸಮಯದಲ್ಲಿ
ಒಂಬತ್ತು
ದಿನ
ಹಾಸ್ಟೆಲ್
ಖಾಲಿ
ಮಾಡಿಸುವುದು
ಸರಿಯಲ್ಲ"
ಎಂದು
ಬೇಸರ
ವ್ಯಕ್ತಪಡಿಸಿದ್ದಾರೆ.
ಇನ್ನು
ಕೆಯುಡಿ
ಕುಲಪತಿ
ಬಿ.ಗುಡಸಿ
ಪ್ರತಿಕ್ರಿಯಿಸಿದ್ದು,
"ವಿದ್ಯಾರ್ಥಿಗಳನ್ನು
ಬಲವಂತವಾಗಿ
ಸ್ಥಳಾಂತರಿಸುವುದಿಲ್ಲ.
ಕಾರ್ಯಕ್ರಮ
ಮುಗಿಯುವವರೆಗೆ
ಅವರ
ವಸ್ತುಗಳನ್ನು
ಬೇರೆ
ಕಡೆ
ಇಡುವುದಕ್ಕೆ
ವ್ಯವಸ್ಥೆ
ಮಾಡಿದ್ದೇವೆ.
ಹಾಗೂ
ಅವರಿಗೆ
ರಜೆ
ಘೋಷಿಸಲಾಗಿದೆ"
ಎಂದು
ತಿಳಿಸಿದ್ದಾರೆ.
ವಿವಿ
ವಿರುದ್ಧ
ವಿದ್ಯಾರ್ಥಿಗಳ
ಆಕ್ರೋಶ
ಅಧ್ಯಾಪಕರೊಬ್ಬರು
ಪ್ರತಿಕ್ರಿಯಿಸಿದ್ದು,
"ಕೋರ್ಸ್ಗಳು
ನಿಗದಿತ
ಅವಧಿಗಿಂತ
ಹಿಂದಿದ್ದರೂ,
ವಿಶ್ವವಿದ್ಯಾಲಯವು
ಯಾವುದೇ
ಅತಿಥಿ
ಉಪನ್ಯಾಸಕರನ್ನು
ನೇಮಿಸಿಲ್ಲ.
ರಜಾದಿನಗಳನ್ನು
ಘೋಷಿಸುವುದರಿಂದ
ಪಠ್ಯಕ್ರಮವನ್ನು
ಪೂರ್ಣಗೊಳಿಸಲು
ಇನ್ನಷ್ಟು
ವಿಳಂಬವಾಗುತ್ತದೆ.
ನಾವೂ
ಮನೆಗೆ
ಹೋಗುವುದಕ್ಕಿಂತ
ಕಾರ್ಯಕ್ರಮದಲ್ಲಿ
ಭಾಗವಹಿಸಲು
ಬಯಸುತ್ತೇವೆ"
ಎಂದು
ಮಾಹಿತಿ
ನೀಡಿದ್ದಾರೆ.