ಭಾರತ್ ಜೋಡೋ ಯಾತ್ರೆಯಲ್ಲಿ ಮುಲಾಯಂ ಸಿಂಗ್ ಯಾದವ್ಗೆ ರಸ್ತೆಯಲ್ಲೇ ನಿಂತು ಗೌರವ
ಚಿತ್ರದುರ್ಗ, ಅ.11: ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಮುನ್ನಡೆಸುತ್ತಿರುವ ರಾಹುಲ್ ಗಾಂಧಿ ಮಂಗಳವಾರ ಸಂಜೆ ಪಕ್ಷದ ಇತರ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಮುಲಾಯಂ ಸಿಂಗ್ ಯಾದವ್ ಅವರಿಗೆ ಯಾತ್ರೆ ವೇಳೆ ರಸ್ತೆ ಮಧ್ಯೆಯೇ ನಿಂತು ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಮಂಗಳವಾರ ಚಿತ್ರದುರ್ಗದಲ್ಲಿ ನಡೆಯುತು. ಈ ವೇಳೆ ರಾಹುಲ್ ಗಾಂಧಿ ಮೆರವಣಿಗೆಯಲ್ಲಿ ಪಕ್ಷದ ಇತರ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಎರಡು ನಿಮಿಷಗಳ ಮೌನ ಆಚರಿಸುವ ಮೂಲಕ ದಿವಂಗತ ಮುಲಾಯಂ ಸಿಂಗ್ ಯಾದವ್ ಅವರಿಗೆ ಗೌರವ ನಮನ ಸಲ್ಲಿಸಿದರು.
ಮೊಡ ಕವಿದ ವಾತಾವರಣದಲ್ಲೇ ಮುಂದುವರಿದ ರಾಹುಲ್ ಗಾಂಧಿ ಭಾರತ್ ಜೋಡೊ ಪಾದಯಾತ್ರೆ,
ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು, ಬೀದಿಗಳಲ್ಲಿ ಮತ್ತು ಟ್ರಕ್ಗಳಲ್ಲಿ ಸಾಲುಗಟ್ಟಿ ನಿಂತು, ದೇಶದ ಅತ್ಯುನ್ನತ ಸಮಾಜವಾದಿ ನಾಯಕರಿಗೆ ಮೌನವಾಗಿ ನಿಂತು ಗೌರವ ಸಮರ್ಪಿಸಿದರು.
congress mulayam singh yadav rahul gandhi chitradurga ಕಾಂಗ್ರೆಸ್ ಮುಲಾಯಂ ಸಿಂಗ್ ಯಾದವ್ ರಾಹುಲ್ ಗಾಂಧಿ ಚಿತ್ರದುರ್ಗ politics
English summary
Congress leaders, workers and yatris observed two minutes silence in the memory of Late Mulayam Singh Yadav at the Bharat Jodo Yatra. Know more.