ದ್ವಾರಮಕ್ಕಿಯಲ್ಲಿ ಕಾಳಿಂಗನ ಆರ್ಭಟ ನೋಡಿ ಬೆಚ್ಚಿಬಿದ್ದ ಉರಗ ತಜ್ಞ ಹರೀಂದ್ರ
ಚಿಕ್ಕಮಗಳೂರು, ಜನವರಿ 03: ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವಾಗ ಎಳೆದಾಡುತ್ತಿದ್ದ ಉರಗ ತಜ್ಞನ ಮೇಲೆಯೇ ಸರ್ಪ ದಾಳಿ ಮಾಡಿದ ಘಟನೆ ಎನ್.ಆರ್.ಪುರ ತಾಲೂಕಿನ ದ್ವಾರಮಕ್ಕಿ ಗ್ರಾಮದಲ್ಲಿ ನಡೆದಿದೆ.
ಘಟನೆ ನಡೆಯುವ ಸಂದರ್ಭದಲ್ಲಿ 11 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ದಿಢೀರನೆ ಸೊಂಟದೆತ್ತರಕ್ಕೆ ಹಾರಿದ್ದು, ಕಾಳಿಂಗನ ಆರ್ಭಟ ನೋಡಿ ಉರಗ ತಜ್ಞ ಹರೀಂದ್ರ ಬೆಚ್ಚಿಬಿದ್ದಿದ್ದಾರೆ. ಅಷ್ಟೇ ಅಲ್ಲ, ಗ್ರಾಮಸ್ಥರು ಕೂಡ ಕಾಳಿಂಗನ ಅಬ್ಬರ ಕಂಡು ಬೆರಗಾಗಿದ್ದಾರೆ.

ಆದರೆ ಕೊನೆಗೂ ಸ್ನೇಕ್ ಹರೀಂದ್ರ ಕಾಳಿಂಗನನ್ನ ಸೆರೆ ಹಿಡಿಯುವಲ್ಲಿ ಯಶಸ್ಚಿಯಾಗಿದ್ದಾರೆ. ಕಾಳಿಂಗ ಸರ್ಪ ಶ್ರೀಧರಗೌಡ ಎಂಬುವರ ತೋಟದಲ್ಲಿ ಪತ್ತೆಯಾಗಿದ್ದು, ಅದನ್ನು ಸೆರೆ ಹಿಡಿದ ನಂತರ ಅರಣ್ಯಕ್ಕೆ ಬಿಡಲಾಗಿದೆ.












Click it and Unblock the Notifications