ಮೊಬೈಲ್ ಕಳೆದುಕೊಂಡ ಭಯದಲ್ಲಿ ಆತ್ಮಹತ್ಯೆ ಶರಣಾದ ವಿದ್ಯಾರ್ಥಿ
ಚಿತ್ರದುರ್ಗ, ಜೂನ್ 19 : ಮೊಬೈಲ್ ಕಳ್ಳತನವಾಗಿದ್ದಕ್ಕೆ ಮನೆಯಲ್ಲಿ ಬೈಸಿಕೊಳ್ಳಬೇಕು ಎಂಬ ಆತಂಕದಿಂದ ವಿದ್ಯಾರ್ಥಿಯೊಬ್ಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ನಗರದಲ್ಲಿ ನಡೆದಿದೆ.
ಮಣಿಕಂಠ ಗುತ್ತಕಲ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮಣಿಕಂಠ ಶಾಲೆಗೆ ಮೊಬೈಲ್ ತಂದಿದ್ದ. ಈ ವೇಳೆ ಮೊಬೈಲ್ ಕಳ್ಳತನವಾಗಿದೆ. ಇದರಿಂದ ಭಯಗೊಂಡು ಮನೆಯಲ್ಲಿ ವಿಷಯ ತಿಳಿದರೆ ಪೋಷಕರು ಬೈಯ್ಯುತ್ತಾರೆ ಎಂಬ ಆತಂಕದಿಂದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸ್ಥಳಕ್ಕೆ ಕೋಟೆ ಪೊಲೀಸರು ಮತ್ತು ರೈಲ್ವೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications