ಹೊಸವರ್ಷಕ್ಕೆ ಚಿತ್ರದುರ್ಗದ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ..!
ಚಿತ್ರದುರ್ಗ, ಡಿಸೆಂಬರ್ 28 : ಮಧ್ಯ ಕರ್ನಾಟಕದ ಪ್ರವಾಸಿ ತಾಣಗಳಲ್ಲಿ ಚಿತ್ರದುರ್ಗ ಐತಿಹಾಸಿಕ ಕಲ್ಲಿನ ಕೋಟೆಯು ಒಂದಾಗಿದೆ. ರಾಜಧಾನಿ ಬೆಂಗಳೂರಿನಿಂದ ಒಂದೇ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೂಲಕ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಕೋಟೆ ನಾಡು ಪ್ರವಾಸ ಅಮೋಘವಾಗಿದೆ.
ಈ ಕೋಟೆಯು ಐತಿಹಾಸಿಕ ಮತ್ತು ಧಾರ್ಮಿಕ ಪ್ರವಾಸವನ್ನು ಸ್ಥಳವನ್ನು ಹೊಸ ವರ್ಷ ಭಾನುವಾರ ಬಂದಿರುವುದರಿಂದ ಕುಟುಂಬದ ಸದಸ್ಯರೊಂದಿಗೆ ಪ್ರವಾಸ ಕೈಗೊಳ್ಳಬಹುದಾಗಿದೆ.
ಈ ಕೋಟೆ ಬೃಹತ್ ಕಲ್ಲು ಬಂಡೆಗಳಿಂದ ಸುತ್ತುವರಿದಿದೆ. ಬೆಂಗಳೂರಿನ ವಾಯುವ್ಯ ದಿಕ್ಕಿನಲ್ಲಿರುತ್ತದೆ. ಚಿತ್ರದುರ್ಗವು ಡೆಕ್ಕನ್ ಪ್ರಸ್ತಭೂಮಿಯ ಹೃದಯ ಭಾಗದಲ್ಲಿದ್ದು ಈ ಜಿಲ್ಲೆಯ ಶೌರ್ಯ ಮತ್ತು ಪರಾಕ್ರಮಕ್ಕೆ ಹೆಸರಾಗಿದೆ.

ಚಿತ್ರದುರ್ಗದ ಐತಿಹಾಸಿಕ ಕಥೆ ಏನು..?
ಮೂಲತಃ ಈ ನಗರಕ್ಕೆ ಚಿತ್ರಕಲ್ಲು ದುರ್ಗ, ಚಿನ್ಮೂಲಾದ್ರಿ, ಚಿಂತಲಕಲದುರ್ಗ, ಚಿಂತಲಕಲ್ಲು ದುರ್ಗ ಟಿಪ್ಪುಸುಲ್ತಾನನ ಕಾಲದಲ್ಲಿ ಫರ್ರಶಾಬಾದ್ ಎಂದು ಬ್ರಿಟೀಷರ ಕಾಲದಲ್ಲಿ ಚಿಟಲುಡ್ರಗ್ ಎಂದು ಅಂತಿಮವಾಗಿ ಹಾಲಿ ಚಿತ್ರದುರ್ಗ ಎಂದು ಗುರುತಿಸಿಕೊಂಡಿರುತ್ತದೆ. ಕಥೆಯ ಪ್ರಕಾರ, ಕಲ್ಲಿನ ಕೋಟೆಯು ಒಂದು ಕಾಲದಲ್ಲಿ ರಾಕ್ಷಸ ರಾಜ ಹಿಡಿಂಬ ಮತ್ತು ಆತನ ಸಹೋದರಿ ಹಿಡಿಂಬಿಯ ವಾಸಸ್ಥಾನವಾಗಿತ್ತು. ಪಾಂಡವರಲ್ಲಿ ಒಬ್ಬನಾದ ಭೀಮನು ಚಿತ್ರದುರ್ಗದಲ್ಲಿ ಹಿಡಿಂಬೆಯನ್ನು ಕೊಂದನು ಎನ್ನಲಾಗುತ್ತಿದೆ.

ಚಿತ್ರದುರ್ಗ ಕೋಟೆಯತ್ತ ಪ್ರವಾಸಿಗರ ದಂಡು
ಚಿತ್ರದುರ್ಗದ ಪ್ರವಾಸ ಎಂದಾಕ್ಷಣ ತಟ್ಟನೆ ಹೊಳೆಯುವುದು ನಾಗರಹಾವು ಚಿತ್ರ. ಯಾಕೆಂದರೆ ಈ ಸಿನಿಮಾ ಡಾ.ವಿಷ್ಣುವರ್ಧನ್ ಅವರ ಕೈಹಿಡಿದ ಚಿತ್ರವಾಗಿದೆ. ಭಾರತ ದೇಶದ ಪ್ರಬಲವಾದ ಬೆಟ್ಟದ ಕೋಟೆಗಳಲ್ಲಿ ನಮ್ಮ ದುರ್ಗದ ಕೋಟೆ ಕೂಡ ಒಂದು. ಕೋಟೆಯ ಸಮೀಪದಲ್ಲಿ ಹಿಡಿಂಬೇಶ್ವರನಿಗೆ ಮುಡಿಪಾದ ಒಂದು ದೇವಾಲಯವು ಇದೆ.
ಈ ಕೋಟೆ ಒಂದು ಕಾಲದಲ್ಲಿ 19 ದ್ವಾರಗಳು, 35 ರಹಸ್ಯ ದ್ವಾರಗಳು, 4 ಅದೃಶ್ಯ ಪ್ರವೇಶ ದ್ವಾರಗಳು ಮತ್ತು 38 ಪೋಸ್ಟರ್ನ್ ಗೇಟ್ಗಳನ್ನು ಹೊಂದಿದ್ದು. ಆದರೆ ಈಗ ಅದು ಕೆಲವೇ ಕೆಲವು ಅಸ್ತಿತ್ವದಲ್ಲಿದೆ. ಇಲ್ಲಿ ಪ್ರಮುಖವಾಗಿ ಉಯ್ಯಾಲೆ ಕಂಬ, ಓಬವ್ವನ ಕಿಂಡಿ, ಅಕ್ಕ ತಂಗಿ ಹೊಂಡ, ಗೋಪಾಲಸ್ವಾಮಿ ದೇವಸ್ಥಾನ ಈಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ವಾಣಿವಿಲಾಸ ಜಲಾಶಯದ ವಿಶೇಷತೆ ಏನು..?
ಬೆಂಗಳೂರಿನಿಂದ ಚಿತ್ರದುರ್ಗ ಮಾರ್ಗವಾಗಿ ಎಡಭಾಗಕ್ಕೆ ಅಥವಾ ದಾವಣಗೆರೆಯಿಂದ ಬೆಂಗಳೂರು ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೂಲಕ ಬಲ ಭಾಗಕ್ಕೆ ಹೊಸದುರ್ಗ ರಸ್ತೆಯ ಮೂಲಕ ಹಿರಿಯೂರು ನಗರದಿಂದ 18 ಕಿಲೋಮೀಟರ್ಗೆ ಐತಿಹಾಸಿಕ ವಾಣಿ ವಿಲಾಸ ಜಲಾಶಯವನ್ನು ನೋಡಬಹುದಾಗಿದೆ. ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿರಿಯೂರಿನ ತಾಲೂಕಿನ ವಾಣಿವಿಲಾಸ ಪುರ ಗ್ರಾಮದ ಬಳಿ ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಜಲಾಶಯವಾಗಿದೆ. 89 ವರ್ಷಗಳ ಬಳಿಕ ಈ ಡ್ಯಾಂ ಭರ್ತಿಯಾಗಿ ಕೋಡಿ ಬಿದ್ದು ಇತಿಹಾಸ ಸೃಷ್ಟಿಸಿದೆ. 135 ಅಡಿ ಗರಿಷ್ಠ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಪ್ರಸ್ತುತ ಜಲಾಶಯದ ನೀರಿನ ಮಟ್ಟ ಸುಮಾರು 130 ಅಡಿ ಇದೆ. ಇದಲ್ಲದೆ ಹಿನ್ನೀರಿನ ಪ್ರದೇಶದಲ್ಲಿ ಹಾರನ ಕಣಿವೆ ರಂಗನಾಥ ಸ್ವಾಮಿಯ ದರ್ಶನ ಕೂಡ ಪಡೆಯಬಹುದು. ಜಲಾಶಯದ ಕೆಳ ಭಾಗದಲ್ಲಿ ಕಣಿವೆ ಮಾರಮ್ಮ ದೇವಸ್ಥಾನವಾಗಿದೆ.

ಹೊಸವರ್ಷಕ್ಕೆ ಚಿತ್ರದುರ್ಗ ಪ್ರವಾಸ
ನಿಮ್ಮ ಆಧ್ಯಾತ್ಮವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅನೇಕ ಐತಿಹಾಸಿಕ ದೇವಾಲಯಗಳಿಗೆ ಭೇಟಿ ನೀಡಬಹುದು. ಹಿರಿಯೂರು ನಗರದ ದಕ್ಷಿಣ ಕಾಶಿ ಶ್ರೀ ತೇರು ಮಲ್ಲೇಶ್ವರ ದೇವಾಲಯ, ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಕ್ಷೇತ್ರ, ಹೊಳಲ್ಕೆರೆ ಗಣಪತಿ ದೇವಾಲಯ ಸುಂದರವಾದ ಆಲಯಗಳಿವೆ. ಇದಲ್ಲದೆ ಜಿಲ್ಲೆಯ ಸಿರಿಗೆರೆ ಮಠ, ಸಾಣೇಹಳ್ಳಿ ಮಠ , ಚಿತ್ರದುರ್ಗದ ಮುರುಘಾ ಮಠಕ್ಕೆ ಕೂಡ ಭೇಟಿ ನೀಡಬಹುದು.
ಒಟ್ಟಾರೆಯಾಗಿ ಹೊಸವರ್ಷಕ್ಕೆ ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳುವುದಾದರೆ ಈ ಸ್ಥಳಗಳಿಗೆ ಭೇಟಿ ನೀಡಿ ಒಮ್ಮೆ ಪ್ರವಾಸದ ರಸದೌತಣವನ್ನು ಸೇವಿಯಬಹುದು. ಈ ಪ್ರವಾಸಿ ತಾಣಗಳಿಗೆ ನಿಮ್ಮ ಸ್ವಂತ ವಾಹನಗಳಲ್ಲಿ ಬಂದರೆ ಸಮಯ ಉಳಿಸಬಹುದು. ಇಲ್ಲವಾದರೆ ಖಾಸಗಿ ಹಾಗೂ ಸರ್ಕಾರಿ ಬಸ್ ಸೌಲಭ್ಯವಿದೆ. ನಂತರ ಆಟೋಗಳಲ್ಲಿ ಸ್ಥಳಗಳಿಗೆ ತೆರಳಬಹುದು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications