ಕಲಬುರ್ಗಿ ವಿರೋಧಿಗಳ ವಿಚಾರಣೆ ಆರಂಭಿಸಿದ ಸಿಐಡಿ
ಬೆಂಗಳೂರು, ನವೆಂಬರ್ 19 : ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಕಲಬುರ್ಗಿ ಅವರನ್ನು ವಿರೋಧಿಸುತ್ತಿದ್ದವರ ವಿಚಾರಣೆ ಆರಂಭಿಸಿದ್ದಾರೆ. 2015ರ ಆಗಸ್ಟ್ 30ರಂದು ಕಲಬುರ್ಗಿ ಅವರ ಹತ್ಯೆ ನಡೆದಿತ್ತು.
ಕಲಬುರ್ಗಿ
ಅವರ
ಹತ್ಯೆ
ಪ್ರಕರಣದ
ತನಿಖೆ
ನಡೆಸುತ್ತಿರುವ
ಸಿಐಡಿ
ಅಧಿಕಾರಿಗಳು
ಕಲಬುರ್ಗಿ
ಅವರನ್ನು
ವಿರೋಧಿಸುತ್ತಿದ್ದವರು
ಮತ್ತು
ಸೈದ್ದಾಂತಿಕ
ಭಿನ್ನಾಭಿಪ್ರಾಯ
ಹೊಂದಿದ್ದ
ವ್ಯಕ್ತಿಗಳ
ವಿಚಾರಣೆ
ನಡೆಸುತ್ತಿದ್ದಾರೆ.
ಈಗಾಗಲೇ
ಇಬ್ಬರ
ವಿಚಾರಣೆ
ಪೂರ್ಣಗೊಂಡಿದೆ.
[ಕಲಬುರ್ಗಿ
ಹತ್ಯೆಯ
ತನಿಖೆ
ವಿಳಂಬಕ್ಕೆ
ಯಾರು
ಕಾರಣ?]
ಸಿಐಡಿ ಪೊಲೀಸರು ಕನ್ನಡ ಪ್ರಾಧ್ಯಪಕ ಡಾ.ಎಸ್.ಎಸ್.ಅಂಗಡಿ ಅವರನ್ನು 5 ಗಂಟೆಗಳ ಕಾಲ ವಿಚಾರಣೆ ಧಾರವಾಡದ ಅವರ ಮನೆಯಲ್ಲಿ ವಿಚಾರಣೆ ನಡೆಸಿದ್ದಾರೆ. ಕಲಬುರ್ಗಿ ಅವರ ಸಹೋದ್ಯೋಗಿಯಾಗಿದ್ದ ಮತ್ತೊಬ್ಬರನ್ನು ವಿಚಾರಣೆ ನಡೆಸಿ ಹತ್ಯೆ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. [ಕಲಬುರ್ಗಿ ಹತ್ಯೆಯಾಗಿ 2 ತಿಂಗಳು : ಎತ್ತ ಸಾಗಿದೆ ತನಿಖೆ?]
ಹಲವರ ಪಟ್ಟಿ ರೆಡಿ : ಕಲಬುರ್ಗಿ ಅವರ ಹತ್ಯೆಗೆ ಕಾರಣವೇನಿರಬಹುದು? ಎಂದು ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ನಡೆಸಬೇಕಾದ ಹಲವು ಗಣ್ಯರ ಪಟ್ಟಿಯನ್ನು ಅಧಿಕಾರಿಗಳು ಸಿದ್ಧಪಡಿಸಿಕೊಂಡಿದ್ದು, ಅವರ ಹೆಸರುಗಳನ್ನು ಬಹಿರಂಗಗೊಳಿಸಿಲ್ಲ. [ಕಲಬುರ್ಗಿ ಹತ್ಯೆ ಸುಳಿವು ಕೊಟ್ಟವರಿಗೆ 5 ಲಕ್ಷ ಬಹುಮಾನ]
ಮತ್ತೊಂದು ಆಯಾಮದ ತನಿಖೆ : ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ ಅವರ ಹತ್ಯೆ ಮಾಡಿರುವವರೇ ಕಲಬುರ್ಗಿ ಅವರನ್ನು ಹತ್ಯೆ ಮಾಡಿರಬಹುದು ಎಂದು ಶಂಕಿಸಿರುವ ಸಿಐಡಿ ಅಧಿಕಾರಿಗಳು ಆ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.
ಧಾರವಾಡದ ಕಲ್ಯಾಣ ನಗರದಲ್ಲಿನ ಎಂ.ಎಂ.ಕಲಬುರ್ಗಿ ಅವರ ನಿವಾಸಕ್ಕೆ ವಿದ್ಯಾರ್ಥಿಗಳ ಸೋಗಿನಲ್ಲಿ ಆಗಸ್ಟ್ 30ರ ಬೆಳಗ್ಗೆ 8.40ರ ಸುಮಾರಿಗೆ ಬಂದ ಇಬ್ಬರು ಕಲಬುರ್ಗಿ ಅವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಈ ಹತ್ಯೆ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದ್ದು, ಹಂತಕರ ಸುಳಿವು ಇನ್ನೂ ಪತ್ತೆಯಾಗಿಲ್ಲ.