ಚಿಕ್ಕಮಗಳೂರು: ರಾಜ್ಯಮಟ್ಟದ ಗುಡ್ಡಗಾಡು ಓಟದಲ್ಲಿ ಭಾಗವಹಿಸಿದ ಹಿರಿಯರು, ಯುವಕರಿಗೆ ಉತ್ಸಾಹ
ಚಿಕ್ಕಮಗಳೂರು, ಜನವರಿ, 16: ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಯುವಕರು ಸೇರಿದಂತೆ ಹಿರಿಯ ವೃದ್ಧರು ಅತ್ಯಂತ ಕ್ರಿಯಾಶೀಲರಾಗಿ ಭಾಗವಹಿಸಿ. ದೇಹಕ್ಕೆ ವಯಸ್ಸಾಗಿದೆಯೇ ಹೊರತು ಮನಸ್ಸಿಗ ವಯಸ್ಸಾಗಿಲ್ಲ ಎಂದು ಸ್ಪರ್ಧೆಗಿಳಿಯುವ ಮೂಲಕ ಯುವಪೀಳಿಗೆಯನ್ನು ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿರುವುದು ಅತ್ಯಂತ ಸಂತಸದ ವಿಷಯ ಎಂದು ಶಾಸಕ ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಹೇಳಿದರು.
ನಗರದ ಜಿಲ್ಲಾ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ಭಾನುವಾರ (ಜನವರಿ 15) ಜಿಲ್ಲಾಡಳಿತ ವತಿಯಿಂದ ರಾಜ್ಯಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ರಾಜ್ಯಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ಪರ್ಧೆಯಲ್ಲಿ 45 ರಿಂದ 70ರ ಆಸುಪಾಸಿನ ಹಿರಿಯ ನಾಗರೀಕರು ಭಾಗವಹಿಸುತ್ತಿರುವುದು ಅತ್ಯಂತ ಖುಷಿಯ ಸಂಗತಿಯಾಗಿದೆ. ಓಟದ ಸ್ಪರ್ಧೆಯಲ್ಲಿ ಹಿರಿಯ ನಾಗರೀಕರು, ವಿವಿಧ ವಯೋಮಾನದ ಯುವಕ-ಯುವತಿಯರು ಹಾಗೂ ಪುರುಷ-ಮಹಿಳೆಯರಿಗೂ ಅವಕಾಶ ಕಲ್ಪಿಸಲಾಗಿದೆ ಎಂದರು.
40 ವರ್ಷ ರಾಜಕೀಯ ಅನುಭವವಿರುವ ಸಿದ್ದರಾಮಯ್ಯ ಕ್ಷೇತ್ರ ಹುಡುಕುತ್ತಿರುವುದು ದುರಂತ: ಸಿ.ಟಿ.ರವಿ
ಗುಡ್ಡಗಾಡು
ಓಟದ
ಸ್ಪರ್ಧೆಯ
ವಿವರ
ಉಪವಿಭಾಗಾಧಿಕಾರಿ
ಎಚ್.ಡಿ.ರಾಜೇಶ್
ಮಾತನಾಡಿ
ಗುಡ್ಡಗಾಡು
ಓಟದ
ಸ್ಪರ್ಧೆಯ
ಜಿಲ್ಲಾ
ಮಟ್ಟದ
ವಿಭಾಗದಲ್ಲಿ
14
ವರ್ಷದ
ಯುವಕ-ಯುವತಿಯರಿಗೆ
2
ಕಿ.ಮೀ.,
16
ವರ್ಷದವರಿಗೆ
3
ಕಿ.ಮೀ.,
18
ವರ್ಷದವರಿಗೆ
4
ಕಿ.ಮೀ.
ಓಟದಲ್ಲಿ
ಭಾಗವಹಿಸಿದ್ದಾರೆ.
ರಾಜ್ಯ
ಮಟ್ಟದ
ಪುರುಷ,
ಮಹಿಳೆಯರ
ವಿಭಾಗದಲ್ಲಿ
10
ಕಿ.ಮೀ.,
45
ರಿಂದ
55
ವರ್ಷದವರಿಗೆ
2
ಕಿ.ಮೀ.
ಹಾಗೂ
55
ರಿಂದ
ಮುಂದಿನ
ವಯೋ
ಮಾನದವರಿಗೆ
2
ಕಿ.ಮೀ.
ಸ್ಪರ್ಧೆ
ಆಯೋಜಿಸಲಾಗಿದೆ
ಎಂದು
ತಿಳಿಸಿದರು.
ಆಯೋಜಿಸಲಾಗಿದ್ದ
ಕ್ರೀಡೆಗಳ
ಪಟ್ಟಿ
ಉತ್ಸವದ
ಪ್ರಯುಕ್ತ
ಗ್ರಾಮೀಣ
ಕ್ರೀಡೆಗಳಾದ
ಕೆಸರುಗದ್ದೆ
ಓಟ,
ಗಂಡ
ಹೆಂಡತಿಯನ್ನು
ಹೊತ್ತು
ಓಡುವ
ಸ್ಪರ್ಧೆ
ಸೇರಿದಂತೆ
ವಿವಿಧ
ರೀತಿಯ
ಕ್ರೀಡೆಗಳನ್ನು
ನಗರದಲ್ಲಿ
ಆಯೋಜಿಸಲಾಗಿದೆ.
ಚೆಸ್ವೊಂದನ್ನು
ಹೊರತುಪಡಿಸಿ
ವಾಲಿಬಾಲ್,
ಕಬ್ಬಡಿ,
ಯೋಗ,
ಹ್ಯಾಂಡ್ಬಾಲ್
ಹಾಗೂ
ಬಾಸ್ಕೆಲ್
ಬಾಲ್
ಕ್ರೀಡೆಗಳನ್ನು
ಆಯೋಜಿಸಲಾಗಿದೆ
ಎಂದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು, ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ನ ಅಜಯ್ ಕುಮಾರ್, ಅನಂತ್ ಕುಮಾರ್, ಶ್ರೀನಿವಾಸ್, ಪ್ರಾನ್ಸಿಸ್, ಕ್ರೀಡಾಪಟು ಉಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.