ಸಚಿವರೇ ನೋಡೆಲ್ ಅಧಿಕಾರಿ ನೇಮಕ ಯಾವಾಗ?: ಡಿ.ಸುಧಾಕರ್ಗೆ ಹಿರಿಯೂರು ತಾಲೂಕಿನ ಜನರ ಪ್ರಶ್ನೆ
ಹಿರಿಯೂರು, ಜನವರಿ, 25: ತಾಲೂಕಿನ ವಿವಿಧ ಸರ್ಕಾರಿ ವಸತಿ ಯೋಜನೆಗಳ ಸಾವಿರಾರು ಮನೆಗಳ ಸ್ಥಿತಿ ಗತಿ ನೋಡಿಕೊಳ್ಳುವ ವಸತಿ ನೋಡಲ್ ಅಧಿಕಾರಿ ಹುದ್ದೆ 8 ತಿಂಗಳಿನಿಂದ ಖಾಲಿಯಿದ್ದರೂ, ಆ ಹುದ್ದೆಗೆ ಅಧಿಕಾರಿ ನೇಮಕ ಮಾಡಿಕೊಳ್ಳುವ ಯಾವ ಲಕ್ಷಣಗಳು ಕಾಣುತ್ತಿಲ್ಲ.
ಈಗಾಗಲೇ ಇಬ್ಬರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬದಲಾಗಿದ್ದಾರೆ. ಆದರೂ ಸಹ ವಸತಿ ನೋಡಲ್ ಅಧಿಕಾರಿ ಕುರ್ಚಿ ಧೂಳಿಡಿದಿದೆ. ಈ ಹಿಂದೆ ಇದ್ದ ವಸತಿ ನೋಡಲ್ ಅಧಿಕಾರಿಯನ್ನು ಮೂಲ ಹುದ್ದೆಗೆ ವರ್ಗಾವಣೆ ಮಾಡಿದ್ದೇ ಬಂತು ಅಲ್ಲಿಂದ ಇಲ್ಲಿಯವರೆಗೆ ಆ ಜಾಗಕ್ಕೆ ಹೊಸಬರು ಬಂದಿಲ್ಲ.

2017-18ರ ಪಿಎಂಎವೈಜಿಯ 1800 ಮನೆಗಳ ಅನುದಾನ ನಿಂತಿದ್ದು, ತಾಲೂಕಿನಲ್ಲಿ ಅರ್ಧ ಕಟ್ಟಿದ ಮನೆಗಳ ದರ್ಶನ ಎಲ್ಲಾ ಕಡೆಯೂ ಸಿಗುತ್ತದೆ. ಸರ್ಕಾರದ ಮನೆ ಮಂಜೂರು ಆದ ಖುಷಿಯಲ್ಲಿ ಫಲಾನುಭವಿಗಳು ಇದ್ದ ಗುಡಿಸಲು, ಜೋಪಡಿ ಹಾಗೂ ಹಳೇ ಮನೆಯನ್ನು ಕಿತ್ತು ಹಾಕಿದ್ದು ಈಗ ಗುಡಿಸಲು ಇಲ್ಲ ಮನೆಯೂ ಇಲ್ಲ ಎಂಬಂತಾಗಿದೆ.
ಎನ್ಸಿಸಿ ಸರ್ವೆಯಲ್ಲಿಲ್ಲದವರನ್ನು ಫಲಾನುಭವಿಗಳನ್ನಾಗಿ ಆಯ್ಕೆ ಮಾಡಿದ್ದೇ ಈ ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ ಎನ್ನಲಾಗಿದ್ದು, ಜಾತಿ ಮತ್ತು ಆರ್ಥಿಕ ಗಣತಿಗೆ ಒಳಪಟ್ಟವರನ್ನು ಮಾತ್ರ ಆಯ್ಕೆ ಮಾಡಬೇಕಿತ್ತಂತೆ. ತಾಲೂಕಿನಲ್ಲಿ ಸಾವಿರಾರು ಮನೆಗಳಿಗೆ ಕೆಲವರು ತಳಪಾಯ ಹಾಕಿದ್ದಾರೆ. ಇನ್ನು ಕೆಲವರು ಗೋಡೆ ಕಟ್ಟಿಕೊಂಡು ಬಿಲ್ಗಾಗಿ ದಿನನಿತ್ಯ ಕಛೇರಿಗೆ ಅಲೆದಾಡುತ್ತಿದ್ದಾರೆ.
ಆದರೆ ವಸತಿ ಮನೆಗಳ ಆಯ್ಕೆ, ಪರಿಶೀಲನೆ, ಬಿಲ್ಗಳನ್ನು ಗಮನಿಸಬೇಕಾದ ಅಧಿಕಾರಿ ಹುದ್ದೆಯೇ ಖಾಲಿ ಇರುವುದು ಫಲಾನುಭವಿಗಳಿಗೆ ನುಂಗಲಾರದ ತುತ್ತಾಗಿದೆ. ದೇವರಾಜ ಅರಸು ವಸತಿ ಯೋಜನೆ, ರಾಜೀವ್ ಗಾಂಧಿ ವಸತಿ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ಪಿಎಂಎವೈಜಿ ಆವಾಸ್ ಯೋಜನೆಯ ಮನೆಗಳು, ಅಲೆಮಾರಿ, ಅರೆ ಅಲೆಮಾರಿ ಮನೆಗಳು ಮತ್ತು ಕೆಲ ಹೆಚ್ಚುವರಿ ಮನೆಗಳು ಮಂಜೂರಾಗಿದ್ದು, ಅವುಗಳ ಪ್ರಗತಿಯ ಬಗ್ಗೆ ಜವಾಬ್ದಾರಿ ಹೊರುವವರೇ ಇಲ್ಲದಂತಾಗಿದೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ಡಿ ಸುಧಾಕರ್ ಅವರು ಗಮನಹರಿಸಿ ಖಾಲಿಯಿರುವ ನೋಡಲ್ ಅಧಿಕಾರಿ ಹುದ್ದೆಗೆ ಅಧಿಕಾರಿ ನೇಮಕ ಮಾಡಿ ಸಮಸ್ಯೆ ಬಗೆಹರಿಸುವಂತೆ ಫಲಾನುಭವಿಗಳ ಒತ್ತಾಯಿಸಿದ್ದಾರೆ.
ಈ ಕುರಿತು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ, ಸತೀಶ್ ಕುಮಾರ್ ದೂರವಾಣಿ ಮೂಲಕ ಮಾತನಾಡಿ, ವಸತಿ ಯೋಜನೆಯ ನೋಡಲ್ ಅಧಿಕಾರಿ ಹುದ್ದೆ ಖಾಲಿಯಿದ್ದು, ಈ ಬಗ್ಗೆ ಸಚಿವರ ಗಮನಕ್ಕೆ ತರಲಾಗಿದೆ. ಸದ್ಯದ ಮಟ್ಟಿಗೆ ಮನೆಗಳ ಸ್ಥಿತಿ ಗತಿಯನ್ನು ನಮ್ಮ ಇಲಾಖೆಯ ಕೇಸ್ ವರ್ಕರ್ ನೋಡಿಕೊಳ್ಳುತ್ತಿದ್ದಾರೆ. ಕೆಲವು ತಾಲೂಕುಗಳಲ್ಲಿ ಇಬ್ಬಿಬ್ಬರು ನೋಡಲ್ ಅಧಿಕಾರಿಗಳಿದ್ದಾರೆ. ಅಂತಹ ತಾಲೂಕಿನಿಂದ ಒಬ್ಬರನ್ನು ಕರೆಸಿಕೊಳ್ಳುವ ಯೋಚನೆಯಿದೆ. ಶೀಘ್ರದಲ್ಲೇ ನಮ್ಮ ತಾಲೂಕಿನಲ್ಲಿರುವ ನೋಡಲ್ ಅಧಿಕಾರಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications