ಹುತಾತ್ಮ ಯೋಧನ ಸೋದರನಿಗೆ ಸರ್ಕಾರಿ ನೌಕರಿಯ ಭರವಸೆ ನೀಡಿದ ವಿನಯ್ ಕುಲಕರ್ಣಿ
ಧಾರವಾಡ, ನವೆಂಬರ್ 30 : ಮಹಾರಾಷ್ಟ್ರದ ಗ್ಯಾರಾವತಿಯಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚರಣೆ ವೇಳೆ ವೀರ ಮರಣ ಹೊಂದಿದ ಧಾರವಾಡ ತಾಲೂಕಿನ ಮನಗುಂಡಿಯ ಸಿ. ಆರ್.ಪಿ.ಎಫ್. ವೀರಯೋಧ ಮಂಜುನಾಥ ಜಕ್ಕಣ್ಣವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಬೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಬುಧವಾರ (ಬುಧವಾರ 30) ಸಂಜೆ ವೇಳೆ ಬೇಟಿ ನೀಡಿದ ಅವರು ಘಟನೆ ಕುರಿತು ಗ್ರಾಮಸ್ಥರು ಹಾಗೂ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡರು , ಅಲ್ಲದೆ ಮೃತ ಯೋಧನ ಎರಡು ಮಕ್ಕಳನ್ನು ಎತ್ತಿಕೊಂಡು ಮುದ್ದಾಡಿ ಮಕ್ಕಳಿಗೂ ಸಮಾಧಾನ ಹೇಳಿದರು.

ಕಷ್ಟ-ಸುಖಗಳಿಗೆ ಸದಾಕಾಲವೂ ನಿಮ್ಮೊಂದಿಗೆ ನಾವಿದ್ದು ಸರ್ಕಾರದಿಂದ ಸಿಗಬೇಕಾಗಿರುವ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡುಲಾಗುವುದು ಎಂದು ಕುಟುಂಬಕ್ಕೆ ಭರವಸೆ ನೀಡಿದರು.
ಮಂಜುನಾಥ ಜಕ್ಕಣವರ್ ಅವರ ಸಹೋದರನಾದ ಪುಂಡಲಿಕನಿಗೆ ಸಾಧ್ಯವಾದರೆ ಸರ್ಕಾರದಿಂದ ನೌಕರಿ ಕೊಡಿಸುವುದಾಗಿ ಭರವಸೆ ನೀಡಿದರು.ಯಾವುದೇ ಕಾರಣಕ್ಕೂ ದೃತಿಗೇಡಬೇಡಿ ನಿಮ್ಮ ಜೊತೆಯಲ್ಲಿ ಸದಾ ಕಾಲ ನಾ ಇದ್ದೇನೆ ಎಂದು ಧೈರ್ಯ ಹೇಳಿದರು.












Click it and Unblock the Notifications