ಜೆಡಿಎಸ್ ಸಭೆಯಲ್ಲಿ ಕಣ್ಣೀರಿಟ್ಟ ವಿಧಾನಪರಿಷತ್ ಉಪ ಸಭಾಪತಿ ಧರ್ಮೇಗೌಡ
ಚಿಕ್ಕಮಗಳೂರು, ಫೆಬ್ರವರಿ 28: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರ ಎದುರೇ ವಿಧಾನಪರಿಷತ್ ಉಪ ಸಭಾಪತಿ ಧರ್ಮೇಗೌಡ ಕಣ್ಣೀರು ಹಾಕಿ ಭಾವುಕರಾದ ಘಟನೆ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಇಂದು ಗುರುವಾರ ಕಡೂರಿನಲ್ಲಿ ನಡೆದಿದೆ.
ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಧರ್ಮೇಗೌಡ, ತಮ್ಮ ಕುಟುಂಬಕ್ಕೆ ರಾಜಕೀಯ ಜನ್ಮ ನೀಡಿದವರು ದೇವೇಗೌಡರು. ನಾವು ರಾಜಕೀಯವಾಗಿ ನೆಲಕಚ್ಚಿದ ವೇಳೆ ನಮಗೆ ಅನ್ನ ನೀಡಿದವರು ದೇವೇಗೌಡರು ಎಂದು ಕಣ್ಣೀರು ಹಾಕಿದರು. ಆಗ ವೇದಿಕೆಯಲ್ಲಿದ್ದ ವೈಎಸ್ ವಿ ದತ್ತ, ಧರ್ಮೇಗೌಡರ ಕಣ್ಣೀರು ಒರೆಸಿದ್ದಾರೆ.

ಸಭೆಯಲ್ಲಿ ದೇವೇಗೌಡರು, ಮುಂದಿನ ಚುನಾವಣೆಗೆ ದತ್ತಗೆ ಟಿಕೆಟ್ ನೀಡುವ ಬಗ್ಗೆ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ರೇವಣ್ಣ, ಪ್ರಜ್ವಲ್ ರೇವಣ್ಣ ಹಾಜರಿದ್ದರು.












Click it and Unblock the Notifications