ಬರದನಾಡಲ್ಲಿ ಉಕ್ಕಿದ ಜಲ, ಸೋಮೇಶ್ವರ ಸ್ವಾಮಿಯ ಶಕ್ತಿಗೆ ಉಘೇ ಎಂದ ಭಕ್ತರು
ಚಿಕ್ಕಮಗಳೂರು, ನವೆಂಬರ್.15: ನಮಗೆಲ್ಲರಿಗೂ ಗೊತ್ತಿರುವ ಹಾಗೆ ಕಡೂರು ಶಾಶ್ವತ ಬರಗಾಲಕ್ಕೆ ತುತ್ತಾದ ತಾಲೂಕು. ಈ ಭಾಗದಲ್ಲಿ ನೀರಿಗಾಗಿ ಬೋರ್ವೆಲ್ ಕೊರೆಸುವ ಬಹುತೇಕ ಜನರು ಕೊನೆಗೆ ನೀರು ಬಾರದೆ ಹತಾಶರಾಗಿ ಕೈ ಕುಟ್ಟಿ ಕುಳಿತ ಘಟನೆಗಳು ನಮ್ಮ ಕಣ್ಣ ಮುಂದೆ ಸಾಕಷ್ಟಿವೆ.
ಅಂತಹುದರಲ್ಲಿ ಯಾವಾಗಲೋ ಕೊರೆಸಿದ ಬೋರ್ ವೆಲ್ ನಲ್ಲಿ ಜಲ ಊಹೆಗೂ ನಿಲುಕದಷ್ಟು ಉಕ್ಕಿ ಹರಿಯುವುದೆಂದರೆ...? ಹೌದು, ಇದು ಕಟ್ಟುಕಥೆಯಲ್ಲ, ಸತ್ಯ ಕಥೆ.
ಬರದನಾಡು ಕಡೂರಿನಲ್ಲಿ ನೆಲದಿಂದ ಜಲ ಚಿಮ್ಮುತ್ತಿದೆ. ಬೋರ್ವೆಲ್ ನಿಂದ ಚಿಮ್ಮುತ್ತಿರುವ ನೀರನ್ನು ಕಂಡು ಜನ ಚಕಿತರಾಗಿದ್ದಾರೆ. ಅಂದಹಾಗೆ ಈ ಘಟನೆ ನಡೆದದ್ದು
ಕಡೂರು ತಾಲೂಕಿನ ಖಂಡುಗದಹಳ್ಳಿಯಲ್ಲಿ.

ವರ್ಷದ ಹಿಂದೆ ಸೋಮೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಬೋರ್ ವೆಲ್ ಕೊರೆಸಲಾಗಿತ್ತು. ಇಲ್ಲಿ ವರ್ಷದಿಂದ ಅರ್ಧ ಇಂಚು ನೀರು ಬರುತ್ತಿತ್ತು. ಆದರೆ ಈಗ ಏಕಾಏಕಿ ಎರಡು ದಿನಗಳಿಂದ ನಿರಂತರವಾಗಿ ಜಲ ಉಕ್ಕುತ್ತಿದೆ. ಸೋಮೇಶ್ವರ ಸ್ವಾಮಿಯ ಈ ಶಕ್ತಿ ಕಂಡು ಭಕ್ತರು ಉಘೇ ಎನ್ನುತ್ತಿದ್ದಾರೆ.












Click it and Unblock the Notifications