ಕರ್ನಾಟಕ ವಿವಿ ಕುಲಪತಿ ಎಚ್.ಬಿ.ವಾಲೀಕಾರ ಬಂಧನ
ಧಾರವಾಡ, ಅ.21 : ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಬಿ.ವಾಲೀಕಾರ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ವಿವಿಯಲ್ಲಿ ನಡೆದಿರುವ ಅಕ್ರಮ ನೇಮಕ ಸೇರಿದಂತೆ ವಿವಿಧ ಹಗರಣಗಳ ಸಂಬಂಧ ಬಂಧಿಸಲಾಗಿದೆ. ಕುಲಪತಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಹೃದಯ ಸಂಬಂಧಿ ರೋಗದಿಂದ ಬಳಲುತ್ತಿರುವ ಅವರು ಸೋಮವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಲೋಕಾಯುಕ್ತ
ಪೊಲೀಸರು
ಸೋಮವಾರ
ರಾತ್ರಿ
ವಿವಿ
ಕುಲಪತಿ
ಡಾ.ಎಚ್.ಬಿ.ವಾಲೀಕಾರ,
ಮೌಲ್ಯಮಾಪನ
ಕುಲಸಚಿವ
ಡಾ.ಎಚ್.ಟಿ.ಪೋತೆ,
ಹಣಕಾಸು
ಅಧಿಕಾರಿ
ರಾಜಶ್ರೀ
ಹಾಗೂ
ಕುಲಪತಿಗಳ
ಆಪ್ತ
ಸಹಾಯಕ
ಎಸ್.ಎಲ್.ಬೀಳಗಿ
ಅವರನ್ನು
ಬಂಧಿಸಿ,
ನ್ಯಾಯಾಧೀಶರ
ಮುಂದೆ
ಹಾಜರುಪಡಿಸಿದ್ದಾರೆ.
[ಕರ್ನಾಟಕ
ವಿವಿಯಲ್ಲಿ
ಏನಿದು
ಅಕ್ರಮ?]
ಕುಲಸಚಿವ ಡಾ.ಪೋತೆ ಹಾಗೂ ಎಸ್.ಎಲ್.ಬೀಳಗಿ ಅವರ ವೈದ್ಯಕೀಯ ತಪಾಸಣೆ ಪೂರ್ಣಗೊಂಡಿದ್ದು, ಅವರಿಬ್ಬರನ್ನು ಮೂರನೇ ಹೆಚ್ಚುವರಿ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕುಲಪತಿ ಡಾ.ವಾಲೀಕಾರ ಹಾಗೂ ಹಣಕಾಸು ಅಧಿಕಾರಿ ರಾಜಶ್ರೀ ಇವರ ವೈದ್ಯಕೀಯ ತಪಾಸಣೆ ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆಸ್ಪತ್ರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಡಾ.ವಾಲೀಕಾರ ಅವರು, ಜಾತಿ ರಾಜಕಾರಣದಿಂದಾಗಿ ಇಂತಹ ಪರಿಸ್ಥಿತಿ ಎದುರಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ವಾಲೀಕಾರ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.
ಏನಿದು ಹಗರಣ : ವಿವಿ ಹಗರಣಗಳ ಕುರಿತು ರಾಜ್ಯಪಾಲ ವಜುಭಾಯಿ ವಾಲಾ ನೇಮಕ ಮಾಡಿದ್ದ ಏಕಸದಸ್ಯ ಸಮಿತಿ ನೀಡಿದ ವರದಿಯನ್ವಯ ಕುಲಪತಿ ಸೇರಿ 11 ಜನರ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸುವಂತೆ ವಿವಿ ಕುಲಸಚಿವೆ ಡಾ.ಚಂದ್ರಮಾ ಕಣಗಲಿ ಅವರಿಗೆ ರಾಜ್ಯಪಾಲರು ನಿರ್ದೇಶನ ನೀಡಿದ್ದರು.
ಈ ಸಂಬಂಧ ವಿಚಾರಣೆ ಆರಂಭಿಸಿದ್ದ ಲೋಕಾಯುಕ್ತ ಪೊಲೀಸರು ದಾಖಲೆಗಳ ಸಮೇತ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ನಾಲ್ವರಿಗೂ ನೋಟಿಸ್ ಜಾರಿ ಮಾಡಿದ್ದರು. ಅದರಂತೆ ಮೌಲ್ಯಮಾಪನ ಕುಲಸಚಿವ ಡಾ.ಎಚ್.ಟಿ.ಪೋತೆ, ಹಣಕಾಸು ಅಧಿಕಾರಿ ರಾಜಶ್ರೀ ಹಾಗೂ ಕುಲಪತಿಗಳ ಆಪ್ತ ಸಹಾಯಕ ಎಸ್.ಎಲ್.ಬೀಳಗಿ ವಿಚಾರಣೆಗೆ ಹಾಜರಾಗಿದ್ದರು.
ಕುಲಪತಿ ವಾಲೀಕಾರ್ ಲಿಖಿತವಾಗಿ ತಮ್ಮ ಹೇಳಿಕೆಯನ್ನು ಸಲ್ಲಿಸಿ ಖುದ್ದು ಹಾಜರಾಗಿರಲಿಲ್ಲ. ಆದ್ದರಿಂದ ಸೋಮವಾರ ಸಂಜೆ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.