ವಿಡಿಯೋದಲ್ಲಿ ಸೆರೆಯಾಯ್ತು ನವಿಲುಗಳ ಪ್ರೇಮ ಸಂಭಾಷಣೆ!
ಚಿಕ್ಕಮಗಳೂರು, ಮೇ.09:ನವಿಲೊಂದು ತನ್ನ ಪ್ರೇಯಸಿಯನ್ನು ಕರೆಯುತ್ತಿರುವ ವಿರಳಾತಿವಿರಳ ವಿಡಿಯೋ ಕಾಫಿನಾಡಿನ ವೈಲ್ಡ್ ಲೈಫ್ ಛಾಯಾಗ್ರಾಹಕ ಶಿವಕುಮಾರ್ ಎಂಬುವರ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚಿಕ್ಕಮಗಳೂರಿನ ಮುತ್ತೋಡಿ ಅರಣ್ಯದಲ್ಲಿ ಸಂಚರಿಸುವಾಗ ಈ ಅತಿ ಅಪರೂಪದ ವಿಡಿಯೋ ಸೆರೆ ಸಿಕ್ಕಿದೆ. ಮುತ್ತೋಡಿ ಅರಣ್ಯದಲ್ಲಿ ಈಗಾಗಲೇ ಆಗಾಗ ಅಲ್ಪ-ಸ್ವಲ್ಪ ಮಳೆಯಾಗಿದೆ. ಮುತ್ತೋಡಿಯೊಳಗಿನ ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳಲ್ಲಿ ನೀರು ತುಂಬಿದೆ. ನೀರಲ್ಲಿ ಮಿಂದು ಮೇಲೆ ಬಂದಿರುವ ನವಿಲು ಮತ್ತೊಂದು ನವಿಲಿನ ಆಗಮನಕ್ಕೆ ಗೀಳಿಟ್ಟಿದೆ.

ಈ ನವಿಲಿನ ಗೀಳನ್ನು ಆಲಿಸಿದ ಮತ್ತೊಂದು ನವಿಲು ಕೂಡ ಕೂಗುವ ಮೂಲಕ ಬರುವ ಸೂಚನೆ ನೀಡಿದೆ. ಎರಡೂ ನವಿಲುಗಳೂ ಮಾತನಾಡುವ ಪರಿಯೂ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕಾಲ ನವಿಲುಗಳು ಸಂತಾನೋತ್ಪತ್ತಿಯಲ್ಲಿ ತೊಡಗುವ ಸಮಯ. ಹಾಗಾಗಿ, ಒಂದು ನವಿಲು ಮತ್ತೊಂದು ನವಿಲಿಗಾಗಿ ಈ ರೀತಿ ಗೀಳಿಡುತ್ತೆ ಅನ್ನೋದು ಪರಿಸರವಾದಿಗಳ ಮಾತು. ಅದೇನೆ ಇದ್ರು, ಎರಡು ನವಿಲುಗಳ ಸಂಭಾಷಣೆ ಮಾತ್ರ ಅತ್ಯದ್ಭುತ.
More From
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications