ಧಾರವಾಡದಲ್ಲಿ ಗೆಲುವಿನ ಸಿಹಿ, ಸೋಲಿನ ಕಹಿ ಯಾರಿಗೆ?
ಧಾರವಾಡ, ಮೇ 17 : ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಬಿಜೆಪಿ 5 ಸ್ಥಾನಗಳಲ್ಲಿ ಜಯಗಳಿಸಿದ್ದು, ಜಿಲ್ಲೆಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.
ಧಾರವಾಡ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ತವರು ಜಿಲ್ಲೆ. 6ನೇ ಬಾರಿಗೆ ಅವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ತವರು ಜಿಲ್ಲೆಯೂ ಹೌದು.
ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ವಿನಯ್ ಕುಲರ್ಣಿ ಮತ್ತು ಸಂತೋಷ್ ಲಾಡ್ ಇಬ್ಬರೂ ಇದೇ ಜಿಲ್ಲೆಯರವರು. ಆದರೆ, ಈ ಇಬ್ಬರೂ ಸಚಿವರು ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಕಾಂಗ್ರೆಸ್ ಜಿಲ್ಲೆಯ 2 ಸ್ಥಾನಗಳಲ್ಲಿ ಮಾತ್ರ ಜಯಗಳಿಸಿದೆ.

ಧಾರವಾಡ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ : ಗೆದ್ದವರು, ಸೋತವರ ವಿವರ ಹೀಗಿದೆ:
| ಕ್ಷೇತ್ರ | ಗೆದ್ದವರು | ಪಕ್ಷ | ಪಡೆದ ಮತಗಳು | ಸೋತವರು | ಪಕ್ಷ | |
| ನವಲಗುಂದ | ಶಂಕರ ಪಾಟೀಲ ಮುನೇನಕೊಪ್ಪ | ಬಿಜೆಪಿ | 44,983 | ಎನ್.ಎಚ್.ಕೋನರಡ್ಡಿ | ಜೆಡಿಎಸ್ | 44,983 |
| ಕುಂದಗೋಳ | ಸಿ.ಎಸ್.ಶಿವಳ್ಳಿ | ಕಾಂಗ್ರೆಸ್ | 64,871 | ಎಸ್.ಐ. ಚಿಕ್ಕನಗೌಡ | ಬಿಜೆಪಿ | 64,237 |
| ಧಾರವಾಡ ಗ್ರಾಮೀಣ | ಅಮೃತ ದೇಸಾಯಿ | ಬಿಜೆಪಿ | 85,123 | ವಿನಯ ಕುಲಕರ್ಣಿ | ಕಾಂಗ್ರೆಸ್ | 64,783 |
| ಹುಬ್ಬಳ್ಳಿ ಧಾರವಾಡ ಪಶ್ಚಿಮ | ಅರವಿಂದ ಬೆಲ್ಲದ್ | ಬಿಜೆಪಿ | 96,848 | ಇಸ್ಮಾಯಿಲ್ ತಮಟಗಾರ | ಕಾಂಗ್ರೆಸ್ | 55,975 |
| ಹುಬ್ಬಳ್ಳಿ ಧಾರವಾಡ ಕೇಂದ್ರ | ಜಗದೀಶ್ ಶೆಟ್ಟರ್ | ಬಿಜೆಪಿ | 75,591 | ಮಹೇಶ ನಾಲವಾಡ | ಕಾಂಗ್ರೆಸ್ | 54,221 |
| ಹುಬ್ಬಳ್ಳಿ ಧಾರವಾಡ ಪೂರ್ವ | ಪ್ರಸಾದ್ ಅಬ್ಬಯ್ಯ | ಕಾಂಗ್ರೆಸ್ | 76,510 | ಚಂದ್ರಶೇಖರ ಗೋಕಾಕ | ಬಿಜೆಪಿ | 76,510 |
| ಕಲಘಟಗಿ | ಸಿ.ಎಂ.ನಿಂಬಣ್ಣವರ | ಬಿಜೆಪಿ | 83,267 | ಸಂತೋಷ ಲಾಡ್ | ಕಾಂಗ್ರೆಸ್ | 57,214 |












Click it and Unblock the Notifications