ಅವರು ನಮ್ಮ ದೇಶದ ಪ್ರಜೆಗಳಂತೆ ನಡೆದುಕೊಳ್ಳುತ್ತಿಲ್ಲ: ಸಂಸದೆ
ಚಿಕ್ಕಮಗಳೂರು, ಏಪ್ರಿಲ್ 21: ಬೆಂಗಳೂರು, ಮಂಡ್ಯ, ಗದಗ ಮತ್ತು ಬೆಳಗಾವಿಯಲ್ಲಿ ದೆಹಲಿಯ ತಬ್ಲಿಘಿ ಸಭೆಗೆ ಹೋಗಿ ಬಂದವರು ಇನ್ನು ಇದ್ದಾರೆ. ಬೆಳಗಾವಿಯಲ್ಲಿ 70 ಜನ ಅಲ್ಲಿಗೆ ಹೋಗಿದ್ದವರು ಸಿಕ್ಕಿದ್ದಾರೆ ಎಂದು ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.
Recommended Video
ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಯಾರಿಗೂ ಹೊಟ್ಟೆಗೆ ಊಟ ಇಲ್ಲ..! | D V Sadananda Gowda | Krishna Byregowda
ತಬ್ಲಿಘಿ ಸಭೆಗೆ ಹೋಗಿ ಬಂದವರು ನಮ್ಮ ದೇಶದ ಪ್ರಜೆಗಳಂತೆ ನಡೆದುಕೊಳ್ಳುತ್ತಿಲ್ಲ, ಕೊರೊನಾ ವೈರಸ್ ನ್ನು ಉಳಿದವರಿಗೂ ಹಬ್ಬಿಸಬೇಕು ಅನ್ನೋ ವ್ಯವಸ್ಥಿತ ಪಿತೂರಿ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದು ಜಿಹಾದಿ, ಭಯೋತ್ಪಾದಕರ ಮುಂದುವರೆದ ಭಾಗ ಎನ್ನುವ ಅನುಮಾನ ಕಾಡುತ್ತಿದೆ. ಇನ್ನು ಹಲವಾರು ಜನ ಕ್ವಾರೆಂಟೈನ್ ಗೆ ಬಂದಿಲ್ಲ, ಆಸ್ಪತ್ರೆಗೆ ಹೋಗಿಲ್ಲ, ಪೊಲೀಸರಿಗೂ ತಿಳಿಸಿಲ್ಲವೆಂದರು.

ತಕ್ಷಣ ರಾಜ್ಯ ಸರ್ಕಾರ ಜಾಗೃತವಹಿಸಿ, ಅವರೆನ್ನೆಲ್ಲ ಕ್ವಾರೆಂಟೈನ್ ಮಾಡಬೇಕು. ಅವರು ಬರದಿದ್ದಲ್ಲಿ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು, ಹಲ್ಲೆ ಮಾಡಿದವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದರು.












Click it and Unblock the Notifications