ಕಲಬುರಗಿ-ಬೆಂಗಳೂರು ಬಸ್ ಚಿತ್ರದುರ್ಗದಲ್ಲಿ ಪಲ್ಟಿ
ಚಿತ್ರದುರ್ಗ, ಆಗಸ್ಟ್, 16: ಹಿರಿಯೂರು ತಾಲೂಕಿನ ಚನ್ನಮನಹಳ್ಳಿ ಬಳಿ ಮಂಗಳವಾರ ಮುಂಜಾನೆ ಕೆಎಸ್ ಆರ್ ಟಿಸಿ ಬಸ್ ಪಲ್ಟಿ ಆದ ಪರಿಣಾಮ ಬಸ್ಸಿನಲ್ಲಿದ್ದ ಹಲವು ಬಾಲಕರು ಸೇರಿ 30ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿದ್ದಾರೆ.
ಕಲಬುರಗಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎ-32-ಎಫ್- 2075 ಸಂಖ್ಯೆಯ ಕೆ ಎಸ್ ಆರ್ ಟಿಸಿ ಬಸ್ ಪಲ್ಟಿಯಾಗಿದೆ. ಚಾಲಕ ನಿದ್ದೆಯ ಮಂಪರಿನಲ್ಲಿದ್ದ ಕಾರಣ ವೇಗವಾಗಿದ್ದ ಬಸ್ ನಿಯಂತ್ರಣಕ್ಕೆ ಬಂದಿಲ್ಲ. ಗಾಬರಿಗೊಂಡ ಚಾಲಕ ಹೆದ್ದಾರಿಯಿಂದ ಪಕ್ಕ ಬಸ್ ನಿಲ್ಲಿಸಲು ಮುಂದಾದಾಗ ಬಸ್ ಪಲ್ಟಿಯಾಗಿದೆ.[ಚಿತ್ರದುರ್ಗ : ಭೀಕರ ಅಪಘಾತ, 7 ವಿದ್ಯಾರ್ಥಿನಿಯರು ಸಾವು]
ಅಪಘಾತದಲ್ಲಿ 8 ಕ್ಕೂ ಮಕ್ಕಳು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹಿರಿಯೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಐಮಂಗಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಚಿತ್ರದುರ್ಗದಲ್ಲಿ 1,200 ಎಕರೆಯಲ್ಲಿ ಹೆರಿಟೇಜ್ ಹಬ್ ನಿರ್ಮಾಣ]
ಗಾಯಗೊಂಡ ಬಸ್ ಚಾಲಕ ನಾರಾಯಣ, ರುದ್ರಪ್ಪ ರೂಪಾಬಾಯಿ, ರುಕ್ಮಾಬಾಯಿ, ಚಂದ್ರಶೇಖರ್, ಆರೀಫ್ ಅಹಮ್ಮದ್ ಅವರನ್ನು ಹಿರಿಯೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಯಾಣಿಕರೆಲ್ಲಾ ಕಲಬುರಗಿ ಹಾಗೂ ಶಹಾಪುರದವರು ಎಂದು ಹೇಳಲಾಗಿದೆ.