Get Updates
Get notified of breaking news, exclusive insights, and must-see stories!

ಕೆಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಲೋಗೋ ರಚಿಸಿ, ಬಹುಮಾನ ಗೆಲ್ಲಿ

ಚಿಕ್ಕಮಗಳೂರು/ ಬೆಂಗಳೂರು, ಫೆಬ್ರವರಿ 14: ಸಾಹಿತಿ ಕೆ.ಪಿ ಪೂರ್ಣಚಂದ್ರತೇಜಸ್ವಿ ಪ್ರತಿಷ್ಠಾನ, ಕೊಟ್ಟಿಗೆಹಾರ ವತಿಯಿಂದ ಸೃಜನಶೀಲ ವಿನ್ಯಾಸಗಾರರು, ಕಲಾವಿದರಿಗೆ ಲೋಗೋ ಸ್ಪರ್ಧೆ ಆಯೋಜಿಸಲಾಗಿದೆ. ಈ ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆ ಹೊರಡಿಸಿದೆ.

ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಖಾಂತರ ನಾಡಿನ ಹೆಸರಾಂತ ಸಾಹಿತಿ ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಬದುಕು ಬರಹ ಹಾಗೂ ಅವರ ಪರಿಸರ ಕಾಳಜಿಯನ್ನು ಯುವಜನಾಂಗಕ್ಕೆ ತಲುಪಿಸುವ ಉದ್ದೇಶದಿಂದ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನವನ್ನು ರಚಿಸಲಾಗಿದೆ.

ಈ ಪ್ರತಿಷ್ಠಾನಕೆ ಲಾಂಛನ(ಲೋಗೋ) ರಚಿಸಲು ರಾಜ್ಯಮಟ್ಟದ ಸ್ಪರ್ಧೆ ಏರ್ಪಡಿಸಿದೆ. ಈ ಲಾಂಛನವು ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಮನೋಧರ್ಮ, ಆಸಕ್ತಿ, ಹವ್ಯಾಸ ಹಾಗೂ ಅವರ ಒಟ್ಟು ಸಾಹಿತ್ಯವನ್ನು ಬಿಂಬಿಸುವಂತಿರಬೇಕು.

KP Poornachandra Tejaswi Trust Logo Competition, Send your entries

ಆಯ್ಕೆ: ಪ್ರತಿಷ್ಠಾನದ ಅಧ್ಯಕ್ಷರು, ಸದಸ್ಯರು ಹಾಗೂ ತಜ್ಞರನ್ನೊಳಗೊಂಡ ಸಮಿತಿಯು ಲಾಂಛನವನ್ನು ಆಯ್ಕೆ ಮಾಡಲಿದ್ದು, ಸಮಿತಿಯ ತೀರ್ಮಾನವೆ ಅಂತಿಮವಾಗಿರುತ್ತದೆ. ಆಯ್ಕೆಯಾಗುವ ಲೋಗೋವನ್ನು ಮುದ್ರಣ, ಜಾಹೀರಾತು ಹಾಗೂ ಡಿಜಿಟಲ್ ವೇದಿಕೆಗಳಲ್ಲಿ ಬಳಸಲಾಗುತ್ತದೆ.

ಬಹುಮಾನ: ಆಯ್ಕೆಯಾದ ಅತ್ಯುತ್ತಮ ರಚನೆಗೆ ಪ್ರತಿಷ್ಠಾನದ ವತಿಯಿಂದ 10,000 ರು ಬಹುಮಾನ ನೀಡಲಾಗುವುದು.

ಆಸಕ್ತರು ಮಾರ್ಚ್ 15, 2019ರೊಳಗೆ ತಮ್ಮ ರಚನೆಗಳನ್ನು ಈ ಕೆಳಕಂಡ ವಿಳಾಸಕ್ಕೆ ಕಳಿಸಬಹುದು.

ಸಹಾಯಕ ನಿರ್ದೇಶಕರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
ಕುವೆಂಪು ಕಲಾಮಂದಿರ
ಚಿಕ್ಕಮಗಳೂರು- 577 101
ದೂರವಾಣಿ: 08262-231372

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+