Get Updates
Get notified of breaking news, exclusive insights, and must-see stories!

ತಾಯಿ ಆಸೆ ಈಡೇರಿಸಿದ ಸಂತೃಪ್ತಿ; 5 ಚಿನ್ನದ ಪದಕ ಪಡೆದ ಎಂಬಿಎ ವಿದ್ಯಾರ್ಥಿನಿ ಮನದಾಳದ ಮಾತು

ದಾವಣಗೆರೆ, ಮಾರ್ಚ್ 24: "ನಾನು ರ್‍ಯಾಂಕ್ ಬರುತ್ತೇನೆ ಎಂದುಕೊಂಡಿರಲಿಲ್ಲ. ಆದರೆ ಐದು ಸ್ವರ್ಣ ಪದಕ ಬಂದಿರುವುದು ಆಶ್ಚರ್ಯದ ಜೊತೆಗೆ ತುಂಬಾನೇ ಖುಷಿಯಾಗಿದೆ. ಮನೆಯಲ್ಲಿನ ಬಡತನದ ಸಂಕಷ್ಟ ಎದುರಿಸಿಯೂ ಈ ಸಾಧನೆ ಮಾಡಿರುವುದು ನನಗಿಂತ ನನ್ನ ತಾಯಿಗೆ ಹೆಚ್ಚು ಖುಷಿಯಾಗಿದೆ. ನಾನು ರ್‍ಯಾಂಕ್ ಬರಬೇಕೆಂಬುದು ನನ್ನ ತಾಯಿಯ ಆಸೆಯಾಗಿತ್ತು. ಅದನ್ನು ಈಡೇರಿಸಿದ ಸಂತೃಪ್ತತೆ ಇದೆ''.

ಇದು 5 ಬಂಗಾರದ ಪದಕ ಗೆದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ಎಂಬಿಎ ವಿದ್ಯಾರ್ಥಿನಿ ಎಸ್.ಎಂ. ಸ್ವಪ್ನಾ ಪ್ರತಿಕ್ರಿಯೆ. ದಾವಣಗೆರೆಯ ವಿದ್ಯಾನಗರದಲ್ಲಿ ವಾಸವಾಗಿರುವ ಮಂಜುನಾಥ್ ಎಸ್. ಎಂ. ಹಾಗೂ ಗಿರಿಜಮ್ಮ ದಂಪತಿಯ ಪುತ್ರಿ ಈಕೆ.

 ಸ್ವರ್ಣ ಪದಕ ಸುದ್ದಿ ಕೇಳುತ್ತಿದ್ದಂತೆ ಸಖತ್ ಥ್ರಿಲ್

ಸ್ವರ್ಣ ಪದಕ ಸುದ್ದಿ ಕೇಳುತ್ತಿದ್ದಂತೆ ಸಖತ್ ಥ್ರಿಲ್

"ನಾನು ಎಂಬಿಎ ವಿಭಾಗದಲ್ಲಿ ಓದಿ ರ್‍ಯಾಂಕ್ ಬರುತ್ತೇನೆ ಎಂದುಕೊಂಡಿರಲಿಲ್ಲ. ನಿರೀಕ್ಷೆಯಂತೂ ಇರಲೇ ಇಲ್ಲ. ನಾನು ರ್‍ಯಾಂಕ್ ಸ್ಟೂಡೆಂಟ್ ಸಹ ಅಲ್ಲ. ಸಾಧಾರಣವಾಗಿ ಓದುತ್ತಿದ್ದ ವಿದ್ಯಾರ್ಥಿನಿ. ಐದು ಸ್ವರ್ಣ ಪದಕ ಬಂದಿದೆ ಎಂಬ ಸುದ್ದಿ ಕೇಳುತ್ತಿದ್ದಂತೆ ಸಖತ್ ಥ್ರಿಲ್ ಆದೆ. ಮೊದಲಿನಿಂದಲೂ ನನ್ನ ತಾಯಿಗೆ ನಾನು ರ್‍ಯಾಂಕ್ ಬರಬೇಕು. ಬೇರೆ ಮಕ್ಕಳಂತೆ ಸಾಧನೆ ಮಾಡಬೇಕೆಂಬೆಲ್ಲಾ ಕನಸಿತ್ತು. ಆದರೆ ಚಿಕ್ಕವಯಸ್ಸಿನಿಂದ ಸಾಧ್ಯವಾಗಿರಲಿಲ್ಲ. ಈಗ ಅದನ್ನು ಸಾಧಿಸಿದ್ದೇನೆ ಎನ್ನುವುದಕ್ಕಿಂತ ನನ್ನ ತಾಯಿ ಆಸೆ ಈಡೇರಿಸಿದ್ದು ತುಂಬಾನೇ ಖುಷಿ ಕೊಟ್ಟಿದೆ,'' ಎಂದು ಹರ್ಷ ವ್ಯಕ್ತಪಡಿಸಿದರು.

 ಉಪನ್ಯಾಸಕರು ಹೇಳಿಕೊಟ್ಟ ಪಾಠ ಸ್ಫೂರ್ತಿ ತಂದವು

ಉಪನ್ಯಾಸಕರು ಹೇಳಿಕೊಟ್ಟ ಪಾಠ ಸ್ಫೂರ್ತಿ ತಂದವು

"ನಾನು ಎಂಬಿಎ ಮೊದಲ ಹಾಗೂ ಎರಡನೇ ಸೆಮಿಸ್ಟರ್ ಓದುವಾಗ ನಾನು ಸಹ ಹೆಚ್ಚಿನ ಅಂಕ ಪಡೆಯಬೇಕು ಎಂಬ ಹಂಬಲ ಬಂತು‌. ನಾನು ಎಂಬಿಎ ಮುಗಿಯುವವರೆಗೆ ಉಪನ್ಯಾಸಕರು ಹೇಳಿಕೊಟ್ಟ ಪಾಠ, ಹೇಳಿದ ಹಿತವಚನಗಳು ನನಗೆ ಸ್ಫೂರ್ತಿ ತಂದವು. ಗುರುಗಳಿಗೆ ಏನೇ ಕೇಳಿದರೂ ಇಲ್ಲ ಎನ್ನುತ್ತಿರಲಿಲ್ಲ. ನನ್ನ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದರು‌. ಜೊತೆಗೆ ಪಾಠ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲಾ ಗೊಂದಲಕ್ಕೆ ಪರಿಹಾರ ಒದಗಿಸಿಕೊಡುತ್ತಿದ್ದರು. ಇದು ನನ್ನ ಸಾಧನೆಗೆ ಕಾರಣವಾದ ಪ್ರಮುಖ ಅಂಶ ಎನ್ನುತ್ತಾರೆ,'' ಸ್ವಪ್ನಾ.

 ಮಧ್ಯರಾತ್ರಿ 1ರಿಂದ 2 ಗಂಟೆಯವರೆಗೆ ಓದುತ್ತಿದ್ದೆ

ಮಧ್ಯರಾತ್ರಿ 1ರಿಂದ 2 ಗಂಟೆಯವರೆಗೆ ಓದುತ್ತಿದ್ದೆ

ನನ್ನ ಅಣ್ಣ ಸಿವಿಲ್ ಎಂಜಿನಿಯರ್ ಆಗಿದ್ದಾರೆ. ರಾತ್ರಿ ಹತ್ತು ಗಂಟೆಯಿಂದ ಮಧ್ಯರಾತ್ರಿ 1ರಿಂದ 2 ಗಂಟೆಯವರೆಗೆ ಓದುತ್ತಿದ್ದೆ. ಒಮ್ಮೊಮ್ಮೆ ಹೆಚ್ಚೂ ಸಮಯ ಓದುತ್ತಿದ್ದೆ. ಪರೀಕ್ಷೆ ವೇಳೆ ತುಂಬಾ ಕಠಿಣ ಶ್ರಮ, ಆಸಕ್ತಿಯಿಂದ ಓದುತ್ತಿದ್ದೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಠ ಇತ್ತು. ಬಿಬಿಎಂ ಸೇರಿದಾಗಲೇ ಏನನ್ನಾದರೂ ಸಾಧನೆ ಮಾಡಬೇಕೆಂಬ ಹಂಬಲ, ತುಡಿತ ಇತ್ತು. ಅದು ಈಗ ಈಡೇರಿದೆ ಎಂದು ಹೇಳಿದ್ದಾರೆ.

Recommended Video

    IPL ನ ಕೆಟ್ಟ ದಾಖಲೆಗಳು: ಬೇಡವಾದ ದಾಖಲೆಯಲ್ಲಿ RCB ಕೂಡ ಇದೆ | Oneindia Kannada
     ಎರಡು ವರ್ಷ ಶೋರೂಂನಲ್ಲಿ ಕೆಲಸಕ್ಕೆ ಸೇರಿಕೊಂಡೆ

    ಎರಡು ವರ್ಷ ಶೋರೂಂನಲ್ಲಿ ಕೆಲಸಕ್ಕೆ ಸೇರಿಕೊಂಡೆ

    "2017ರಲ್ಲಿ ಬಿ.ಕಾಂ ಪೂರೈಸಿದ್ದ ಸ್ವಪ್ನಾ ಮನೆಯಲ್ಲಿನ ಬಡತನದಿಂದಾಗಿ ಓದು ಅರ್ಧಕ್ಕೆ ನಿಲ್ಲಿಸಿದ್ದರು. ದಾವಣಗೆರೆಯ ವಿದ್ಯಾನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಇದ್ದೇವು. ಆಗ ಮನೆಯ ನಿರ್ವಹಣೆಗೆ ಕಷ್ಟ ಆಗಿತ್ತು. ಸಂಸಾರದ ನೌಕೆ ಸಾಗಲು ಹೆಗಲು ಕೊಟ್ಟರು. ಅಣ್ಣನ ಸಂಪಾದನೆಯಿಂದ ಜೀವನ ನಡೆಯುತಿತ್ತು. ಅಣ್ಣನ ದುಡಿಮೆಯಿಂದಲೇ ಅಪ್ಪ, ಅಮ್ಮ, ನನ್ನ ಬದುಕು ಸಾಗಬೇಕಿತ್ತು. ಈ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ಮಹಾಟಿವಿ ಶೋರೂಂನಲ್ಲಿ ಕೆಲಸಕ್ಕೆ ಸೇರಿಕೊಂಡೆ. ಅಲ್ಲಿ ಕ್ಯಾಶಿಯರ್ ಆಗಿದ್ದೆ. ಅಲ್ಲಿ ಮ್ಯಾನೇಜರ್, ನನ್ನ ಮೇಲಿನವರ ಕೆಲಸ ಗಮನಿಸುತ್ತಿದ್ದೆ. ನಾನು ಇವರಂತೆಯೇ ಇಲ್ಲವೇ ಹೆಚ್ಚಿನ ಸಾಧನೆ ಮಾಡಬೇಕೆಂಬ ಹೆಬ್ಬಯಕೆ ಮೂಡಿತು. ಕಠಿಣ ನಿರ್ಧಾರ ಮಾಡಿದೆ. ಜೊತೆಗೆ ಒಂದಿಷ್ಟು ಹಣ ಗಳಿಸಿಕೊಂಡೆ. ಆ ಬಳಿಕ ಅಂದರೆ ಎರಡು ವರ್ಷಗಳ ಬಳಿಕ ಬಿಬಿಎಂಗೆ ಸೇರಿದೆ. ಕಷ್ಟಪಟ್ಟು ಓದಿದ್ದಕ್ಕೆ ಪ್ರತಿಫಲ ಸಿಕ್ಕಿದೆ,'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+