ಕಲಘಟಗಿ ತಾಲೂಕಿನಲ್ಲಿ ಕರ್ನಾಟಕ ರಾಜ್ಯ ಹೋಲುವ ಹುಣಸೇಮರ
ಧಾರವಾಡ, ನವೆಂಬರ್ 26: ಕಲಘಟಗಿ ತಾಲೂಕಿನಲ್ಲಿ ಕರ್ನಾಟಕ ರಾಜ್ಯ ಹೋಲುವ ಹುಣಸೇಮರ. ಸಾಮಾಜಿಕ ಜಾಲತಾಣದಲ್ಲಿ ವೈರಲ್ಆದ ಫೋಟೋ.
ಕರ್ನಾಟಕ ರಾಜ್ಯದ ನಕಾಶೆಯನ್ನು ಹೋಲುವ ಹುಣಸೆಮರವೊಂದು ಸದ್ಯೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿ ಸಂಚಲನ ಮೂಡಿಸಿದೆ.
ಈ
ರೀತಿಯ
ವಿಚಿತ್ರ
ಹುಣಸೆ
ಮರ
ಎಲ್ಲಿದೆ
ಎಂಬುದು
ಇಷ್ಟು
ದಿನ
ಯಾರಿಗೂ
ಗೊತ್ತಿರಲಿಲ್ಲ.
ಎಲ್ಲರೂ
ನಮ್ಮ
ಊರು
ಹತ್ತಿರ
ಇದೆ
ಎಂದು
ಸಾಮಾಜಿಕ
ಜಾಲತಾಣದಲ್ಲಿ
ಹೇಳಿಕೊಳ್ಳುತ್ತಿದ್ದರು.
ಆದ್ರೆ
ಈಗ
ಈ
ಕರ್ನಾಟಕ
ಮ್ಯಾಪ್
ಹೋಲುವ
ವಿಶಿಷ್ಟ
ಮರ
ಕಲಘಟಗಿ
ತಾಲೂಕಿನ
ಹಿರೇಹೊನ್ನಳ್ಳಿ
ಗ್ರಾಮದಲ್ಲಿದೆ
ಎನ್ನಲಾಗುತ್ತಿದೆ.
ಹೀಗಾಗಿ ಮರದ ಬಗ್ಗೆ ಇರುವ ಸಾಕಷ್ಟು ಅನುಮಾನಗಳಿಗೆ ತೆರೆ ಬಿದಿದ್ದು, ಈಗ ಈ ಹುಣಸೆ ಮರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹುಣಸೆ ಮರದಲ್ಲಿ ಕರ್ನಾಟಕ ನಕಾಶೆ ಮೂಡಿದ್ದು, ನಮ್ಮ ಗ್ರಾಮಕ್ಕೊಂದು ಹೆಮ್ಮೆ ಎನ್ನುತ್ತಾರೆ ಗ್ರಾಮಸ್ಥರು.
ಇನ್ನು ಈ ಮರಕ್ಕೆ ಯಾರೂ ಕೂಡಾ ಯಾವುದೇ ರೀತಿಯ ಮಾರ್ಪಾಡು ಮಾಡಲಾಗಿಲ್ಲ. ಇದು ನಿಸರ್ಗದತ್ತವಾಗಿ ತನ್ನಷ್ಟಕ್ಕೆ ತಾನೆ ಬೆಳೆದಿರುವ ಈ ಹುಣಸೆ ಮರ, ಹೀಗಿರುವಾಗ ಕನ್ನಡಿಗರಿಗೊಂದು ಹೆಮ್ಮೆಯ ಪ್ರತೀಕವಾಗಿದೆ ಎಂದು ಹೇಳುತ್ತಿದ್ದಾರೆ ಗ್ರಾಮಸ್ಥರು.